ನಾವು ಜಗತ್ತಿಗೆ ಬುದ್ಧನನ್ನು ಕೊಟ್ಟ ದೇಶದಿಂದ ಬಂದಿದ್ದೇವೆ, ಶಾಂತಿ ನಮ್ಮ ಆದ್ಯತೆ-ಪ್ರಧಾನಿ ಮೋದಿ

ನ್ಯೂಯಾರ್ಕ್‌ನಲ್ಲಿ ನಡೆದ 74 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಶಾಂತಿ ಸೌಹಾರ್ದತೆ ಭಾರತ ಸಂದೇಶ ಎಂದು ಹೇಳಿದರು.

Last Updated : Sep 27, 2019, 09:28 PM IST
ನಾವು ಜಗತ್ತಿಗೆ ಬುದ್ಧನನ್ನು ಕೊಟ್ಟ ದೇಶದಿಂದ ಬಂದಿದ್ದೇವೆ, ಶಾಂತಿ ನಮ್ಮ ಆದ್ಯತೆ-ಪ್ರಧಾನಿ ಮೋದಿ   title=
Photo courtesy: ANI

ನವದೆಹಲಿ: ನ್ಯೂಯಾರ್ಕ್‌ನಲ್ಲಿ ನಡೆದ 74 ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಶಾಂತಿ ಸೌಹಾರ್ದತೆ ಭಾರತ ಸಂದೇಶ ಎಂದು ಹೇಳಿದರು.

ವಿಶ್ವಸಂಸ್ಥೆ ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಾತನಾಡಿ 'ಈ ವರ್ಷ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣೆಯನ್ನು ನಡೆಸಿತು, ಇದರಲ್ಲಿ ದೇಶದ ಜನರು ನನಗೆ ಮತ್ತು ನನ್ನ ಸರ್ಕಾರಕ್ಕೆ ಮತ ಹಾಕಿದರು, ಇದರಿಂದಾಗಿ ನನಗೆ ಇಲ್ಲಿರಲು ಅವಕಾಶ ಸಿಕ್ಕಿತು" ಎಂದು ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು.ಏಕ ಬಳಕೆಯ ಪ್ಲಾಸ್ಟಿಕ್‌ಗಳ ಸಮಸ್ಯೆಯನ್ನು ಉದ್ದೇಶಿಸಿ ಮಾತನಾಡಿದ ಅವರು,'ನಾನು ಇಲ್ಲಿಗೆ ಬರುತ್ತಿರುವಾಗ, ವಿಶ್ವಸಂಸ್ಥೆಯ ಗೋಡೆಗಳ ಮೇಲೆ' ಇನ್ನು ಮುಂದೆ ಏಕ ಬಳಕೆ ಪ್ಲಾಸ್ಟಿಕ್ ಇಲ್ಲ 'ಎಂದು ಓದಿದ್ದೇನೆ. ನಾವು ಭಾರತದಲ್ಲಿ ದೊಡ್ಡ ಅಭಿಯಾನವನ್ನು ನಡೆಸುತ್ತಿದ್ದೇವೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ.ಏಕ ಬಳಕೆಯ ಪ್ಲಾಸ್ಟಿಕ್ ದೇಶವನ್ನು ಮುಕ್ತಗೊಳಿಸಿ' ಎಂದು ಕರೆ ನೀಡಿದರು. 

'ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವು ವಿಶ್ವದ ಅತಿದೊಡ್ಡ ಸ್ವಚ್ಚತೆ ಅಭಿಯಾನದ ಮೂಲಕ  ಕೇವಲ 5 ವರ್ಷಗಳಲ್ಲಿ 11 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ತನ್ನ ಜನರಿಗೆ ಒದಗಿಸುವ ಮೂಲಕ ಇಡೀ ಜಗತ್ತಿಗೆ ಸ್ಫೂರ್ತಿಯ ಸಂದೇಶವನ್ನು ನೀಡುತ್ತದೆ ಎಂದು ಅವರು ಹೇಳಿದರು.ಇದೇ ವೇಳೆ  2025 ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ದೇಶ ಬದ್ಧವಾಗಿದೆ ಎಂದು ತಿಳಿಸಿದರು. ನಾನು ಕೆಲಸ ಮಾಡುತ್ತಿರುವ ಮತ್ತು ಅಭಿವೃದ್ಧಿಯತ್ತ ಸಾಗುತ್ತಿರುವ ಭಾರತದಂತಹ ಇತರ ದೇಶಗಳನ್ನು ನೋಡಿದಾಗ, ನಮ್ಮ ಪ್ರಯತ್ನಗಳು, ಎಲ್ಲರಿಗೂ ಫಲಿತಾಂಶ ಎಂಬ ನನ್ನ ನಿರ್ಣಯವು ಇನ್ನಷ್ಟು ಬಲಗೊಳ್ಳುತ್ತದೆ' ಎಂದು ಮೋದಿ ಸಾರಿದರು.ಇದೇ ಸಂದರ್ಭದಲ್ಲಿ ಅವರು ತಮ್ಮ ನಮ್ಮ ಧ್ಯೇಯ ವಾಕ್ಯ “ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂದು ಹೇಳಿದರು.

ಭಯೋತ್ಪಾಧನೆಯನ್ನು ಮಟ್ಟ ಹಾಕುವ ವಿಚಾರವಾಗಿ ಪ್ರಸ್ತಾಪಿಸಿದ ಮೋದಿ 'ಭಯೋತ್ಪಾದನೆ ಯಾವುದೇ ಒಂದು ದೇಶಕ್ಕೆ ಸವಾಲಲ್ಲ, ಆದರೆ ಎಲ್ಲಾ ದೇಶಗಳಿಗೆ ಮತ್ತು ಒಟ್ಟಾರೆಯಾಗಿ ಮಾನವಕುಲಕ್ಕೆ ಸವಾಲಾಗಿದೆ ಎಂದು ನಾವು ನಂಬುತ್ತೇವೆ. ಆದ್ದರಿಂದ ಮಾನವೀಯತೆಗಾಗಿ, ಪ್ರಪಂಚದಾದ್ಯಂತ ಭಯೋತ್ಪಾದನೆಯ ವಿರುದ್ಧ ಒಂದಾಗಬೇಕೆಂದು ತಿಳಿಸಿದರು.ಶಾಂತಿ ಸೌಹಾರ್ಧತೆ ಬಗ್ಗೆ ಮಾತನಾಡುತ್ತಾ 'ನಾವು ಬುದ್ಧನಂತಹ ಜನರನ್ನು ಜಗತ್ತಿಗೆ ಕೊಟ್ಟ ದೇಶದಿಂದ ಬಂದಿದ್ದೇವೆ ಹೊರತು ಯುದ್ಧವಲ್ಲ. ನಾವು ಯಾವಾಗಲೂ ಶಾಂತಿಯ ಸಂದೇಶ ನೀಡಿದ್ದೇವೆ.ಸಾಮರಸ್ಯ ಮತ್ತು ಶಾಂತಿ ನಮ್ಮ ಸಂದೇಶ' ಎಂದು ಹೇಳಿದರು.

Trending News