Taliban: ಪಂಜಶೀರ್ ಅನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ ತಾಲಿಬಾನ್‌ಗೆ ದೊಡ್ಡ ಹಿನ್ನಡೆ

ಪಂಜಶೀರ್ ಅನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಮುನ್ನಡೆಯುತ್ತಿರುವ ತಾಲಿಬಾನ್ ದೊಡ್ಡ ಹಿನ್ನಡೆ ಅನುಭವಿಸಿದೆ ಮತ್ತು ಬಂಡುಕೋರರು ಹೆಚ್ಚಿನ ಸಂಖ್ಯೆಯ ತಾಲಿಬಾನ್‌ಗಳನ್ನು ಕೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ನಿರಂತರ ಹೊಂಚುದಾಳಿಯಿಂದ ತಾಲಿಬಾನ್ ಬೆರಗಾಗಿದೆ. 

Written by - Yashaswini V | Last Updated : Aug 23, 2021, 09:57 AM IST
  • ಪಂಜಶೀರ್ ಅನ್ನು ವಶಪಡಿಸಿಕೊಳ್ಳುವುದು ತಾಲಿಬಾನ್‌ಗಳಿಗೆ ಒಂದು ಸವಾಲಾಗಿದೆ
  • ತಾಲಿಬಾನ್ ವಿರುದ್ಧ ತೊಡೆತಟ್ಟಿ ನಿಂತ ಪಂಜಶೀರ್ ಹೋರಾಟಗಾರರು
  • ಈ ದಾಳಿಯಿಂದ ತಾಲಿಬಾನ್ ತೀವ್ರವಾಗಿ ಆಘಾತಗೊಂಡಿದೆ
Taliban: ಪಂಜಶೀರ್ ಅನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ ತಾಲಿಬಾನ್‌ಗೆ ದೊಡ್ಡ ಹಿನ್ನಡೆ title=
Taliban get major setback While moving forward to ​capture Panjshir

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರುದ್ಧದ ಯುದ್ಧ ಇನ್ನೂ ಮುಗಿದಿಲ್ಲ. ಏತನ್ಮಧ್ಯೆ ಪಂಜಶೀರ್ ನ ಹೋರಾಟಗಾರರು ತಾಲಿಬಾನ್‌ಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದ್ದಾರೆ. ಅಫಘಾನ್ ಸೈನ್ಯವು ಅನೇಕ ಪ್ರದೇಶಗಳಲ್ಲಿ ಹೋರಾಟವಿಲ್ಲದೆ ಸೋಲನ್ನು ಒಪ್ಪಿಕೊಂಡಿರಬಹುದು, ಆದರೆ ಪಂಜಶೀರ್ ಅನ್ನು ವಶಪಡಿಸಿಕೊಳ್ಳುವುದು ತಾಲಿಬಾನ್‌ಗಳಿಗೆ ದೊಡ್ಡ ಸವಾಲಾಗಿದೆ. ಏತನ್ಮಧ್ಯೆ, ಪಂಜ್‌ಶಿರ್ ಹೋರಾಟಗಾರರು ಹೆಚ್ಚಿನ ಸಂಖ್ಯೆಯ ತಾಲಿಬಾನಿಗಳನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಈ ಹೊಂಚುದಾಳಿಯ ದಾಳಿಯಲ್ಲಿ ತಾಲಿಬಾನ್‌ಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ಅವರು ಹೇಳುತ್ತಾರೆ.

ಪಂಜಶೀರ್ ನಲ್ಲಿ ತಾಲಿಬಾನ್‌ಗೆ ಭಾರೀ ಹಾನಿ:
ಅಫ್ಘಾನಿಸ್ತಾನದ ಪಂಜಶೀರ್ (Panjshir) ನಲ್ಲಿ ತಾಲಿಬಾನ್ ವಿರುದ್ಧ ನಿರ್ಮಿಸಲಾಗಿದ್ದ ಬ್ಯಾರಿಕೇಡ್ ಅನ್ನು ಹತ್ತಿಕ್ಕಲು ತಾಲಿಬಾನ್ (Taliban) ತನ್ನ ಸುಮಾರು 3000 ಹೋರಾಟಗಾರರನ್ನು ಕಳುಹಿಸಿದೆ. ಪಂಜಶೀರ್ ಕಡೆಗೆ ಹೋಗುವ ಅಂದ್ರಾಬ್ ಕಣಿವೆಯಲ್ಲಿ ತಾಲಿಬಾನ್ ಮತ್ತು ರೆಸಿಸ್ಟೆನ್ಸ್ ಫೋರ್ಸ್ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಹೋರಾಟದಲ್ಲಿ ತಾಲಿಬಾನಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ನಂಬಲಾಗಿದೆ. ಅಹ್ಮದ್ ಮಸೂದ್ ನೇತೃತ್ವದ ರೆಸಿಸ್ಟೆನ್ಸ್ ಫೋರ್ಸ್, ತಾಲಿಬಾನ್ ಜೊತೆ ಕಠಿಣ ಹೋರಾಟ ನಡೆಸುತ್ತಿದೆ.

ಇದನ್ನೂ ಓದಿ- Afghanistan political crisis: G7 ರಾಷ್ಟ್ರಗಳ ತುರ್ತು ಸಭೆ ಕರೆದ ಬ್ರಿಟನ್

ಸರಬರಾಜು ಮಾರ್ಗವನ್ನು ಸಹ ನಿರ್ಬಂಧಿಸಲಾಗಿದೆ:
ಮಾಹಿತಿಯ ಪ್ರಕಾರ, ಕರಿ ಫಾಸಿಹುದ್ ದಿನ್ ಹಫೀಜುಲ್ಲಾ ನೇತೃತ್ವದಲ್ಲಿ ಪಂಜಿಶೀರ್ (Panjshir) ಮೇಲೆ ದಾಳಿ ಮಾಡಲು ತಾಲಿಬಾನ್ ನೂರಾರು ಭಯೋತ್ಪಾದಕರನ್ನು (Terrorist) ಕಳುಹಿಸಿತ್ತು, ಬಾಗ್ಲಾನ್ ಪ್ರಾಂತ್ಯದ ಅಂದ್ರಾಬ್ ಕಣಿವೆಯಲ್ಲಿ ಹೊಂಚು ಹಾಕಿದ್ದ ಪಂಜಶೀರ್ ದಂಗೆಕೋರರು ಅವರ ಮೇಲೆ ದಾಳಿ ಮಾಡಿದರು. ಈ ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯ ತಾಲಿಬಾನ್ ಹೋರಾಟಗಾರರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿ ತಾಲಿಬಾನ್‌ನ ಸರಬರಾಜು ಮಾರ್ಗವನ್ನು ಸಹ ನಿರ್ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಅಮರುಲ್ಲಾ ಸಲೇಹ್ ಟ್ವೀಟ್ :
ಅದೇ ಸಮಯದಲ್ಲಿ, ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಕೂಡ ಈ ದಾಳಿಯ ಕುರಿತು ಟ್ವೀಟ್ ಮಾಡಿದ್ದಾರೆ. ತಾಲಿಬ್‌ಗಳು ಅಂದ್ರಾಬ್ ಕಣಿವೆಯ ಅಂಬುಷ್ ವಲಯದಲ್ಲಿ ಹೊಂಚುದಾಳಿಯಲ್ಲಿ ಸಿಕ್ಕಿಬಿದ್ದ ಒಂದು ದಿನದ ನಂತರ ಪಂಜಶೀರ್ ಪ್ರವೇಶದ್ವಾರದ ಬಳಿ ಪಡೆಗಳನ್ನು ಒಟ್ಟುಗೂಡಿಸಿದರು. ಏತನ್ಮಧ್ಯೆ, ಸಲಾಂಗ್ ಹೆದ್ದಾರಿಯನ್ನು ಪ್ರತಿರೋಧದ ಬಲದಿಂದ ಮುಚ್ಚಲಾಗಿದೆ. ಅವರು ತಪ್ಪಿಸಬೇಕಾದ ಮಾರ್ಗಗಳು ಇವು, ಮತ್ತೆ ಸಿಗೋಣ... ಎಂದು ಬರೆದಿದ್ದಾರೆ.

ಇದನ್ನೂ ಓದಿ- Why Enactment Of CAA Necessary: ಅಫ್ಘಾನಿಸ್ಥಾನದಲ್ಲಿ ಹಿಂದೂ-ಸಿಖ್ಖರ ಪಲಾಯನ ಕುರಿತು ಮೋದಿ ಸರ್ಕಾರ ಹೇಳಿದ್ದೇನು?

ಈ ನಾಯಕನ ಕೈಯಲ್ಲಿ ಆಜ್ಞೆ:
ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದಾಗಿನಿಂದ, ಬಂಡುಕೋರರು ಪಂಜಶೀರ್ ಕಣಿವೆಯಲ್ಲಿ ಸೇರಲು ಆರಂಭಿಸಿದರು. ಪಂಜಶೀರ್ ನಾಯಕ ಅಹ್ಮದ್ ಶಾ ಮಸೂದ್ ಅವರ 32 ವರ್ಷದ ಮಗ ಅಹ್ಮದ್ ಶಾ ಅವರು ತಮ್ಮ ವ್ಯಾಪ್ತಿಯ ಪ್ರದೇಶಗಳನ್ನು ತಾಲಿಬಾನ್ ಗೆ ಹಸ್ತಾಂತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದಾಳಿಯ ನಂತರ ತಾಲಿಬಾನ್‌ಗಳು ಕೋಪೋದ್ರಿಕ್ತರಾಗಿದ್ದಾರೆ ಮತ್ತು ನೂರಾರು ಹೋರಾಟಗಾರರನ್ನು ಪಂಜಶೀರ್ ಕಡೆಗೆ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಗಮನಾರ್ಹವಾಗಿ, ಕಳೆದ ಕೆಲವು ದಿನಗಳಲ್ಲಿ ತಾಲಿಬಾನ್ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಸಾಮಾನ್ಯ ಜನರು ಯಾವುದೇ ಭಯವಿಲ್ಲದೆ ತಾಲಿಬಾನ್ ಆಡಳಿತವನ್ನು ವಿರೋಧಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News