Anjan Das Murder Case: ತಾಯಿ ಸಹಾಯದಿಂದ ತಂದೆಯನ್ನ ಪೀಸ್ ಪೀಸ್ ಮಾಡಿದ ಮಗ: ರುಂಡ ಎಸೆಯುವ ದೃಶ್ಯ ಸೆರೆ

Anjan Das Murder Case: ಒಬ್ಬ ವ್ಯಕ್ತಿಯು ಹೊಲವೊಂದಕ್ಕೆ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಹೋಗುವುದನ್ನು ದೃಶ್ಯದಲ್ಲಿ ಕಾಣಬಹುದು. ದೀಪಕ್ ಎಂಬಾತ ತನ್ನ ಮಲತಂದೆ ಅಂಜನ್ ದಾಸ್ ನನ್ನು ಕೊಲೆ ಮಾಡಿದ್ದು, ಬಳಿಕ ತಾಯಿ ಸಹಾಯದಿಂದ ಮೃತದೇಹವನ್ನು ಪೀಸ್ ಪೀಸ್ ಮಾಡಿದ್ದ. ಇದೀಗ ರುಂಡವನ್ನು ವಿಲೇವಾರಿ ಮಾಡಲು ಹೊಲವೊಂದರ ಸಮೀಪ ತೆರಳಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

Last Updated : Nov 30, 2022, 08:31 AM IST
    • ದೆಹಲಿಯನ್ನು ಬೆಚ್ಚಿ ಬೀಳಿಸುವಂತಹ ಕೃತ್ಯಗಳು ಕಳೆದ ಕೆಲ ದಿನಗಳಿಂದ ನಡೆಯುತ್ತಿದೆ
    • ತಾಯಿ ಮಗ ಸೇರಿ ತಂದೆಯನ್ನೇ ಪೀಸ್ ಪೀಸ್ ಮಾಡಿದ್ದರು
    • ಮೃತದೇಹದ ತುಂಡನ್ನು ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ
Anjan Das Murder Case: ತಾಯಿ ಸಹಾಯದಿಂದ ತಂದೆಯನ್ನ ಪೀಸ್ ಪೀಸ್ ಮಾಡಿದ ಮಗ: ರುಂಡ ಎಸೆಯುವ ದೃಶ್ಯ ಸೆರೆ title=

Anjan Das Murder Case: ರಾಷ್ಟ್ರ ರಾಜಧಾನಿ ದೆಹಲಿಯನ್ನು ಬೆಚ್ಚಿ ಬೀಳಿಸುವಂತಹ ಕೃತ್ಯಗಳು ಕಳೆದ ಕೆಲ ದಿನಗಳಿಂದ ನಡೆಯುತ್ತಿದೆ. ಇತ್ತೀಚೆಗೆ ಶ್ರದ್ಧಾ ವಾಕರ್ ಕೊಲೆ ರಹಸ್ಯ ಬಯಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಕೃತ್ಯ ಮುನ್ನೆಲೆಗೆ ಬಂದಿದೆ. ಪೂರ್ವ ದೆಹಲಿಯಲ್ಲಿ ನಡೆದ ಕೊಲೆಯಲ್ಲಿ ತಾಯಿ ಮಗ ಸೇರಿ ತಂದೆಯನ್ನೇ ಪೀಸ್ ಪೀಸ್ ಮಾಡಿದ್ದರು. ಇದೀಗ ಆರೋಪಿಗಳು ಮೃತದೇಹದ ತುಂಡನ್ನು ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ನಾಲ್ವರು ವಯೋವೃದ್ದರೊಂದಿಗೆ ಮಹಿಳೆಯ ಪ್ರೇಮದಾಟ.! ಐದನೇ ಪ್ರೇಮಿಯ ಎಂಟ್ರಿಯಾಗುತ್ತಿದ್ದಂತೆಯೇ ಬಿತ್ತು ಹೆಣ

ಒಬ್ಬ ವ್ಯಕ್ತಿಯು ಹೊಲವೊಂದಕ್ಕೆ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಹೋಗುವುದನ್ನು ದೃಶ್ಯದಲ್ಲಿ ಕಾಣಬಹುದು. ದೀಪಕ್ ಎಂಬಾತ ತನ್ನ ಮಲತಂದೆ ಅಂಜನ್ ದಾಸ್ ನನ್ನು ಕೊಲೆ ಮಾಡಿದ್ದು, ಬಳಿಕ ತಾಯಿ ಸಹಾಯದಿಂದ ಮೃತದೇಹವನ್ನು ಪೀಸ್ ಪೀಸ್ ಮಾಡಿದ್ದ. ಇದೀಗ ರುಂಡವನ್ನು ವಿಲೇವಾರಿ ಮಾಡಲು ಹೊಲವೊಂದರ ಸಮೀಪ ತೆರಳಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ದೀಪಕ್ ಮತ್ತು ಆತನ ತಾಯಿ ಪೂನಂ ಜೂನ್‌ನಲ್ಲಿ ಎರಡನೇ ಪತಿಯ ಕೊಲೆಗೆ ಯೋಜನೆ ರೂಪಿಸಿದ್ದರು. ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದ ಮುನ್ನೆಲೆಗೆ ಬರುತ್ತಿದ್ದಂತೆ ಅಂಜನ್ ದಾಸ್ ಅವರ ದೇಹವನ್ನು ತುಂಡುಗಳಾಗಿ ಕತ್ತರಿಸಿ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಟ್ಟಿದ್ದರು. ಬಳಿಕ ದೀಪಕ್ ದೆಹಲಿಯ ವಿವಿಧ ಭಾಗಗಳಲ್ಲಿ ಮೃತದೇಹದ ತುಂಡುಗಳನ್ನು ವಿಲೇವಾರಿ ಮಾಡಿದ್ದರು. ಈ ಕೃತ್ಯದ ಚಲನವಲನಗಳು ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ.

 

ಪೂನಂ ತನ್ನ ಪತಿ ತನ್ನ ಆಭರಣಗಳನ್ನು ಮಾರಿ ಹಣವನ್ನು ಬಿಹಾರದಲ್ಲಿ ಎಂಟು ಮಕ್ಕಳೊಂದಿಗೆ ವಾಸಿಸುತ್ತಿದ್ದ ತನ್ನ ಮಾಜಿ ಪತ್ನಿಗೆ ಕಳುಹಿಸಿದ್ದನು ಎಂಬುದನ್ನು ಅರಿತುಕೊಂಡಿದ್ದಳು. ಇದರಿಂದ ಕೋಪಗೊಂಡ ಪೂನಂ ತನ್ನ ಮಗ ದೀಪಕ್ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು.

ಶ್ರದ್ಧಾ ವಾಲ್ಕರ್ ಪ್ರಕರಣದ ತನಿಖೆಯ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ದೆಹಲಿಯ ಕೆಲವು ಭಾಗಗಳಿಂದ ಪತ್ತೆಯಾದ ದೇಹದ ಭಾಗಗಳು ಪುರುಷನದ್ದು ಎಂದು ಕಂಡುಬಂದಿತ್ತು. ಆಗ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರಿಗೆ ಓರ್ವ ಪುರುಷ ಮತ್ತು ಮಹಿಳೆ ಕೆಲದೇಹದ ಭಾಗಗಳನ್ನು ಬಿಸಾಕುತ್ತಿರುವುದು ಕಂಡುಬಂದಿದೆ. ಇದರ ಬಗ್ಗೆ ತನಿಖೆ ನಡೆಸುವಾಗ ಪಾಂಡವನಗರದ ನಿವಾಸಿ ಅಂಜನ್ ದಾಸ್ ಕೆಲ ತಿಂಗಳಿಂದ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಆದರೆ ಅವರ ಕುಟುಂಬದವರು ಯಾವುದೇ ದೂರು ದಾಖಲಿಸಿರಲಿಲ್ಲ.

ಇದನ್ನೂ ಓದಿ: Cobra Video: ಒಂದೇ ಬಾರಿಗೆ ಲೀಟರ್ ನೀರು ಕುಡಿದ ಹಾವು: ಯಾಕೆ ಅಂತ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ!!

ಈ ಬಳಿಕ ಪೊಲೀಸರು ಪೂನಂ ಮತ್ತು ದೀಪಕ್ ಇಬ್ಬರನ್ನೂ ಬಂಧಿಸಿದ್ದಾರೆ. ವಿಚಾರಣೆ ವೇಳೆ ಜೂನ್‌ನಲ್ಲಿ ದಾಸ್‌ನನ್ನು ಕೊಲೆ ಮಾಡಿರುವುದಾಗಿ ಪೂನಂ ಮತ್ತು ದೀಪಕ್ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಇದುವರೆಗೆ ಅಂಜನ್ ದಾಸ್ ಅವರ ದೇಹದ ಆರು ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.

Trending News