Viral Video: ಯಾರೀ ಸೈಕೋ ಕವಿ, ಶ್ರೀರಾಮನ ಕುರಿತು ಆತ ಬರೆದ ಕವಿತೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಕಿಯಂತೆ ಪಸರಿಸುತ್ತಿದೆ!

Viral Video: 'ಸೈಕೋ ಶಾಯರ್ (ಸೈಕೋ ಕವಿ)' ಯೂಟ್ಯೂಬ್ ಚಾನೆಲ್‌ನಿಂದ ಡಿಸೆಂಬರ್ 25 ರಂದು ಅಪ್‌ಲೋಡ್ ಆಗಿರುವ ಈ ಕವಿತೆಯನ್ನು ಇದುವರೆಗೆ 21 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಗಾಗಿದೆ. ಅಷ್ಟಕ್ಕೂ ಈ ಕವಿತೆಯಲ್ಲಿ ಕೋಟ್ಯಂತರ ಜನ ಮೆಚ್ಚುವಂಥದ್ದೇನಿದೆ? ತಿಳಿಯಲು ಈ ಸುದ್ದಿ ಕೊನೆಯವರೆಗೂ ಓದಿ ಮತ್ತು ವೀಡಿಯೋವನ್ನು ನೀವೂ ವೀಕ್ಷಿಸಿ. (Viral News In Kannada)  

Written by - Nitin Tabib | Last Updated : Jan 7, 2024, 04:56 PM IST
  • ಅಭಿಜಿತ್ ಬಾಲಕೃಷ್ಣ ಮುಂಡೆ ಬಗ್ಗೆ ನಮಗೆ ಈಗಾಗಲೇ ತಿಳಿದಿದೆ. ಆದರೆ ಈಗ ಆ ಕವಿತೆಯ ಬಗ್ಗೆಯೂ ತಿಳಿಯೋಣ.
  • ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕವನವನ್ನು ಪ್ರಾರಂಭಿಸುವ ಮೊದಲು ಅಭಿಜೀತ್ ಹೇಳುತ್ತಾರೆ,
  • ರಾಮ್, ನೀವು ಬರೆದ ತಕ್ಷಣ, ಓದಿ, ಕೇಳಿ, ನೋಡಿ, ನಿಮ್ಮ ಮನಸ್ಸಿನಲ್ಲಿ ಬರುವ ಮೊದಲ ಆಲೋಚನೆಯನ್ನು ಇಟ್ಟುಕೊಳ್ಳಿ, ನಾನು ಕೇಳುತ್ತೇನೆ.
Viral Video: ಯಾರೀ ಸೈಕೋ ಕವಿ, ಶ್ರೀರಾಮನ ಕುರಿತು ಆತ ಬರೆದ ಕವಿತೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಕಿಯಂತೆ ಪಸರಿಸುತ್ತಿದೆ!  title=

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಶ್ರೀರಾಮನ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ದಶಕಗಳ ನಂತರ ಇದೀಗ ಮತ್ತೊಮ್ಮೆ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಲಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ನಡುವೆ ಶ್ರೀರಾಮನ ಕುರಿತ ಕವನವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. 'ಸೈಕೋ ಶಾಯರ್' ಯೂಟ್ಯೂಬ್ ಚಾನೆಲ್‌ನಿಂದ ಡಿಸೆಂಬರ್ 25 ರಂದು ಅಪ್‌ಲೋಡ್ ಆಗಿರುವ ಈ ಕವಿತೆಯನ್ನು ಇದುವರೆಗೆ 21 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅಷ್ಟಕ್ಕೂ ಈ ಕವಿತೆಯಲ್ಲಿ ಕೋಟ್ಯಂತರ ಜನ ಮೆಚ್ಚುವಂಥದ್ದೇನಿದೆ? ವೈರಲ್ ಆಗುತ್ತಿರುವ ಈ ಸೈಕೋ ಕವಿ ಯಾರು? ತಿಳಿದುಕೊಳ್ಳೋಣ ಬನ್ನಿ, (Viral News In Kannada)

ಕವಿಯಾದ ಎಂಜಿನಿಯರ್
ಕಳೆದ ಕೆಲವು ದಿನಗಳಿಂದ ಶ್ರೀರಾಮನಿಗಾಗಿ ಬರೆದ ಪದ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಬೆಂಕಿಯಂತೆ ಪಸರಿಸುತ್ತಿದೆ. ಈ ಕವಿತೆಯನ್ನು ಸೈಕೋ ಶಾಯರ್ ಬರೆದು ತಾವೇ ಓದಿದ್ದಾರೆ. ಸೈಕೋ ಶ್ಯಾಯರ್ ಅವರ ನಿಜವಾದ ಹೆಸರು ಅಭಿಜೀತ್ ಬಾಲಕೃಷ್ಣ ಮುಂಡೆ. ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಅಂಬಜೋಗಿ ಗ್ರಾಮದ ನಿವಾಸಿ ಅಭಿಜೀತ್ ಬಾಲ್ಯದಿಂದಲೂ ಕಲೆಯತ್ತ ಆಕರ್ಷಿತರಾಗಿದ್ದರು. ಅಭಿಜೀತ್ ಸರ್ಕಾರಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ಈ ಅವಧಿಯಲ್ಲಿ ಕವನ ಬರೆಯಲು ಆರಂಭಿಸಿದ್ದರು. ಅವರು ಇತಿಹಾಸ ಪುಸ್ತಕಗಳನ್ನೂ ಬರೆದಿದ್ದಾರೆ.

ಇದರಲ್ಲಿ ಶಂಭು ಗಾಥಾ, ಛತ್ರಪತಿ ಸಂಭಾಜಿ ಮಹಾರಾಜ್ ಅವರ ಸಂಪೂರ್ಣ ಜೀವನಚರಿತ್ರೆ ಶಾಮೀಲಾಗಿವೆ. ಈ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವಂತೆ ಯಾರಾದರೂ ಕಾಮಿಡಿ ಮಾಡುತ್ತಿದ್ದರೆ ಅವರೂ ಕವಿತೆ ಮಾಡುತ್ತಾರೆ. ಅದೇ ರೀತಿ, ಅಭಿಜಿತ್ ಬಾಲಕೃಷ್ಣ ಮುಂಡೆ ಮರಾಠಿಯಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿ ಮಾಡುತ್ತಾರೆ ಮತ್ತು ಕವಿತೆಗಳನ್ನು ಸಹ ಬೆರೆಯುತ್ತಾರೆ.

ಇದನ್ನೂ ಓದಿ-Viral Video: ಸಹೋದರನ ಕೂದಲು ಒಣಗಿಸುತ್ತಾ ಫ್ರಾಂಕ್ ಮಾಡಿದ ಯುವತಿ, ನಂತರ ನಡೆದಿದ್ದು ಎದೆ ಝಲ್ ಎನ್ನಿಸುವಂತಿದೆ!

ವೈರಲ್ ಕವನದಲ್ಲೇನಿದೆ? 
ಅಭಿಜಿತ್ ಬಾಲಕೃಷ್ಣ ಮುಂಡೆ ಬಗ್ಗೆ ನಮಗೆ ಈಗಾಗಲೇ ತಿಳಿದಿದೆ. ಆದರೆ ಈಗ ಆ ಕವಿತೆಯ ಬಗ್ಗೆಯೂ ತಿಳಿಯೋಣ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕವನವನ್ನು ಪ್ರಾರಂಭಿಸುವ ಮೊದಲು ಅಭಿಜೀತ್ ಹೇಳುತ್ತಾರೆ, ರಾಮ್, ನೀವು ಬರೆದ ತಕ್ಷಣ, ಓದಿ, ಕೇಳಿ, ನೋಡಿ, ನಿಮ್ಮ ಮನಸ್ಸಿನಲ್ಲಿ ಬರುವ ಮೊದಲ ಆಲೋಚನೆಯನ್ನು ಇಟ್ಟುಕೊಳ್ಳಿ, ನಾನು ಕೇಳುತ್ತೇನೆ. ಇದರ ನಂತರ ಅವರು 1 ರಿಂದ 9 ಎಣಿಕೆಯನ್ನು ಮಾಡುತ್ತಾರೆ ಮತ್ತು ನಂತರ ನಿಲ್ಲುತ್ತಾರೆ. ಇದಾದ ಬಳಿಕ ಅವರು ತಾವು ಬರೆದ ಕವಿತೆಯನ್ನು ಹೇಳಲು ಆರಂಭಿಸುತ್ತಾರೆ. ಯುಟ್ಯೂಬ್ ಸೈಕೋ ಶಾಯರ್ ಚಾನೆಲ್ ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಕೇವಲ ನಿಮಗಾಗಿ ಇಲ್ಲಿದೆ. 

ಇದನ್ನೂ ಓದಿ-Viral Video: ಜಪಾನ್ ಭೂಕಂಪದ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.. ಕಾರಣ? ವಿಡಿಯೋ ನೋಡಿ ಗೊತ್ತಾಗುತ್ತೆ!

ಇಲ್ಲಿದೆ ವೈರಲ್ ವೀಡಿಯೋ-

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News