Viral News: ತೂಕ ಇಳಿಸಿಕೊಳ್ಳಲು ಹೋಗಿ 26 ವರ್ಷಕ್ಕೆ ಸಾವನ್ನಪ್ಪಿದ ಯುವಕ!

Weight loss surgery: ವೈದ್ಯರು ಚಿಕಿತ್ಸೆ ನೀಡಿದ ಕೆಲವೇ ದಿನಗಳಲ್ಲಿ ಹೇಮಚಂದ್ರನ್ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಶಸ್ತ್ರಚಿಕಿತ್ಸೆಗೆ 8 ಲಕ್ಷ ರೂ. ಖರ್ಚು ಮಾಡಿದರೂ ಆತ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾನೆ. ​

Written by - Puttaraj K Alur | Last Updated : Apr 28, 2024, 11:02 AM IST
  • ತೂಕ ಇಳಿಸಿಕೊಳ್ಳುವ ಹೋಗಿ ಪ್ರಾಣ ಕಳೆದುಕೊಂಡ 26ರ ಹರೆಯದ ಯುವಕ
  • ಅಧಿಕ ತೂಕದಿಂದ ಬಳಲುತ್ತಿದ್ದ ಪಾಂಡಿಚೇರಿಯ ಹೇಮಚಂದ್ರನ್ ದುರಂತ ಸಾವು
  • ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಎಂ.ಕೆ.ಸ್ಟಾಲಿನ್‌ ಸರ್ಕಾರದ ಆದೇಶ
Viral News: ತೂಕ ಇಳಿಸಿಕೊಳ್ಳಲು ಹೋಗಿ 26 ವರ್ಷಕ್ಕೆ ಸಾವನ್ನಪ್ಪಿದ ಯುವಕ! title=
ಯುವಕನ ದುರಂತ ಸಾವು..!

ನವದೆಹಲಿ: ತೂಕ ಇಳಿಸಿಕೊಳ್ಳುವ ಹೋಗಿ 26ರ ಹರೆಯದ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅಧಿಕ ತೂಕದಿಂದ ಬಳಲುತ್ತಿದ್ದ ಪಾಂಡಿಚೇರಿಯ ಹೇಮಚಂದ್ರನ್ ಸಾವನ್ನಪ್ಪಿದ ಯುವಕ. ಈತ ಬರೋಬ್ಬರಿ 150 KGಗಿಂತ ಹೆಚ್ಚು ತೂಕವಿದ್ದ. ತನ್ನ ಅಧಿಕ ತೂಕದಿಂದ ಆತ ತೀವ್ರ ಮಾನಸಿಕ ಯಾತನೆ ಅನುಭವಿಸುತ್ತಿದ್ದ. ಗೇಲಿ ಮಾಡುವವರಿಂದಲೂ ಆತ ಸಾಕಷ್ಟ ಬಾರಿ ಅವಮಾನ ಎದುರಿಸಿದ್ದ.  

ಹೀಗಾಗಿ ಹೇಗಾದರೂ ಮಾಡಿ ತೂಕ ಇಳಿಸಿಕೊಳ್ಳಲೇಬೇಕೆಂದು ನಿರ್ಧರಿಸಿದ್ದ. ತಮಿಳುನಾಡಿನ ಚೆನ್ನೈನಲ್ಲಿರುವ ಬಿಪಿ ಜೈನ್ ಆಸ್ಪತ್ರೆಗೆ ತೆರಳಿದ ಆತ ತೂಕ ಇಳಿಸಲು ಚಿಕಿತ್ಸೆ ನೀಡಿ ಅಂತಾ ಹೇಳಿದ್ದ. ತೂಕ ಇಳಿಸಿಕೊಳ್ಳಲು ಶಸ್ತ್ರಚಿಕಿತ್ಸೆ ನಡೆಸುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದರಂತೆ. ಇದಕ್ಕೆ ಒಪ್ಪಿದ ಹೇಮಚಂದ್ರನ್‌ಗೆ ಏಪ್ರಿಲ್‌ 23ರ ಮಂಗಳವಾರ ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಇದನ್ನೂ ಓದಿ: ಸ್ಥಾನವನ್ನು ಬಳಸಿಕೊಂಡು ನಿಮ್ಮ ಮುಂದೆ ಮೂರ್ಖ ಮಾತುಗಳನ್ನು ಹೇಳುತ್ತಿದ್ದಾರೆ ಪ್ರಧಾನಿ : ಪ್ರಿಯಾಂಕಾ ಗಾಂಧಿ

ಆದರೆ ವೈದ್ಯರು ಚಿಕಿತ್ಸೆ ನೀಡಿದ ಕೆಲವೇ ದಿನಗಳಲ್ಲಿ ಹೇಮಚಂದ್ರನ್ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಶಸ್ತ್ರಚಿಕಿತ್ಸೆಗೆ 8 ಲಕ್ಷ ರೂ. ಖರ್ಚು ಮಾಡಿದರೂ ಆತ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾನೆ. ಹೇಮಚಂದ್ರನ್‌ ಸಾವಿಗೆ ಚಿಕಿತ್ಸೆ ನೀಡಿದ ವೈದ್ಯರೇ ಕಾರಣವೆಂದು ಆತನ  ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಪರಿಣಾಮ ಆಸ್ಪತ್ರೆಯ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಎಂ.ಕೆ.ಸ್ಟಾಲಿನ್‌ ಸರ್ಕಾರ ಕೂಡ ಪ್ರತಿಕ್ರಿಯಿಸಿದ್ದು, ಯುವಕನ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಆದೇಶಿಸಿದೆ. ತೂಕ ಇಳಿಸಿಕೊಳ್ಳಲು ಹೋಗಿ ವೈದ್ಯರ ನಿರ್ಲಕ್ಷ್ಯದಿಂದ ಕೇವಲ 26ನೇ ವಯಸ್ಸಿಗೆ ಯುವಕ ಪ್ರಾಣ ಕಳೆದುಕೊಂಡಿದ್ದು ದುರಂತವೇ ಸರಿ.

ಇದನ್ನೂ ಓದಿ: ಕಾಶ್ಮೀರ ಕಣಿವೆಯಲ್ಲಿ ಭಾರೀ ಹಿಮಪಾತ, ಹೈ ಅಲರ್ಟ್ ಜಾರಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News