ಮೀಸಲಾತಿ ಕೊಡದಿದ್ರೆ ಸಿಎಂ ಮನೆ ಮುಂದೆ ಧರಣಿ

  • Zee Media Bureau
  • Aug 19, 2022, 02:16 PM IST

ಆಗಸ್ಟ್ 22ರಂದು ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಕೊಡದಿದ್ದರೆ 23ರಿಂದ ಸಿಎಂ ಮನೆ ಮುಂದೆ ಹೋರಾಟ ಮಾಡುತ್ತೇವೆ ಅಂತ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ರು. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿಯವರೇ ತಮ್ಮ ಮಾತನ್ನು ಉಳಿಸಿಕೊಳ್ಳಬೇಕು. ತಾವು ಹೇಳಿದಂತೆ 22ಕ್ಕೆ ಮೀಸಲಾತಿ ಘೋಷಣೆ ಮಾಡಿದ್ರೆ ನಾವು ಬಂದು ಸನ್ಮಾನ ಮಾಡ್ತೇವೆ. ಕೊಡದಿದ್ದರೆ ತಮ್ಮ ಮನೆ ಮುಂದೇನೆ ಹೋರಾಟ, ಧರಣಿ ಸತ್ಯಾಗ್ರಹ ಪ್ರಾರಂಭ ಮಾಡ್ತೀವಿ ಅಂತ ಹೇಳಿದ್ರು. 

Trending News