ಒಂಟಿ ಮಹಿಳೆ ಮನೆಗೆ ಎಂಟ್ರಿ ಕೊಟ್ಟ ಆಸಾಮಿ ಮಾಡಿದ್ದೇನು ಗೊತ್ತಾ?

  • Zee Media Bureau
  • Jun 22, 2022, 11:18 AM IST

ಒಂಟಿ ಮಹಿಳೆ ಇದ್ದ ಮನೆಗೆ ಓರ್ವ ಯುವಕ ನುಗ್ಗಿ ಗೃಹಿಣಿಗೆ ಚಾಕುವಿನಿಂದ ಚುಚ್ಚಿ ಚಿನ್ನಾಭರಣ ಕಳ್ಳತನ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ರಾಜಾಜಿನಗರದಲ್ಲಿ ನಡೆದಿದೆ. ಕಡೂರು ಪ್ರಥಮ ದರ್ಜೆ ಕಾಲೇಜಿನ ಅಶೋಕ್ ಎಂಬುವರ ಮನೆಯಲ್ಲಿ ದರೋಡೆ ಮಾಡಿದ್ದಾನೆ. ಅಶೋಕ್‌ರವರ ಪತ್ನಿ ನಂದಾರಿಗೆ ಖದೀಮ ಚಾಕುವಿನಿಂದ ಚುಚ್ಚಿ, ಕೈಯನ್ನ ಕಟ್ಟಿ ಹಾಕಿ ಹಾಗೂ ಕೂಗಬಾರದು ಎಂದು ಬಾಯಿಗೆ ಬಟ್ಟೆ ತುಂಬಿ, ಪ್ಲಾಸ್ಟರ್ ಹಾಕಿದ್ದಾನೆ. ಚಿನ್ನದ ತಾಳಿ ಸರ, 3 ಚಿನ್ನದ ಉಂಗುರ, 5000 ನಗದು ದೋಚಿ ಯುವಕ ಪರಾರಿಯಗಿದ್ದಾನೆ.

Trending News