Lok Sabha Elections 2024: ಮತದಾನದಲ್ಲಿ ಎರಡು ಹಂತದ ಪರಿಶೀಲನೆ, ಬಿಜೆಪಿಯ ಈ ಬೇಡಿಕೆಯ ಹಿಂದಿನ ಲೆಕ್ಕಾಚಾರ ಏನು?

Lok Sabha Elections 2024: ಮಾರ್ಚ್ ತಿಂಗಳ ಆರಂಭದಲ್ಲಿ ಲೋಕಸಭೆ ಚುನಾವಣೆ 2024 ರಣಕಹಳೆ ಮೊಳಗುವ ಸಾಧ್ಯತೆ ಇದೆ. ಚುನಾವಣಾ ಆಯೋಗ ತನ್ನ ಸಿದ್ಧತೆಯ ಕೊನೆಯ ಹಂತದಲ್ಲಿದೆ. ಏತನ್ಮಧ್ಯೆ ಭಾರತೀಯ ಜನತಾ ಪಕ್ಷ ಚುನಾವಣಾ ಆಯೋಗಕ್ಕೆ ಮತ ಕೇಂದ್ರಗಳಲ್ಲಿ ಟು ಸ್ಟೆಪ್ ವೇರಿಫಿಕೇಶನ್ ಮಾಡಿಸುವ ಬೇಡಿಕೆ ಇಟ್ಟಿದೆ. ಏನಿದು ಎರಡು ಹಂತದ ಪರಿಶೀಲನೆ ತಿಳಿದುಕೊಳ್ಳೋಣ ಬನ್ನಿ, (LS Elections 2024 News In Kannada)  

Written by - Nitin Tabib | Last Updated : Feb 29, 2024, 01:55 PM IST
  • ಈ ನಿಯೋಗದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಅರುಣ್ ಸಿಂಗ್, ಓಂ ಪಾಠಕ್ ಸೇರಿದಂತೆ
  • ಹಲವು ಪಕ್ಷದ ಮುಖಂಡರು ಶಾಮೀಲಾಗಿದ್ದರು, ಮತದಾರರ ಎರಡು ಹಂತದ ಪರಿಶೀಲನೆ
  • ಇಂದಿನ ಅಗತ್ಯವಾಗಿದೆ ಎಂದು ಚುನಾವಣಾ ಆಯೋಗಕ್ಕೆ ಮನವಿ ಪತ್ರವನ್ನೂ ಕೂಡ ಅವರು ಸಲ್ಲಿಸಿದ್ದಾರೆ.
Lok Sabha Elections 2024: ಮತದಾನದಲ್ಲಿ ಎರಡು ಹಂತದ ಪರಿಶೀಲನೆ, ಬಿಜೆಪಿಯ ಈ ಬೇಡಿಕೆಯ ಹಿಂದಿನ ಲೆಕ್ಕಾಚಾರ ಏನು? title=

Lok Sabha Elections 2024: ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆಗಳು ಬರಲಿದ್ದು, . ಚುನಾವಣಾ ಆಯೋಗ (ಇಸಿ) ಮಾರ್ಚ್‌ನಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಒಂದೇ ಒಂದು ಮತದ ಶಕ್ತಿ ಎಂದು ಇಡೀ ಜಗತ್ತಿಗೆ ತಿಳಿದಿದೆ. ಇಂತಹ ಸ್ಥಿತಿಯಲ್ಲಿ, ಹೀಗಿರುವಾಗ ಮೊದಲ ಬಾರಿಗೆ ಮತದಾನ ಮಾಡುವವರ ಜೊತೆಗೆ ಮತ ಚಲಾಯಿಸಲು ನೀವೂ ಕೂಡ ಉತ್ಸುಕರಾಗಿರಬಹುದು.  ನಮ್ಮಲ್ಲಿ ಬಹುತೇಕ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರ ಹೆಸರನ್ನು ಪರಿಶೀಲಿಸಿರಬಹುದು. ಏತನ್ಮಧ್ಯೆ ಸಾರ್ವತ್ರಿಕ ಚುನಾವಣೆಯನ್ನು ನ್ಯಾಯಸಮ್ಮತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಚುನಾವಣಾ ಆಯೋಗಕ್ಕೆ ಮತದಾರರನ್ನು ಎರಡು ಹಂತದ ಪರಿಶೀಲನೆಗೆ ಒಳಬಡಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. LS Elections 2024 News 

ಮತದಾನದಲ್ಲಿ ಅಕ್ರಮ ತಡೆಯಲು ಸಲಹೆ
ವಾಸ್ತವದಲ್ಲಿ ಮತಗಟ್ಟೆಗೆ ಪ್ರವೇಶಿಸುವ ಮೊದಲು, ದೇಶದ ಎಲ್ಲಾ ಮತದಾರರ ಗುರುತಿನ ಎರಡು ಹಂತದ ಪರಿಶೀಲನೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಉತ್ತಮ ಮತ್ತು ಬಲಿಷ್ಠ ವ್ಯವಸ್ಥೆಗಳ ಹೊರತಾಗಿಯೂ ಮತದಾನದ ದಿನದಂದು ರಿಗ್ಗಿಂಗ್ ಬಗ್ಗೆ ದೂರುಗಳು ಹೆಚ್ಚಾಗಿ ಬರುತ್ತವೆ ಎಂದು ಬಿಜೆಪಿ ನಾಯಕರ ನಿಯೋಗ ಆಯೋಗಕ್ಕೆ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಬೇಡಿಕೆಗಳ ಬಗ್ಗೆ ಬಹಳ ನಿರೀಕ್ಷೆಯೊಂದಿಗೆ ಆಯೋಗದ ಮುಂದೆ ಬಂದಿದ್ದಾರೆ.

ಈ ನಿಯೋಗದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಅರುಣ್ ಸಿಂಗ್, ಓಂ ಪಾಠಕ್ ಸೇರಿದಂತೆ ಹಲವು ಪಕ್ಷದ ಮುಖಂಡರು ಶಾಮೀಲಾಗಿದ್ದರು, ಮತದಾರರ ಎರಡು ಹಂತದ ಪರಿಶೀಲನೆ ಇಂದಿನ ಅಗತ್ಯವಾಗಿದೆ ಎಂದು ಚುನಾವಣಾ ಆಯೋಗಕ್ಕೆ ಮನವಿ ಪತ್ರವನ್ನೂ ಕೂಡ ಅವರು ಸಲ್ಲಿಸಿದ್ದಾರೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ, 'ನ್ಯಾಯಯುತ ಚುನಾವಣೆ ನಡೆಸಲು, ಮತದಾರರ ಎರಡು ಹಂತದ ಗುರುತಿನ ಸಂಪೂರ್ಣ ಪುರಾವೆ ದಾಖಲೆ ಆಯೋಗ ಮತ್ತು ರಾಜಕೀಯ ಪಕ್ಷಗಳೆರಡರಲ್ಲೂ ಲಭ್ಯವಿರಬೇಕು. ಈ ಕುರಿತು ಮಾತನಾಡಿಯರುವ ಅವರು, 'ಈಗಿನ ವೀಡಿಯೋಗ್ರಫಿ ಮತ್ತು 50% ಮತದಾನ ಕೇಂದ್ರಗಳಲ್ಲಿ ಲೈವ್ ವೆಬ್‌ಕಾಸ್ಟಿಂಗ್ ವ್ಯವಸ್ಥೆಯ ಬದಲಿಗೆ, ಆಯೋಗವು ಇಡೀ ದೇಶದಲ್ಲಿ ಇದನ್ನು ಜಾರಿಗೆ ತರಬೇಕು' ಎಂದು ಹೇಳಿದ್ದಾರೆ. ಮತದಾನದ ಸಮಯದಲ್ಲಿ ಎಲ್ಲಾ ರಾಜ್ಯಗಳ ಶೇ.100 ರಷ್ಟು  ಮತದಾನ ಕೇಂದ್ರಗಳ ವೀಡಿಯೊಗ್ರಫಿ ಮತ್ತು ಚುನಾವಣಾ ಕಾರ್ಯಕ್ರಮಗಳ ಲೈವ್ ವೆಬ್‌ಕಾಸ್ಟಿಂಗ್ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಇದನ್ನೂ ಓದಿ-

ಎರಡು ಹಂತದ ಪರಿಶೀಲನೆಯನ್ನು ಹೇಗೆ ಮಾಡಲಾಗುತ್ತದೆ?
ಮತಗಟ್ಟೆಗೆ ಪ್ರವೇಶಿಸುವ ಮೊದಲು ಮತದಾರರ ಭಾವಚಿತ್ರವನ್ನು ತೆಗೆದುಕೊಳ್ಳಬೇಕು ಮತ್ತು ಅದನ್ನು ಮತದಾರರು ಹೊಂದಿರುವ ಗುರುತಿನ ಚೀಟಿಯೊಂದಿಗೆ ಹೊಂದಾಣಿಕೆ ಮಾಡಬೇಕು ಎಂಬುದು ಬಿಜೆಪಿ ಚುನಾವಣಾ ಆಯೋಗಕ್ಕೆ ಆಗ್ರಹಿಸಿರುವ ಎರಡು ಹಂತದ ಪರಿಶೀಲನೆ ಪ್ರಕ್ರಿಯೆಯಾಗಿದೆ. ನಂತರ ಮತಗಟ್ಟೆಯಲ್ಲಿ ನಿಯೋಜನೆಗೊಂಡ ಅಧಿಕಾರಿ ಮತ್ತು ಮತಗಟ್ಟೆ ಸಿಬ್ಬಂದಿ ಹೆಸರುಗಳು ಮತ್ತು ಇತರ ಗುರುತಿನ ಚೀಟಿಗಳು ಅಂದರೆ ಬೂತ್‌ನಲ್ಲಿರುವ ಮತದಾರರ ಪಟ್ಟಿಗೆ ಅನುಗುಣವಾಗಿ ಐಡಿಯೊಂದಿಗೆ ಹೊಂದಾಣಿಕೆಯಾಗುವುದರಿಂದ ಅದೇ ದಿನಚರಿಯನ್ನು ಅನುಸರಿಸಬೇಕಾಗಲಿದೆ.

ಇಯನ್ನೂ ಓದಿ-

ಈ ಸಲಹೆಗಳನ್ನು ಕೂಡ ನೀಡಲಾಗಿದೆ
ಎತ್ತರದ ವಸತಿ ಸಂಘಗಳಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಬಿಜೆಪಿ ಆಯೋಗಕ್ಕೆ ಸಲಹೆ ನೀಡಿದೆ. ಆದರೂ ಕೂಡ, ಮತದಾರರು ಈ ಬಾರಿ ಕೆಲವು ವಿಶಿಷ್ಟ ರೀತಿಯ ಮತದಾನ ಕೇಂದ್ರಗಳನ್ನು ನೋಡಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನು ಮಾಡುವುದರ ಹಿಂದೆ, ಎತ್ತರದ ಟವರ್‌ಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸುವುದರಿಂದ ಮತದಾನದ ಶೇಕಡಾವಾರು ಸುಧಾರಿಸುತ್ತದೆ ಎಂಬುದು ಬಿಜೆಪಿ ನಾಯಕರ ಅಭಿಪ್ರಾಯವಾಗಿದೆ. ಇಂತಹ ಕೆಲವು ಸಲಹೆಗಳನ್ನು ಬಿಜೆಪಿ ಈ ಬಾರಿ ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಜಾರಿಗೆ ತರಲು ಆಯೋಗಕ್ಕೆ ಸಲಹೆ ನೀಡಿದೆ.

ಇದನ್ನೂ ನೋಡಿ-
 

Trending News