Kranti Movie Review: ಕ್ರಾಂತಿ ಸಿನಿಮಾದಲ್ಲಿ ಡಿ ಬಾಸ್ ದರ್ಶನ್ ತುಂಬಾ ಡಿಫರೆಂಟ್ ಆಗೇ ಕಾಣಿಸಿದ್ದಾರೆ. ಪಾತ್ರದ ಒಳ ಹೊಕ್ಕಿ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಮ್ಮ ನೆಲ, ಭಾಷೆ, ರಾಜ್ಯದ ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಚಿತ್ರದ ಕಥೆ ಹೆಣೆಯಲಾಗಿದ್ದು ಒಂದು ಉತ್ತಮ ಸಂದೇಶ ಸಾರುವ ಸಿನಿಮಾ ಇದಾಗಿದೆ.
ಬಹು ದಿನಗಳ ನಂತರ ಬಾಲಿವುಡ್ ಕಿಂಗ್ ಖಾನ್ ಶಾರುಖ್ ʼಪಠಾಣ್ʼ ಮೂಲಕ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಬಾದ್ ಶಾ ಸಿನಿಮಾದ ಆನ್ಲೈನ್ ಟಿಕೆಟ್ಗಳ ಖರೀದಿ ಜೋರಾಗಿದೆ. ಕರ್ನಾಟಕದಲ್ಲಿಯೂ ಶಾರುಖ್ ಖಾನ್ಗೆ ಪ್ಯಾನ್ಸ್ ಪಾಲೋಯಿಂಗ್ ಇದೆ. ಇದರ ಬೆನ್ನಲ್ಲೆ ಬಾಕ್ಸ್ ಆಫೀಸ್ ಸುಲ್ತಾನ ನಟ ದರ್ಶನ್ ಅವರ ಕ್ರಾಂತಿ ಸಿನಿಮಾ 26 ರಂದು ಬಿಡುಗಡೆಯಾಗಲಿದ್ದು, ಒಂದು ದಿನದ ಮುಂಚೆ ಅಂದ್ರೆ 25 ರಂದು ಬಿಡುಗಡೆಯಾಗುವ ಪಠಾಣ್ ಸಿನಿಮಾಗೆ ನೇರ ಪೈಪೋಟಿ ನೀಡುತ್ತಾ ಎನ್ನುವ ಕುತೂಹಲ ಮೂಡಿಸಿದೆ.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಯಾಗಿದ್ದ ಅಭಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ನೆಚ್ಚಿನ ಅಭಿಮಾನಿಯ ಅಗಲಿಕೆಗೆ ದಚ್ಚು ಕಂಬನಿ ಮಿಡಿದ್ದಾರೆ. ಅಲ್ಲದೆ, ತಮ್ಮ ಪ್ಯಾನ್ಸ್ಗೆ ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ. ಅಭಿ ʼದಾಸʼನ ಕಟ್ಟಾಮಾನಿಯಾಗಿದ್ದರು. ʼಯಜಮಾನʼನಿಗಾಗಿ ಗುಡಿ ಕಟ್ಟಿಸುವುದಾಗಿ ಹೇಳಿದ್ದರು.
Kranti New Song : ಕ್ರಾಂತಿಯ ಮೂರು ಹಾಡುಗಳನ್ನು ಬಿಡುಗಡೆ ಮಾಡಿರುವ ದರ್ಶನ್ ಈಗ ನಾಲ್ಕನೇ ಹಾಡನ್ನು ತುಮಕೂರಿನಲ್ಲಿ ಜನವರಿ 14 ರಂದು ಬಿಡುಗಡೆ ಮಾಡಿದ್ದಾರೆ. ಕ್ರಾಂತಿಯ ಈ ಹಾಡು ಫುಲ್ ಮಾಸ್ ಆಗಿದೆ. ತುಮಕೂರಿನ ಬಿಎಚ್ ರಸ್ತೆ, ಶಿವಕುಮಾರ ಸ್ವಾಮಿ ವೃತ್ತದಲ್ಲಿ ಡೋಂಟ್ ಮೆಸ್ ವಿತ್ ಹಿಮ್ ಹಾಡು ಬಿಡುಗಡೆ ಮಾಡಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.