ಕಳೆದ ವಾರದಿಂದ, ಕರೋನದ ಸಕ್ರಿಯ ಪ್ರಕರಣಗಳು ದ್ವಿಗುಣಗೊಂಡಿವೆ ಮತ್ತು ಅವುಗಳ ಸಂಖ್ಯೆ 2486 ಕ್ಕೆ ಏರಿದೆ ಎಂದು ಸೀಶೆಲ್ಸ್ ಆರೋಗ್ಯ ಸಚಿವಾಲಯ ಹೇಳಿದೆ. ಈ ಪೈಕಿ 37 ಪ್ರತಿಶತದಷ್ಟು ಜನರು ಕರೋನಾ ಲಸಿಕೆಯ ಎರಡೂ ಪ್ರಮಾಣ ಪಡೆದಿದ್ದಾರೆ ಎಂದು ಹೇಳಲಾಗಿದೆ. ಗಮನಾರ್ಹವಾಗಿ ಇಲ್ಲಿ ಚೀನೀ ಲಸಿಕೆಯನ್ನು ಹೆಚ್ಚಾಗಿ ಬಳಸಲಾಗಿದೆ.
ಕರೋನಾ ಯುಗದಲ್ಲಿ ಜನರ ಅನುಕೂಲಕ್ಕಾಗಿ, Paytm ಬಹಳ ವಿಶೇಷವಾದ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರ ಸಹಾಯದಿಂದ ನಿಮ್ಮ ಪ್ರದೇಶದಲ್ಲಿ COVID-19 ಲಸಿಕೆಯ ಸ್ಲಾಟ್ ಅನ್ನು ನೀವು ಪರಿಶೀಲಿಸಬಹುದು.
ವಿರಾಟ್ ಕೊಹ್ಲಿ ಸೋಮವಾರ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ತಾವು ಕರೋನಾ ಲಸಿಕೆ ಹಾಕಿಸಿಕೊಂಡಿರುವ ಮಾಹಿತಿಯನ್ನು ಕೊಹ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ ಎಲ್ಲರೂ ಶೀಘ್ರ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಕರೋನಾ ವೈರಸ್ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಕೋವಿಶೀಲ್ಡ್ ಲಸಿಕೆ ಪಡೆಯಲು ಬಯಸುವುದಾದರೆ, ಇದಕ್ಕಾಗಿ ನೀವು ಪ್ರತಿ ಡೋಸ್ಗೆ 700 ರಿಂದ 900 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಕೋವಾಕ್ಸಿನ್ ಲಸಿಕೆಯ ಪ್ರತೀ ಡೋಸ್ ಗೆ 1250 ರಿಂದ 1500 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.
Covid-19 Post Recovery Tests - ಅಪಾಯಕಾರಿ ಕೊರೊನಾ ವೈರಸ್ (Coronavirus) ನಿಂದ ಚೇತರಿಸಿಕೊಂಡ ರೋಗಿಗಳಿಗೆ ಆರೋಗ್ಯ ತಜ್ಞರು ಕೆಲ ವಿಶೇಷ ಸಲಹೆಗಳನ್ನು ಇತ್ತೀಚೆಗಷ್ಟೇ ಜಾರಿಗೊಳಿಸಿದ್ದಾರೆ.
Corona Vaccine New Guidelines - ಕೊರೊನಾ ವ್ಯಾಕ್ಸಿನ್ ಅಡ್ಡಪರಿಣಾಮಗಳ ಕುರಿತು ಜನರಲ್ಲಿ ಹಲವು ರೀತಿಯ ಶಂಕೆಗಳಿರುವ ಕಾರಣ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮೀನಾಮೇಷ ಎಣಿಸುತ್ತಿದ್ದಾರೆ.
ಕರ್ನಾಟಕ ಮತ್ತು ಕನ್ನಡಿಗರಿಗೆ ತಾರತಮ್ಯವಾಗುತ್ತಿರುವುದು, ಗುಜರಾತ್ ಮೇಲೆ ಅತಿಯಾದ ಪ್ರೀತಿ ತೋರುತ್ತಿರುವುದು ಕೇಂದ್ರದ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳಿಂದಲೇ ಬಹಿರಂಗವಾಗಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಕೇಂದ್ರದಿಂದ ಆಗುತ್ತಿರುವ ಈ ತಾರತಮ್ಯ ಮನುಷ್ಯತ್ವ ವಿರೋಧಿ.
ವ್ಯಾಕ್ಸಿನ್ ಮೊದಲ ಡೋಸ್ ಹಾಕಿಸಿಕೊಂಡಾಗ ಕೆಲವರಿಗೆ ಜ್ವರ, ತಲೆ ನೋವು, ಮೈಕೈ ನೋವು, ಡಯಾರಿಯ, ಸುಸ್ತು ಕಾಣಿಸಿಕೊಳ್ಳುತ್ತದೆ. ನಿಮಗೆ ಗೊತ್ತಿರಲಿ. ನಿಮಗೆ ಚುಚ್ಚುವ ಲಸಿಕೆಯಲ್ಲಿ ವೈರಸ್ ನ ದುರ್ಬಲ ಅಥವಾ ಮೃತ ಭಾಗ ಇರುತ್ತದೆ. ನಿಮ್ಮ ದೇಹದ ಇಮ್ಯೂನ್ ಸಿಸ್ಟಮ್ ಬಲಗೊಳಿಸಲು ಇದನ್ನು ಶರೀರಕ್ಕೆ ಚುಚ್ಚಲಾಗುತ್ತದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಟಿವಿಯಲ್ಲಿ ಕಾಣಿಸಿಕೊಂಡು ವೀರಾವೇಶದಿಂದ 18ರಿಂದ 45 ವಯಸ್ಸಿನವರಿಗೆ ಮೇ ಒಂದರಿಂದ ಲಸಿಕೆ ಹಾಕುವುದಾಗಿ ಘೋಷಿಸಿದರು. ಆದರೀಗ ರಾಜ್ಯದ ಬಿಜೆಪಿ ಸರ್ಕಾರ ಲಸಿಕೆ ಹಾಕಯವ ಕೆಲಸವನ್ನು ಮುಂದೂಡಿದೆ. ಮಾತಿನ ಶೂರ ಮೋದಿ ಈಗ ಎಲ್ಲಿದ್ದಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಮ್ಮಲ್ಲಿ ತಕ್ಕ ಪ್ರಮಾಣದ ವ್ಯಾಕ್ಸಿನ್ ಲಭ್ಯ ಇಲ್ಲ ಎಂದು ಹೇಳಿ ದೆಹಲಿ, ರಾಜಾಸ್ತಾನ, ಛತ್ತೀಸ್ ಘಡ, ಮಧ್ಯಪ್ರದೇಶ, ಪಂಜಾಬ್, ಒಡಿಶಾ, ಜಮ್ಮು ಕಾಶ್ಮೀರ ಮತ್ತು ಬಿಹಾರ ರಾಜ್ಯಗಳು ಕೈಚೆಲ್ಲಿ ಕುಳಿತಿವೆ. ಮೇ 1 ರಿಂದಲೇ ಲಸಿಕೆ ಅಭಿಯಾನ ಶುರುವಾಗಲಿದೆ ಎನ್ನುವದರ ಬಗ್ಗೆ ರಾಜ್ಯಗಳು ಖಚಿತವಾಗಿ ಏನನ್ನೂ ಹೇಳುತ್ತಿಲ್ಲ.
ಮುಂಬಯಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ರಾಜೇಶ್ ಟೋಪೆ ಮಹಾರಾಷ್ಟ್ರದಲ್ಲಿ ಕರೋನಾ ಮೂರನೇ ಅಲೆ ಅಪ್ಪಳಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಈ ಕುರಿತು ತಜ್ಞರ ಹೇಳಿಕೆಯ ಆಧಾರ ನೀಡಿದ ಸಚಿವ ಟೊಪೆ ಜುಲೈ ಅಥವಾ ಆಗಸ್ಟ್ ನಲ್ಲಿ ಮೂರನೇ ಅಲೆ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.