ಹಾರ್ದಿಕ್​ ಪಾಂಡ್ಯ ಗಾಯಗೊಂಡು ಈ ಮೂವರು ಆಟಗಾರರ ಅದೃಷ್ಟವನ್ನೇ ಬದಲಿಸಿ ಬಿಟ್ರು!

Hardik Pandya Replacement : ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರಿಂದ ಮೂವರು ಆಟಗಾರರ ಅದೃಷ್ಟ ಖುಲಾಯಿಸಿದೆ. ಅಕ್ಟೋಬರ್​ 19 ರಂದು ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಗಾಯಗೊಂಡರು.

Written by - Chetana Devarmani | Last Updated : Nov 6, 2023, 03:34 PM IST
  • ಏಕದಿನ ವಿಶ್ವಕಪ್ ಟೂರ್ನಿ
  • ಟೂರ್ನಿಯಿಂದ ಹೊರಬಿದ್ದ ಪಾಂಡ್ಯ
  • ಈ ಮೂವರು ಆಟಗಾರರ ಅದೃಷ್ಟ ಬದಲು
ಹಾರ್ದಿಕ್​ ಪಾಂಡ್ಯ ಗಾಯಗೊಂಡು ಈ ಮೂವರು ಆಟಗಾರರ ಅದೃಷ್ಟವನ್ನೇ ಬದಲಿಸಿ ಬಿಟ್ರು! title=
Hardik Pandya

Hardik Pandya Injury : ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಗಾಯಗೊಂಡು ಮ್ಯಾಚ್‌ನಿಂದ ಹೊರಗುಳಿದಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರಿಂದ ಮೂವರು ಆಟಗಾರರ ಅದೃಷ್ಟ ಖುಲಾಯಿಸಿದೆ. ಅಕ್ಟೋಬರ್​ 19 ರಂದು ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಗಾಯಗೊಂಡರು. ಪಾದದ ಗಾಯದಿಂದ ಹಾರ್ದಿಕ್‌ ಪಾಂಡ್ಯ ಚೇತರಿಸಿಕೊಳ್ಳದ ಕಾರಣ ವಿಶ್ವಕಪ್ ಟೂರ್ನಿಯಿಂದ ಔಟಾದರು.

ಹಾರ್ದಿಕ್‌ ಪಾಂಡ್ಯ ಅವರ ಸ್ಥಾನಕ್ಕೆ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಟೀಮ್‌ನಲ್ಲಿ ಸೇರಿಸಲಾಯಿತು. ಭಾರತದ ಆರಂಭಿಕ 4 ಪಂದ್ಯಗಳಿಗೆ ಮೊಹಮ್ಮದ್ ಶಮಿ ಅವರನ್ನು ಪ್ಲೇಯಿಂಗ್‌ 11 ನಿದ ಹೊರಗಿಡಲಾಗಿತ್ತು. ಟೀಮ್‌ ಇಂಡಿಯಾದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಜೊತೆಗೆ 3 ನೇ ವೇಗಿಯಾಗಿ ಪಾಂಡ್ಯ ತಂಡದಲ್ಲಿದ್ದ ಕಾರಣ ಶಮಿಗೆ ಅವಕಾಶ ನೀಡಿರಲಿಲ್ಲ. ಆದರೆ ಹಾರ್ದಿಕ್ ಇಂಜುರಿ ಬಳಿಕ ತಂಡಕ್ಕೆ ಮೂರನೇ ವೇಗಿಯ ಅಗತ್ಯ ಇತ್ತು. ಇದೇ ಕಾರಣ ಮೊಹಮ್ಮದ್‌ ಶಮಿ ಅವರನ್ನು ತಂಡದಲ್ಲಿ ಸೇರಿಸಲಾಯಿತು. 

ಇದನ್ನೂ ಓದಿ: ಕೊಹ್ಲಿ ಫೋನ್‌ನಲ್ಲಿ ಅತಿ ಹೆಚ್ಚು ಮಾತನಾಡೋದು ಈ ಮೂವರ ಜೊತೆ.. ತಾಯಿ, ಅನುಷ್ಕಾ.. ಆ ಮೂರನೇ ವ್ಯಕ್ತಿ ಯಾರು?

ಹಾರ್ದಿಕ್​ ಅಲಭ್ಯತೆಯಲ್ಲಿ ಶಮಿ ಅದ್ಭುತ ಬೌಲಿಂಗ್ ಮಾಡಿದರು. ಅವಕಾಶ ಪಡೆದ ಮೊದಲ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್​ ಪಡೆದರು. ನಂತರ ಇಂಗ್ಲೆಂಡ್ ಎದುರು 4 ವಿಕೆಟ್, ಶ್ರೀಲಂಕಾ ಎದುರು 5 ವಿಕೆಟ್ ಕಬಳಿಸಿದರು. ಕೇವಲ 3 ಪಂದ್ಯಗಳಲ್ಲಿ 14 ವಿಕೆಟ್​ ಕಿತ್ತು ಶಮಿ ಎಲ್ಲರ ಗಮನ ಸೆಳೆದರು. 

ಹಾರ್ದಿಕ್ ಇಂಜುರಿ ಸೂರ್ಯಕುಮಾರ್​ ಯಾದವ್‌ ಗೆ ಲಕ್ಕಿ ಆಗಿದೆ. ತಂದುಕೊಟ್ಟಿದೆ. ತಂಡಕ್ಕಿದ್ದ ಆಲ್​ರೌಂಡರ್ ಅಲಭ್ಯತೆಯಿಂದ ಇದ್ದ ಫಿನಿಷರ್ ಕೊರತೆಯನ್ನು ಸೂರ್ಯ ಕುಮಾರ್‌ ಯಾದವ್‌ ಫಿಲ್‌ ಮಾಡಿದರು. 

ಹಾರ್ದಿಕ್ ಗಾಯದಿಂದ ಕೆಎಲ್​ ರಾಹುಲ್‌ ಪಾಲಿಗೆ ದೊಡ್ಡ ಅವಕಾಶವೇ ಒಲಿದು ಬಂದಿತು. ಉಪನಾಯಕನ ಪಟ್ಟ ರಾಹುಲ್‌ ಪಾಲಾಯ್ತು. ಕಳೆದುಕೊಂಡಿದ್ದ ಸ್ಥಾನವನ್ನು ರಾಹುಲ್‌ ಮತ್ತೆ ದಕ್ಕಿಸಿಕೊಂಡರು. 

ಇದನ್ನೂ ಓದಿ: ದಾಖಲೆಗಾಗಿ ಕೊಹ್ಲಿ ನಿಧಾನವಾಗಿ ಆಡ್ತಾರಾ? ನಾಯಕ ರೋಹಿತ್ ಶರ್ಮಾ ಹೇಳಿದ್ದೇನು? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News