ಟಾಸ್ ಗೆದ್ದ ದ.ಆಫ್ರಿಕಾ ಬೌಲಿಂಗ್ ಆಯ್ಕೆ: ಚೊಚ್ಚಲ ಟೆಸ್ಟ್’ನಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಚ್ಯಾನ್ಸ್

 prasidh Krishna :ಸೆಂಚುರಿಯನ್‌ ಸ್ಟೇಡಿಯಂನಲ್ಲಿ ಭಾರತ vs ದಕ್ಷಿಣ ಆಫ್ರಿಕಾ ಮೊದಲ ದಿನದ ಟೆಸ್ಟ್‌ ಪಂದ್ಯ ಆರಂಭವಾಗಿದೆ. ಟಾಸ್‌ ಸೋತ ಭಾರತವು ಬ್ಯಾಟಿಂಗ್‌ ಮಮೂಲಕ ತಮ್ಮ ಮೊದಲ ಇನ್ನಿಂಗ್ಸ್‌ ಆರಂಭಿಸಿದೆ. ಈ ಟೆಸ್ಟ್‌ ಸರಣಿಯು ಕನ್ನಡಿಗ ಪ್ರಸಿಧ್‌ ಕೃಷ್ಣಗೆ ಚೊಚ್ಚಲ ಟೆಸ್ಟ್‌ ಸರಣಿಯಾಗಲಿದೆ.

Written by - Zee Kannada News Desk | Last Updated : Dec 26, 2023, 11:28 PM IST
  • ದಕ್ಷಿಣ ಆಪ್ರಿಕಾ ಮತ್ತು ಭಾರತ ನಡುವಿನ ಮೊದಲ ಟೆಸ್ಟ್‌ ಪಂದ್ಯ
  • ಟಾಸ್‌ ಗೆದ್ದ ದಕ್ಷಿಣ ಆಪ್ರಿಕಾ ಬೌಲಿಂಗ್‌ ಆಯ್ಕೆಮಾಡಿಕೊಂಡಿದೆ.
  • ಭಾರತದ ಪರ ಚೊಚ್ಚಲ ಟೆಸ್ಟ್‌ ಪಂದ್ಯ ಆಡಲಿರುವ ಪ್ರಸಿಧ್‌ ಕೃಷ್ಣ
ಟಾಸ್ ಗೆದ್ದ ದ.ಆಫ್ರಿಕಾ ಬೌಲಿಂಗ್ ಆಯ್ಕೆ: ಚೊಚ್ಚಲ ಟೆಸ್ಟ್’ನಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಚ್ಯಾನ್ಸ್ title=

INd vs SA 1st test:ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳ ನಡುವಿನ ಮೊದಲ ಟೆಸ್ಟ್‌ ಪಂದ್ಯ ಆರಂಭವಾಗಿದೆ. ಟಾಸ್‌ ಗೆದ್ದಂತಹ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಭಾರತಕ್ಕೆ ಮೊದಲು ಬ್ಯಾಟಿಂಗ್‌ ಮಾಡಲು ಚಾನ್ಸ್‌ ನೀಡಿದೆ. ರೋಹಿತ್‌ ಶರ್ಮಾ ಮತ್ತು ಯಂಗ್‌ ಸ್ಟಾರ್‌ ಯಶಸ್ವಿ ಜೈಸ್ವಾಲ್‌  ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದರು. 

ದ. ಆಫ್ರಿಕಾ ವಿರುಧ್ದದ ಪಂದ್ಯದಲ್ಲಿ ಇಬ್ಬರು ಕನ್ನಡಿಗರಿಗೆ ಚಾನ್ಸ್‌ ಸಿಕ್ಕಿರುವುದು ಹೆಮ್ಮೆಯ ವಿಷಯವಾಗಿದೆ. ಕೆಎಸ್‌ ಭರತ್‌ ಅವರ ಕಳೆಪೆ ಪ್ರರ್ಶನದಿಂದ ಟೀಂ ಇಂಡಿಯಾ ತಮ್ಮ ಪ್ಲೇಯಿಂಗ್‌ 11 ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡಿದೆ, ಭರತ್‌ ಬದಲಿಗೆ ಕನ್ನಡಿಗ ಕೆಎಲ್‌ ರಾಹುಲ್‌ ಅವರನ್ನು ಮರಳಿ ತಂಡದಲ್ಲಿ ಸೇರಿಸಿಕೊಂಡಿದೆ. ಇವರು ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್‌ ಪಂದ್ಯಗಳನ್ನು ಆಡಿರುವ ಅನುಭವವನ್ನು ಹೊಂದಿದ್ಧಾರೆ.

ಇದನ್ನು ಓದಿ- IND vs SA 1st Test ಪ್ಲೇಯಿಂಗ್11 ಬಗ್ಗೆ ಬಾಯ್ಬಿಟ್ಟ ನಾಯಕ ರೋಹಿತ್ ! ಕಾಡಲಿದೆಯಂತೆ ಈ ಆಟಗಾರನ ಗೈರು 

ಕೆಎಲ್‌ ರಾಹುಲ್‌ ಮಾತ್ರವಲ್ಲದೆ ಇನ್ನೊಬ್ಬ ಕನ್ನಡಿಗ ಪ್ರಸಿಧ್‌ ಕೃಷ್ಣ ಅವರಿಗು ಈ ಸರಣಿಯಲ್ಲಿ ಚಾನ್ಸ್‌ ಸಿಕ್ಕಿದೆ. ಬೌಲಿಂಗ್‌ ವಿಭಾಗದಲ್ಲಿ ಮೊಹಮ್ಮದ್‌ ಶಮಿ ಅವರ ಅನುಪಸ್ಥಿತಿಯ ಕಾರಣ ಪ್ರಸಿಧ್‌ ಕೃಷ್ಣ ಅವರಿಗೆ ತಂಡದಲ್ಲಿ ಆಡುವ ಅವಕಾಶ ನೀಡಿದೆ. ಟೀಮ್‌ ಇಂಡಿಯಾ ಪರ ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಿರುವ ಪ್ರಸಿಧ್‌ ಗೆ ದಕ್ಷಿಣ ಆಫ್ರಿಕಾ ವಿರುಧ್ದದ ಟೆಸ್ಟ್‌ ಸರಣಿಯು ಅವರ ಕೆರಿಯರ್‌ ನ ಮೊದಲ ಟೆಸ್ಟ್‌ ಪಂದ್ಯವಾಗಿದೆ.

ಭಾರತದ ತಂಡದ ಬ್ಯಾಟ್ಸ್‌ಮನ್‌ಗಳಾದ ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್ ಮತ್ತು ಅಯ್ಯರ್ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯ ಆಡಿದ ಅನುಭವವನ್ನು ಹೊಂದಿಲ್ಲ. ದ. ಆಫ್ರಿಕಾ ತಂಡದ ರಬಾಡ, ಎನ್ಡಿಗಿ, ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್, ಜೆರಾಲ್ಡ್ ಕೋಟ್ಜಿ ಮತ್ತು ಮಾರ್ಕೊ ಜಾನ್ಸೆನ್  ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಕಾಟ ಕೊಡಬಹುದು, ತಂಡದ ಹೆಚ್ಚಿನ ಹೊರೆಯನ್ನು ಅನುಭವಿ ಬ್ಯಾಟ್ಸ್‌ಮನ್‌ ಗಳಾದ ರೋಹಿತ್‌, ಕೊಹ್ಲಿ ಮತ್ತು ರಾಹುಲ್‌ ನಿಭಾಯಿಸಬೇಕು.ದ. ಆಫ್ರಿಕಾ ಬೌಲರ್ಸ್‌ಗಳ ಸವಾಲನ್ನು ಕ್ರಮವಾಗಿ ಈ ಮೂವರು ಆಟಗಾರರು ಎದುರಿಸಿದರೆ ಮಾತ್ರ ತಂಡವು ಒಂದು ಸವಾಲಿನ ಚೇಸಿಂಗ್‌ ನೀಡಲು ಸಾಧ್ಯವಾಗುತ್ತದೆ.

ಇದನ್ನು ಓದಿ-ಶೂ ಮೇಲೆ ತನ್ನ ಇಬ್ಬರು ಹೆಣ್ಣು ಮಕ್ಕಳ ಹೆಸರು ಬರೆದುಕೊಂಡು ಮೈದಾನಕ್ಕಿಳಿದ ಖ್ಯಾತ ಕ್ರಿಕೆಟಿಗ ! ಕಾರಣ ಇದು

ಸೆಂಚೂರಿಯನ್‌ ಮೈದಾನವು ಹೆಚ್ಚು ಬೌಲಿಂಗ್‌ ಪಿಚ್‌ ಆಗದ್ದು, ಬೌನ್ಸರ್‌ಗಳಿಗೆ ಹೇಳಿ ಮಾಡಿಸಿದೆ. ಈ ಪಂದ್ಯವು ವೇಗದ ಬೌಲರ್ಸ್‌ಗಳು ಪ್ರಬಲ್ಯ ಮೆರಯುವ ಸಾಧ್ಯತೆ ಇದ್ದು , ಭಾರತ ತಂಡದ ವೇಗಿಗಳಾದ ಸಿರಾಜ್‌, ಶಾರ್ದುಲ್‌ ಹಾಗೂ ಪ್ರಸಿಧ್‌ ಕೃಷ್ಣಗೆ ಸೂಕ್ತ ಅವಕಾಶ ಸಿಕ್ಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News