ಗೆದ್ದರೂ ಅತ್ಯಂತ ಮುಜುಗರದ ದಾಖಲೆ ಬರೆದ RCB: ಈ ವಿಷಯದಲ್ಲಿ ಪಂಜಾಬ್ ಜೊತೆ ಅಗ್ರಸ್ಥಾನ ಹಂಚಿಕೊಂಡ ಬೆಂಗಳೂರು

RCB vs GT IPL 2024: ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌’ಗಳಲ್ಲಿ 200 ರನ್ ಗಳಿಸಿತ್ತು. ಆರ್‌ ಸಿ ಬಿ ವಿರುದ್ಧದ ಪಂದ್ಯದಲ್ಲಿ ಐಪಿಎಲ್’ನ ತಂಡವೊಂದು 200 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದು ಇದು 28ನೇ ಬಾರಿ.

Written by - Bhavishya Shetty | Last Updated : Apr 28, 2024, 09:04 PM IST
    • ಆರ್‌ ಸಿ ಬಿ ತಂಡವು ಪ್ಲೇಆಫ್‌’ನ ರೇಸ್‌’ನಿಂದ ಬಹುತೇಕ ಹೊರಗಿದೆ
    • 200 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದು ಇದು 28ನೇ ಬಾರಿ
    • ಈ ವಿಷಯದಲ್ಲಿ ಪಂಜಾಬ್ ಜೊತೆ ಅಗ್ರಸ್ಥಾನ ಹಂಚಿಕೊಂಡ ಆರ್‌ ಸಿ ಬಿ
ಗೆದ್ದರೂ ಅತ್ಯಂತ ಮುಜುಗರದ ದಾಖಲೆ ಬರೆದ RCB: ಈ ವಿಷಯದಲ್ಲಿ ಪಂಜಾಬ್ ಜೊತೆ ಅಗ್ರಸ್ಥಾನ ಹಂಚಿಕೊಂಡ ಬೆಂಗಳೂರು title=
royal challengers bangalore

RCB vs GT IPL 2024: 2008 ರಿಂದ ಪ್ರಸಕ್ತ IPL ಸೀಸನ್’ವರೆಗೆ ಒಂದೇ ಒಂದು ಬಾರಿಯೂ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಇದೀಗ ತನ್ನ ಹೆಸರಿನಲ್ಲಿ ಅತ್ಯಂತ ನಾಚಿಕೆಗೇಡಿನ ದಾಖಲೆಯೊಂದು ಬರೆದಿದೆ.

ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಐಪಿಎಲ್  ಆಡುತ್ತಿರುವ ಆರ್‌ ಸಿ ಬಿ ತಂಡವು ಪ್ಲೇಆಫ್‌’ನ ರೇಸ್‌’ನಿಂದ ಬಹುತೇಕ ಹೊರಗಿದೆ. ಪವಾಡ ನಡೆದರಷ್ಟೇ ತಂಡವು ಅಗ್ರ-4ರಲ್ಲಿ ಸ್ಥಾನ ಪಡೆಯುತ್ತದೆ. ಈ ಮಧ್ಯೆ, ಗುಜರಾತ್ ಟೈಟಾನ್ಸ್ ಮತ್ತು ಆರ್‌ಸಿಬಿ ನಡುವಿನ 45 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಜೊತೆಗೆ ಈ ಅನಗತ್ಯ ದಾಖಲೆ ಬರೆದಿದ್ದು, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: ಈ ಒಣಹಣ್ಣಷ್ಟೇ ಸಾಕು: ಬೆಳಗೆದ್ದು ಹಳಸಿದ ಬಾಯಲ್ಲಿ ತಿಂದರೆ ಸೊಂಟದ ಸುತ್ತ ಸಂಗ್ರಹವಾದ ಕೆಟ್ಟ ಬೊಜ್ಜು ಸುಲಭವಾಗಿ ಕರಗುತ್ತೆ! ಯಾವ ಶ್ರಮವೂ ಬೇಕಿಲ್ಲ

ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌’ಗಳಲ್ಲಿ 200 ರನ್ ಗಳಿಸಿತ್ತು. ಆರ್‌ ಸಿ ಬಿ ವಿರುದ್ಧದ ಪಂದ್ಯದಲ್ಲಿ ಐಪಿಎಲ್’ನ ತಂಡವೊಂದು 200 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದು ಇದು 28ನೇ ಬಾರಿ. ಇದರೊಂದಿಗೆ ಪಂಜಾಬ್ ಕಿಂಗ್ಸ್ ಜೊತೆಗೆ ಆರ್‌ ಸಿ ಬಿ ಐಪಿಎಲ್‌’ನಲ್ಲಿ ಅತಿ ಹೆಚ್ಚು ಬಾರಿ ಇನ್ನಿಂಗ್ಸ್‌’ನಲ್ಲಿ 200 ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟ ಅಗ್ರ ತಂಡವಾಗಿದೆ. ಪಂಜಾಬ್ ಕಿಂಗ್ಸ್ ಕೂಡ 28 ಬಾರಿ ಈ ಕಳಪೆ ಸಾಧನೆ ಮಾಡಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 200 ರನ್ ಗಳಿಸಿತ್ತು. ಸಾಯಿ ಸುದರ್ಶನ್ ಅವರ ಅಜೇಯ ಅರ್ಧಶತಕ ಮತ್ತು ಶಾರುಖ್ ಅವರ ತ್ವರಿತ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌’ಗಳಲ್ಲಿ 3 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು. ಆರಂಭಿಕರಾದ ವೃದ್ಧಿಮಾನ್ ಸಹಾ (5 ರನ್) ಮತ್ತು ಶುಭಮನ್ ಗಿಲ್ (16 ರನ್) ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಇದಾದ ನಂತರ ಶಾರುಖ್ ಖಾನ್ ಮತ್ತು ಸಾಯಿ ಸುದರ್ಶನ್ ಅರ್ಧಶತಕ ಗಳಿಸಿ ಆರ್‌ ಸಿ ಬಿ ಬೌಲರ್‌’ಗಳಿಗೆ ಸಂಕಷ್ಟ ತಂದೊಡ್ಡಿದರು.

ಇದನ್ನೂ ಓದಿ: ಮುಂಜಾನೆ ಎದ್ದಂತೆ ಮೊಸರಿಗೆ ಈ ಕಪ್ಪು ಬೀಜ ಬೆರೆಸಿ ತಿನ್ನಿ: ದಿನಪೂರ್ತಿ ನಾರ್ಮಲ್ ಇರುತ್ತೆ ಬ್ಲಡ್ ಶುಗರ್! ಯಾವ ಔಷಧಿಯೂ ಬೇಕಿಲ್ಲ

ಆದರೆ ಗುಜರಾತ್ ನೀಡಿದ 201 ರನ್‌’ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಗೆಲುವು ಸಾಧಿಸಿತು. ವಿಲ್ ಜಾಕ್ವೆಸ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಗೆಲುವು ತಂದುಕೊಟ್ಟರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News