IPLನ ಈ ತಂಡಕ್ಕೆ ಹೊರೆಯಾದ ಟೀಂ ಇಂಡಿಯಾದ ಸ್ಟಾರ್ ಆಟಗಾರ: ತಂಡದಿಂದ ಒತ್ತಾಯವಾಗಿ ಹೊರಹಾಕಲ್ಪಟ್ಟರೇ?

Ricky Ponting Delhi Capitals: ರಿಕಿ ಪಾಂಟಿಂಗ್ ಅವರು ಪೃಥ್ವಿ ಶಾ ಅವರಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸುತ್ತಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ ನ ಮುಖ್ಯ ಕೋಚ್ ಇತರ ತಂಡಗಳ ಅನೇಕ ಆರಂಭಿಕರು ತಮ್ಮ ತಂಡಕ್ಕಿಂತ ಉತ್ತಮವಾಗಿ ಆಟವಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನದ ನಂತರ ಪೃಥ್ವಿ ಶಾ ಅವರನ್ನು ಅಂತಿಮವಾಗಿ ಕೈಬಿಡಲಾಗಿದೆ.

Written by - Bhavishya Shetty | Last Updated : Apr 29, 2023, 09:48 AM IST
    • ಈ ಋತುವಿನ ಮೊದಲ 7 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 2 ಪಂದ್ಯಗಳನ್ನು ಗೆದ್ದಿದೆ.
    • ಡೆಲ್ಲಿ ಕ್ಯಾಪಿಟಲ್ಸ್ ಈಗ ಈ ಸೀಸನ್ ನಿಂದ ಹೊರಗುಳಿಯುವ ಅಪಾಯದಲ್ಲಿದೆ.
    • ಕೆಟ್ಟ ಆಟದ ನಂತರ ಮಾತನಾಡಿದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ದೊಡ್ಡ ಹೇಳಿಕೆ ನೀಡಿದ್ದಾರೆ
IPLನ ಈ ತಂಡಕ್ಕೆ ಹೊರೆಯಾದ ಟೀಂ ಇಂಡಿಯಾದ ಸ್ಟಾರ್ ಆಟಗಾರ: ತಂಡದಿಂದ ಒತ್ತಾಯವಾಗಿ ಹೊರಹಾಕಲ್ಪಟ್ಟರೇ? title=
ricky ponting

Ricky Ponting Delhi Capitals: ಐಪಿಎಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ರದರ್ಶನವು ಇಲ್ಲಿಯವರೆಗೆ ತುಂಬಾ ಕಳಪೆಯಾಗಿದೆ. ಈ ಋತುವಿನ ಮೊದಲ 7 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 2 ಪಂದ್ಯಗಳನ್ನು ಗೆದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ಈಗ ಈ ಸೀಸನ್ ನಿಂದ ಹೊರಗುಳಿಯುವ ಅಪಾಯದಲ್ಲಿದೆ. ಇನ್ನು ತಂಡದ ಈ ಕೆಟ್ಟ ಆಟದ ನಂತರ ಮಾತನಾಡಿದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ದೊಡ್ಡ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: CSK: ಒಂದೊಮ್ಮೆ ಧೋನಿಯ ನೆಚ್ಚಿನ ಬೌಲರ್ ಆಗಿದ್ದ ಈತ… ಇಂದು ಒಂದೊತ್ತಿನ ಊಟಕ್ಕಾಗಿ ಬಸ್ ಓಡಿಸ್ತಿದ್ದಾನೆ!

ರಿಕಿ ಪಾಂಟಿಂಗ್ ಅವರು ಪೃಥ್ವಿ ಶಾ ಅವರಿಂದ ಉತ್ತಮ ಇನ್ನಿಂಗ್ಸ್ ನಿರೀಕ್ಷಿಸುತ್ತಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ ನ ಮುಖ್ಯ ಕೋಚ್ ಇತರ ತಂಡಗಳ ಅನೇಕ ಆರಂಭಿಕರು ತಮ್ಮ ತಂಡಕ್ಕಿಂತ ಉತ್ತಮವಾಗಿ ಆಟವಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನದ ನಂತರ ಪೃಥ್ವಿ ಶಾ ಅವರನ್ನು ಅಂತಿಮವಾಗಿ ಕೈಬಿಡಲಾಗಿದೆ. ಅಷ್ಟೇ ಅಲ್ಲದೆ, ಅವರ ಆರಂಭಿಕ ಪುನರಾಗಮನವು ಕಷ್ಟಕರವಾಗಿದೆ ಎಂದು ಹೇಳಲಾಗುತ್ತಿದೆ.

ಶನಿವಾರ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ ರಿಕಿ ಪಾಂಟಿಂಗ್, 'ಕಳೆದ 12 ಐಪಿಎಲ್ ಪಂದ್ಯಗಳಲ್ಲಿ (2022 ಸೇರಿದಂತೆ) ಪೃಥ್ವಿ ಶಾ ಅರ್ಧಶತಕ ಗಳಿಸಿಲ್ಲ. ಇತರ ತಂಡಗಳ ಹಲವು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಗಳು ಅವರಿಗಿಂತ ಉತ್ತಮವಾಗಿ ಆಡುತ್ತಿದ್ದಾರೆ” ಎಂದು ಹೇಳಿದ್ದಾರೆ.

ಈ ಬಾರಿಯ ಐಪಿಎಲ್‌ ನಲ್ಲಿ ಪೃಥ್ವಿ ಶಾ ಆರು ಪಂದ್ಯಗಳಲ್ಲಿ 47 ರನ್ ಗಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಪಾಂಟಿಂಗ್ 'ಪೃಥ್ವಿ ಫಾರ್ಮ್‌ ನಲ್ಲಿರುವಾಗ ಮ್ಯಾಚ್ ವಿನ್ನರ್ ಆಗಿರುತ್ತಾರೆ. ಹೀಗಾಗಿಯೇ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಅವರು ಉಳಿದುಕೊಂಡರೆ ಪಂದ್ಯ ಗೆಲ್ಲಬಹುದು ಎಂದುಕೊಂಡೆವು. ಈ ಋತುವಿನಲ್ಲಿ ಅವರು ಉತ್ತಮವಾಗಿ ಆಡಲು ಸಾಧ್ಯವಾಗದಿದ್ದರೂ. ಆರು ಪಂದ್ಯಗಳಲ್ಲಿ ಸುಮಾರು 40 ರನ್ ಗಳಿಸಿದ್ದೇವೆ. ಈ ಮೂಲಕ ತಂಡದ ಕೆಲಸವು ನಡೆಯುತ್ತಿಲ್ಲ. ಅವರನ್ನು ಹೊರಗಿಡುವ ನಿರ್ಧಾರ ಕಷ್ಟಕರವಾಗಿತ್ತು. ಆದರೆ ನಾವು ಇಂದು ಮಾಡಿದ ನಿರ್ಧಾರದಿಂದ ನಾಳೆಯ ಪಂದ್ಯವನ್ನು ಗೆಲ್ಲುವಂತೆ ಮಾಡುತ್ತದೆ ಎಂದು ಭಾವಿಸುತ್ತೇವೆ” ಎಂದರು.

“ಈ ವರ್ಷ ಅವರು ತಂಡಕ್ಕಾಗಿ ಹೆಚ್ಚು ಶ್ರಮ ವಹಿಸಿದ್ದಾರೆ. ನೆಟ್ಸ್‌ ನಲ್ಲಿ ಅವರ ಶ್ರಮವನ್ನು ನೋಡಿ ಈ ವರ್ಷ ಅವರಿಗೆ ಯಶಸ್ಸು ಸಿಗುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಇದುವರೆಗೆ ಅದು ಸಂಭವಿಸಿಲ್ಲ” ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: Video: ತಂದೆಯನ್ನೇ ಮೀರಿಸಿ ಬಾನೆತ್ತರಕ್ಕೆ ಸಿಕ್ಸರ್ ಬಾರಿಸಿದ Arjun Tendulkar! ಎಷ್ಟು ಮೀಟರ್ ದೂರ ಹೋಗಿದೆ ಗೊತ್ತಾ?

ಮತ್ತೊಂದೆಡೆ, ಮುಂಬರುವ ಪಂದ್ಯಗಳಲ್ಲಿ ಪ್ಲೇಯಿಂಗ್ 11 ರಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ ಎಂದು ಸನ್‌ರೈಸರ್ಸ್ ಹೈದರಾಬಾದ್ ನಾಯಕ ಏಡೆನ್ ಮಾರ್ಕ್ರಾಮ್ ಹೇಳಿದ್ದಾರೆ. ತಂಡದ ಕಳಪೆ ಪ್ರದರ್ಶನದಿಂದಾಗಿ ಅದರಲ್ಲಿ ಆಗಾಗ ಬದಲಾವಣೆಗಳು ಕಂಡುಬರುತ್ತಿತ್ತು 'ಹೆಚ್ಚು ಬದಲಾವಣೆಯು ನಿರಂತರತೆಯನ್ನು ಸೃಷ್ಟಿಸುವುದಿಲ್ಲ. ಸ್ಥಿರತೆಯಿಂದ ಮಾತ್ರ ನೀವು ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ನಾನು ನಂಬುತ್ತೇನೆ. ಈಗ ಬ್ಯಾಟಿಂಗ್ ನಲ್ಲಿ ಸ್ಥಿರತೆ ಮೂಡುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News