W 0 W W 4 W: ಸಿರಾಜ್ ‘ವಿಶ್ವದಾಖಲೆ’ಯ ಮಾರಕ ದಾಳಿಗೆ ದಂಗುಬಡಿದ ಲಂಕಾ..!

ND vs SL, Asia Cup Final 2023: ತಮ್ಮ 4ನೇ ಓವರ್‌ನಲ್ಲಿ ಸಿರಾಜ್ ಒಂದಲ್ಲ.. ಎರಡಲ್ಲ.. ಬರೊಬ್ಬರಿ 4 ವಿಕೆಟ್ ಕಬಳಿಸುವ ಮೂಲಕ ಲಂಕಾ ತಂಡಕ್ಕೆ ದೊಡ್ಡ ಆಘಾತವನ್ನೇ ನೀಡಿದ್ದಾರೆ.

Written by - Puttaraj K Alur | Last Updated : Sep 17, 2023, 05:09 PM IST
  • ಟೀಂ ಇಂಡಿಯಾದ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಶ್ರೀಲಂಕಾ
  • ವಿಶ್ವದಾಖಲೆಯ ಬೌಲಿಂಗ್ ಮಾಡುವ ಮೂಲಕ ಲಂಕಾಗೆ ಆಘಾತ ನೀಡಿದ ಸಿರಾಜ್
  • 4ನೇ ಓವರ್‌ನಲ್ಲಿ ಬರೊಬ್ಬರಿ 4 ವಿಕೆಟ್ ಕಂಬಳಿಸಿದ ಮೊಹಮ್ಮದ್ ಸಿರಾಜ್
W 0 W W 4 W: ಸಿರಾಜ್ ‘ವಿಶ್ವದಾಖಲೆ’ಯ ಮಾರಕ ದಾಳಿಗೆ ದಂಗುಬಡಿದ ಲಂಕಾ..!  title=
ಲಂಕಾಗೆ ಆಘಾತ ನೀಡಿದ ಸಿರಾಜ್!

ನವದೆಹಲಿ: ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಾರಕ ಬೌಲಿಂಗ್‌ ದಾಳಿಗೆ ಶ್ರೀಲಂಕಾ ತತ್ತರಿಸಿ ಹೋಗಿದೆ. ಲಂಕಾಗೆ ಜಸ್ಪ್ರೀತ್ ಬೂಮ್ರಾ ಆರಂಭಿಕ ಆಘಾತ ನೀಡಿದ್ರೆ, ಮೊಹಮ್ಮದ್ ಸಿರಾಜ್ ಲಂಕಾ ತಂಡದ ಬ್ಯಾಟಿಂಗ್‍ನ ಬೆನ್ನುಮೂಳೆಯನ್ನು ಮುರಿದಿದ್ದಾರೆ. ಯಾರೂ ನಿರೀಕ್ಷೆ ಮಾಡದ ಆಘಾತ ನೀಡದ ಸಿರಾಜ್ ಲಂಕಾ ತಂಡಕ್ಕೆ ದಂಗುಬಡಿಸಿದ್ದಾರೆ.

ತಮ್ಮ 4ನೇ ಓವರ್‌ನಲ್ಲಿ ಸಿರಾಜ್ ಒಂದಲ್ಲ.. ಎರಡಲ್ಲ.. ಬರೊಬ್ಬರಿ 4 ವಿಕೆಟ್ ಕಬಳಿಸುವ ಮೂಲಕ ಲಂಕಾ ತಂಡಕ್ಕೆ ದೊಡ್ಡ ಆಘಾತವನ್ನೇ ನೀಡಿದ್ದಾರೆ. ಸಿರಾಜ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಶ್ರೀಲಂಕಾ ಅಲ್ಪಮೊತ್ತಕ್ಕೆ ಕುಸಿತ ಕಂಡು ಆಘಾತ ಅನುಭಿಸಿದೆ. ಪಂದ್ಯದ ಆರಂಭದಲ್ಲಿಯೇ ತಮ್ಮ 2ನೇ ಎಸೆತದಲ್ಲಿ ಕುಸಾಲ್ ಪೆರೆರಾ ವಿಕೆಟ್ ಪಡೆಯುವ ಮೂಲಕ ಬೂಮ್ರಾ ಆಘಾತ ನೀಡಿದರು. ಪಂದ್ಯದ 4ನೇ ಓವರ್‍ನಲ್ಲಿ ಸಿರಾಜ್ ಲಂಕಾ ಬ್ಯಾಟ್ಸ್‍ಮನ್‍ಗಳನ್ನು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಹಾದಿ ಹಿಡಿಸಿದರು.

ಇದನ್ನೂ ಓದಿ: Asia Cup Finalಗೆ ಭಾರತದ ಪ್ಲೇಯಿಂಗ್ 11 ರೆಡಿ! 4ನೇ ಕ್ರಮಾಂಕಕ್ಕೆ ವಿಶ್ವದ ಶ್ರೇಷ್ಠ ಬ್ಯಾಟ್ಸ್’ಮನ್ ಫಿಕ್ಸ್- ಈತ ಕನ್ನಡಿಗನೂ ಹೌದು!

ಒಂದೇ ಓವರ್‌ನಲ್ಲಿ ಲಂಕಾ ತಂಡದ ನಾಲ್ವರು ಆಟಗಾರರ ಬಲಿ ಪಡೆಯುವ ಮೂಲಕ ಸಿರಾಜ್ ದಾಖಲೆ ನಿರ್ಮಿಸಿದ್ದಾರೆ. 4ನೇ ಓವರ್ ಬಳಿಕ ಮತ್ತೆ 6ನೇ ಓವರ್‍ ದಾಳಿಗೆ ಬಂದ ಸಿರಾಜ್ ಮತ್ತೊಂದು ವಿಕೆಟ್ ಕಬಳಿಸಿದರು. ಹೀಗಾಗಿ ಲಂಕಾ ಕೇವಲ 12 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಪಂದ್ಯದಲ್ಲಿ ಸಿರಾಜ್ ವಿಶ್ವದಾಖಲೆ ಬರೆದಿದ್ದಾರೆ. ಕೇವಲ 16 ಎಸೆತಗಳಲ್ಲಿ ಅತ್ಯಂತ ವೇಗವಾಗಿ 5 ವಿಕೆಟ್ ಗೊಂಚಲು ಪಡೆದ ಬೌಲರ್ ಎನ್ನುವ ದಾಖಲೆಯನ್ನು ಅವರು ಸರಿಗಟ್ಟಿದ್ದಾರೆ. ಇದಕ್ಕೂ ಮುನ್ನ ಶ್ರೀಲಂಕಾದ ದಿಗ್ಗಜ ವೇಗಿ ಚಾಮಿಂಡಾ ವಾಸ್ 16 ಎಸೆತಗಳಲ್ಲಿ 5 ವಿಕೆಟ್ ಗೊಂಚಲು ಪಡೆದ ದಾಖಲೆ ಹೊಂದಿದ್ದರು. ಆ ದಾಖಲೆಯನ್ನು ಇದೀಗ ಸಿರಾಜ್ ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಶ್ರೀಲಂಕಾ 15.1 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡಿದ್ದು, 50 ರನ್ ಗಳಿಸಿದೆ. ಸಿರಾಜ್ 20ಕ್ಕೆ 6 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 2 ಮತ್ತು ಬೂಮ್ರಾ 1 ವಿಕೆಟ್ ಕಬಳಿಸಿದ್ದಾರೆ.

ಇದನ್ನೂ ಓದಿ: ಇಂದು ಏಷ್ಯಾಕಪ್‌ 2023ರ ಕೊನೆಯ ಪಂದ್ಯ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News