IND vs BAN : "ಪಂದ್ಯ ಗೆಲ್ಲಲು ಮುಖ್ಯ ಕಾರಣ ಆ ಒಬ್ಬ ಆಟಗಾರ"..! ಹಾಡಿ ಹೊಗಳಿದ ರೋಹಿತ್‌ ಶರ್ಮಾ

Rohith Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಹಾಡಿ ಹೊಗಳಿದ್ದಾರೆ . ಬ್ಯಾಟಿಂಗ್‌ನಲ್ಲಷ್ಟೇ ಅಲ್ಲದೆ ಹಾರ್ದಿಕ್‌ ಬೌಲಿಂಗ್‌ನಲ್ಲೂ ಉತ್ತಮ ಆಟವಾಡಿದ್ದಾರೆ. ಅವರ ಉತ್ತಮ ಪ್ರದರ್ಶನದಿಂದ ನಾವು ಗೆಲ್ಲಲು ಸಾಧ್ಯವಾಯಿತು ಎಂದು ರೋಹಿತ್‌ ಶರ್ಮ ಹಾರ್ದಿಕ್‌ಗೆ ಹೊಗಳಿಕೆಯ ಸುರಿ ಮಳೆ ಸುರಿಸಿದ್ದಾರೆ.  

Written by - Zee Kannada News Desk | Last Updated : Jun 23, 2024, 08:26 AM IST
  • ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಹಾಡಿ ಹೊಗಳಿದ್ದಾರೆ .
  • ಅವರ ಉತ್ತಮ ಪ್ರದರ್ಶನದಿಂದ ನಾವು ಗೆಲ್ಲಲು ಸಾಧ್ಯವಾಯಿತು ಎಂದು ರೋಹಿತ್‌ ಶರ್ಮ ಹಾರ್ದಿಕ್‌ಗೆ ಹೊಗಳಿಕೆಯ ಸುರಿ ಮಳೆ ಸುರಿಸಿದ್ದಾರೆ.
  • ಪಂದ್ಯದ ನಂತರ ತಮ್ಮ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, ತಂಡದ ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
IND vs BAN : "ಪಂದ್ಯ ಗೆಲ್ಲಲು ಮುಖ್ಯ ಕಾರಣ ಆ ಒಬ್ಬ ಆಟಗಾರ"..! ಹಾಡಿ ಹೊಗಳಿದ ರೋಹಿತ್‌ ಶರ್ಮಾ title=

Rohith Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ(Rohith Sharma) ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಅವರನ್ನು ಹಾಡಿ ಹೊಗಳಿದ್ದಾರೆ . ಬ್ಯಾಟಿಂಗ್‌ನಲ್ಲಷ್ಟೇ ಅಲ್ಲದೆ ಹಾರ್ದಿಕ್‌ ಬೌಲಿಂಗ್‌ನಲ್ಲೂ ಉತ್ತಮ ಆಟವಾಡಿದ್ದಾರೆ. ಅವರ ಉತ್ತಮ ಪ್ರದರ್ಶನದಿಂದ ನಾವು ಗೆಲ್ಲಲು ಸಾಧ್ಯವಾಯಿತು ಎಂದು ರೋಹಿತ್‌ ಶರ್ಮ ಹಾರ್ದಿಕ್‌ಗೆ ಹೊಗಳಿಕೆಯ ಸುರಿ ಮಳೆ ಸುರಿಸಿದ್ದಾರೆ.)

ಶನಿವಾರ, ಜೂನ್‌ 22ರಂದು ಟಿ20 ವಿಶ್ವಕಪ್ 2024ರ(T20 World Cup 2024) ಬಾಂಗ್ಲಾದೇಶ(Bangladesh) ವಿರುದ್ಧದ ಸೂಪರ್-8(Super-8)  ಪಂದ್ಯದಲ್ಲಿ ಟೀಂ ಇಂಡಿಯಾ(India)  ಏಕಪಕ್ಷೀಯವಾಗಿ 50 ರನ್‌ಗಳಿಂದ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಸೆಮೀಸ್‌ ಪ್ರವೇಶಿಸುವ ಅವಕಾಶ ಗಿಟ್ಟಿಸಿಕೊಂಡಿದೆ. ಈ ಪಂದ್ಯದ ನಂತರ ತಮ್ಮ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, ತಂಡದ ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಹೆಸರಲ್ಲಿ ಮತ್ತೊಂದು ದಾಖಲೆ: ಅತೀ ಹೆಚ್ಚು ರನ್‌ ಕಲೆಹಾಕಿರುವವರ ಪಟ್ಟಿಯಲ್ಲಿ ಕಿಂಗ್‌ಗೆ ಅಗ್ರಸ್ಥಾನ..!

ಈ ಸಂದರ್ಭದಲ್ಲಿ ಮಾತನಾಡಿದ ರೋಹಿತ್‌ "ಕಳೆದ ಪಂದ್ಯದಲ್ಲಿಯೇ ಹಾರ್ದಿಕ್ ಪಾಂಡ್ಯ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಅವರ ಬ್ಯಾಟಿಂಗ್ ನಮ್ಮ ತಂಡಕ್ಕೆ ಶಕ್ತಿ ಇದ್ದಂತೆ. ಹಾರ್ದಿಕ್ ಪಾಂಡ್ಯ ಅವರ ಸಾಮರ್ಥ್ಯ ಏನು ಎಂದು ನಮಗೆ ತಿಳಿದಿದೆ. ಅವರು ನಮಗೆ ಅತ್ಯಂತ ಪ್ರಮುಖ ಆಟಗಾರ, ಅವರು ಇದೇ ರೀತಿ ಪ್ರದರ್ಶನ ನೀಡುವುದನ್ನು ಮುಂದುವರೆಸಿದರೆ ಟೀಂ ಇಂಡಿಯಾ ಕೂಡ ಉತ್ತಮ ಸ್ಥಾನಕ್ಕೆ ಬರಲಿದೆ" ಎಂದು ಹೇಳಿದ್ದಾರೆ.

ಇನ್ನೂ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 196 ರನ್ ಕಲೆಹಾಕಿತು. ಹಾರ್ದಿಕ್ ಪಾಂಡ್ಯ 27 ಎಸೆತಗಳಲ್ಲಿ 4 ಬೌಂಡರ, 3 ಸಿಕ್ಸರ್‌ ಸಿಡಿಸಿ ಅರ್ಧಶತಕ ಗಳಿಸಿದರು. ಭಾರತ ತಂಡ ಗೆಲ್ಲುವಲ್ಲಿ ಹಾರ್ದಿಕ್‌ ಮುಖ್ಯ ಪಾತ್ರ ವಹಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News