ಕ್ರಿಕೆಟ್ ಭವಿಷ್ಯ ಹಾಳು ಮಾಡ್ತೇನೆ ಅಂತಾ ಗಲಾಟೆ ಮಾಡ್ತಾಳೆ! ಬೀದಿಗೆ ಬಿತ್ತು ಮಿಸ್ಟರಿ ಬೌಲರ್ ಖ್ಯಾತಿಯ ಕ್ರಿಕೆಟಿಗನ ಪ್ರೇಮ್ ಕಹಾನಿ

KC Cariappa Controversy: ಕೆಸಿ ಕಾರಿಯಪ್ಪ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಕಾರಿಯಪ್ಪ ಆರ್ ಟಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಎರಡು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Written by - Bhavishya Shetty | Last Updated : Dec 25, 2023, 07:09 PM IST
    • ಕ್ರಿಕೆಟಿಗ ಕೆಸಿ ಕಾರಿಯಪ್ಪ ವಿರುದ್ಧ ದೂರು ದಾಖಲು
    • ಮದುವೆಯಾಗುವುದಾಗಿ ವಂಚಿಸಿದ್ದಾರೆ ಎಂದು ಮಾಜಿ ಪ್ರಿಯತಮೆ ಆರೋಪ
    • ಸದ್ಯ ಎರಡು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ
ಕ್ರಿಕೆಟ್ ಭವಿಷ್ಯ ಹಾಳು ಮಾಡ್ತೇನೆ ಅಂತಾ ಗಲಾಟೆ ಮಾಡ್ತಾಳೆ! ಬೀದಿಗೆ ಬಿತ್ತು ಮಿಸ್ಟರಿ ಬೌಲರ್ ಖ್ಯಾತಿಯ ಕ್ರಿಕೆಟಿಗನ ಪ್ರೇಮ್ ಕಹಾನಿ title=
KC Cariappa

KC Cariappa Controversy: ಕ್ರಿಕೆಟಿಗ ಕೆಸಿ ಕಾರಿಯಪ್ಪ ತಮ್ಮ ಮಾಜಿ ಪ್ರೇಯಸಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇನ್ನೊಂದೆಡೆ ಆಕೆಯೂ ಕಾರಿಯಪ್ಪ ವಿರುದ್ಧ ಪ್ರತ್ಯೇಕ್ ದೂರು ದಾಖಲಿಸಿದ್ದು, ಇವರಿಬ್ಬರ ಪ್ರೇಮ್ ಕಹಾನಿ ಬೀದಿಗೆ ಬಂದಿದೆ.

ಕೆಸಿ ಕಾರಿಯಪ್ಪ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಕಾರಿಯಪ್ಪ ಆರ್ ಟಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಎರಡು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಇದನ್ನೂ ಓದಿ: ಭಾರತ ಅಥವಾ ಪಾಕಿಸ್ತಾನ ಅಲ್ಲ… ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಏಕೈಕ ತಂಡ ಇದುವೇ

ಮದುವೆಯಾಗುವುದಾಗಿ ವಂಚಿಸಿದ್ದಾರೆ ಎಂದು ಕಾರಿಯಪ್ಪ ವಿರುದ್ದ ಮಾಜಿ ಪ್ರಿಯತಮೆ ದೂರು ನೀಡಿದ್ದರೆ, ಆಕೆ ತನ್ನ ಕ್ರಿಕೆಟ್ ಭವಿಷ್ಯವನ್ನೇ ಹಾಳು ಮಾಡುತ್ತೇನೆ ಎಂದು ಬೆದರಿಸುತ್ತಾಳೆ ಅಂತಾ ಕಾರಿಯಪ್ಪ ದೂರು ನೀಡಿದ್ದಾರೆ.

ಕಾರಿಯಪ್ಪ ಆರೋಪವೇನು?

“ಒಂದೂವರೆ ವರ್ಷದ ಹಿಂದೆ ಬ್ರೇಕ್ ಅಪ್ ಮಾಡಿಕೊಂಡಿದ್ದೇನೆ. ಆಕೆಯ ಅಭ್ಯಾಸಗಳು ಸರಿ ಇಲ್ಲ. ಈಗ ನನ್ನ ಕ್ರಿಕೆಟ್ ಭವಿಷ್ಯ ಹಾಳು ಮಾಡುತ್ತೇನೆ ಎಂದು ಗಲಾಟೆ ಮಾಡುತ್ತಿದ್ದಾಳೆ. ಮನೆ ಬಳಿ ಬಂದು ಗಲಾಟೆ ಮಾಡುತ್ತಾಳೆ” ಎಂದು ಕಾರಿಯಪ್ಪ ದೂರು ನೀಡಿದ್ದಾರೆ.

ಕಾರಿಯಪ್ಪ ಮಾಜಿ ಪ್ರೇಯಸಿ ಆರೋಪ ಇದು…

“ನಾನು‌ ಮತ್ತು ಕಾರಿಯಪ್ಪ ಇನ್ಟಾಗ್ರಾಂನಲ್ಲಿ ಪರಿಚಯವಾಗಿದ್ದು, ಇಬ್ಬರದ್ದೂ ಒಂದೇ ಸಮುದಾಯ. ಮೊದಲು ಮಾತನಾಡುವಾಗ ನನಗೆ ಗರ್ಲ್ ಫ್ರೆಂಡ್ ಇದ್ದಳು, ಆದರೆ ಈಗ ಬ್ರೇಕ್ ಅಪ್ ಮಾಡಿಕೊಂಡಿದ್ದೇನೆ. ನಾವಿಬ್ಬರು ಮದುವೆಯಾಗೋಣ ಎಂದಿದ್ದರು, ಅದಾದ ಬಳಿಕ ನಾವಿಬ್ಬರು ಭೇಟಿಯಾದೆ, ಆ ಬಳಿಕ ನಾನು ಪ್ರಗ್ನೆಂಟ್ ಆದೆ, ನನಗೆ ಮಗು ಬೇಕು ಎಂದು ಹೇಳಿದ್ದೆ. ಗಣೇಶ ವಿಸರ್ಜನೆ ದಿನ ಬಗಲುಗುಂಟೆಯ ಮನೆಗೆ ಹೋಗಿ ಅವರ ಮನೆಯವರನೆಲ್ಲಾ ಮೀಟ್ ಮಾಡಿಸಿದ್ದರು, ಆ ಸಂದರ್ಭದಲ್ಲಿ ಅವರ ಮನೆಯವರು ಚೆನ್ನಾಗಿ ಮಾತನಾಡಿಸಿದ್ದರು. ಆದರೆ ಆ ನಂತರ ನಾಗಸಂದ್ರ ಬಳಿ ಕಾರು ನಿಲ್ಲಿಸಿ ಕಾರಿಗೆ ಚೈಲ್ಡ್ ಲಾಕ್ ಮಾಡಿ ಅಬಾಷನ್ ಮಾತ್ರೆ ನೀಡಿದರು. ನಾನು‌ ಮಗು ಬೇಕು ಎಂದರೂ ಕೂಡ ಬಲವಂತವಾಗಿ ಐದು ದಿನದ ಮಾತ್ರೆ ನೀಡಿದ್ರು. ಒಂದು ವಾರದ ಬಳಿಕ ಬ್ಲೀಡಿಂಗ್ ಆಗಿ ಅಬಾಷನ್ ಆಯ್ತು. ಕೇಳಿದಾಗ ಮತ್ತೆ ಕಾರಣಗಳನ್ನು ಹೇಳಿದರು. ಆ ಬಳಿಕ ಅವರ ಹಳೆಯ ಗರ್ಲ್’ಫ್ರೆಂಡ್ ಕಾಲ್ ಮಾಡಿದ್ರು. ನಾವು ಬ್ರೇಕ್ ಅಪ್ ಆಗಿಲ್ಲ. ಮೂರು ತಿಂಗಳಿಂದ ಅವೈಡ್ ಮಾಡಿಕೊಂಡಿದ್ದೆವು ಎಂದು ಹೇಳಿದ್ದರು. ಎಮೋಷನಲಿ ಮೆಂಟಲಿ ಟಾರ್ಚರ್ ಮಾಡ್ತಿದ್ದರು. ಮಾಡಲಿಂಗ್ ಮಾಡೋದು ಏಕೆ..? ಹುಡುಗರ ಜೊತೆ ಹೋಗೋದು ಯಾಕೆ..? ಅಂತೆಲ್ಲಾ ಟಾರ್ಚರ್ ಮಾಡಿದ್ರು. ಒಂದು ಸಲ ಅವರ ಪೋಷಕರು ನಮ್ಮ ಪೋಷಕರನ್ನು ಭೇಟಿಯಾಗಿ, ನೀವೆ ಮದುವೆ ಮಾಡಿಕೊಡಬೇಕು. 2BHK ಫ್ಲಾಟ್ ಬೇಕು ಎಂದೆಲ್ಲಾ ಕೇಳಿದ್ರು. ಅಷ್ಟೇ ಅಲ್ಲದೆ, ನಮ್ಮ ಹುಡುಗ ಎನಾದ್ರು‌ ಮಾಡ್ಲಿ‌ ನೀನು ಯಾಕೆ ಹೋದೆ ಎಂದೆಲ್ಲಾ ಅವಾಚ್ಯ ಶಬ್ದ ಬಳಕೆ ಮಾಡಿದ್ದರು. ನನ್ನ ಲೈಫ್;ನಲ್ಲಿ ಮೆಂಟಲ್, ಫಿಸಿಕಲಿ ಎಲ್ಲಾ ಹಾಳು ಮಾಡಿದರು. ಮದುವೆಯಾಗುವುದಾಗಿ ನಂಬಿಸಿ ಪದೇ ಪದೇ ಮೋಸ ಮಾಡಿದ್ರು” ಎಂದು ಹೇಳಿಕೆ ನೀಡಿದ್ದಾರೆ.

“ಒಮ್ಮೆ ಗುಜರಾತ್’ಗೆ ಕೂಡ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಿಸಸ್ ಕರಿಯಪ್ಪ ಎಂದು ಎಲ್ಲಾ ಕಡೆ ನಮೂದಿಸಿದ್ದಾರೆ. ಆದರೆ ಇದೀಗ ನಮ್ಮ ತಂದೆ ತಾಯಿ ಒತ್ತಡ ಇದೆ ಅಂತಿದ್ದಾರೆ. ನನ್ನ ಪೋನ್ ಕಾಲ್ ಪಿಕ್ ಮಾಡ್ತಿಲ್ಲ. ಡಿಸೆಂಬರ್ 22 ರಂದು ಅವರನ್ನು ಭೇಟಿ ಮಾಡಲು ಹೋಗಿದ್ದೆ. ಬೇರೊಂದು ಹುಡುಗಿ ಜೊತೆ ಅವರ ನಾಯಿ ಇರುವ ಪೋಟೊ ಹಾಕಿದ್ದರು. ನನ್ನ ಅವೈಡ್ ಮಾಡ್ತಿದ್ದಾರೆ, ನನ್ನ ಮರೆತುಬಿಡು ಅಂತಾ ಹೇಳ್ತಿದ್ದಾರೆ. ಕಾರಿಯಪ್ಪಯಿಂದ ನನಗೆ ಲೈಂಗಿಕ ಕಾಯಿಲೆ ಕೂಡ ಹರಡಿದೆ. ನಾನು ಡಿಫ್ರೆಶನ್’ನಲ್ಲಿ ಇದ್ದೇನೆ. ನನ್ನ ಕೈ ಕಟ್ ಮಾಡಿಕೊಳ್ಳಲು ಚಾಕು ತರಿಸಿಕೊಂಡಿದ್ದೇನೆ. ಅಂದಹಾಗೆ ನಾನು ಅವರ ಮನೆ ಒಳಗೆ ಹೋಗಿಲ್ಲ, ಬೆದರಿಕೆ ಒಡ್ಡಿಲ್ಲ. ಅವರ ಪೋಷಕರೊಂದಿಗೆ ಎಂದಿಗೂ ಮಾತನಾಡಿಲ್ಲ. ನಾನು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ ಎಂದು ಹೇಳುತ್ತಿದ್ದಾರೆ. ಕೆಸಿ ಕಾರಿಯಪ್ಪ ಗಾಂಜಾ ಸೇವಿಸ್ತಾರೆ, ನಾನು ಬಿಯರ್ ಮಾತ್ರ ಕುಡಿಯುತ್ತೇನೆ. ನಾನು ಎಲ್ಲಾ ರೀತಿಯ ತನಿಖೆ, ತಪಾಸಣೆಗೆ ರೆಡಿ ಇದ್ದೇನೆ” ಎಂದು ಸಂತ್ರಸ್ತೆ ಯುವತಿ ಹೇಳಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ನಾನು ಹೇಳಿದಂತೆ ಮಾಡಿದ್ರೆ ವಿರಾಟ್ ಪಕ್ಕಾ ಔಟ್ ಆಗ್ತಾರೆ… ಸೀಕ್ರೆಟ್ ಬಿಚ್ಚಿಟ್ಟ ಎಬಿ ಡಿವಿಲಿಯರ್ಸ್

ಕೆಸಿ ಕಾರಿಯಪ್ಪ ಯಾರು? 

ಕೆಸಿ ಕಾರಿಯಪ್ಪ ಐಪಿಎಲ್‌’ನಲ್ಲಿ ಮಿಸ್ಟರಿ ಬೌಲರ್ ಎಂದೇ ಖ್ಯಾತರಾಗಿದ್ದಾರೆ. 2021ರ ಸೀಸನ್‌’ಗೂ ಮುನ್ನ ರಾಜಸ್ಥಾನ್ ರಾಯಲ್ಸ್ ಅವರನ್ನು 20 ಲಕ್ಷ ರೂ.ಗೆ ಖರೀದಿಸಿತ್ತು. ಆದರೆ ಈ ಸೀಸನ್‌’ಗೆ ಮುಂಚೆಯೇ ಅವರನ್ನು ಬಿಡುಗಡೆ ಮಾಡಿದೆ. 2015 ರಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು 2.40 ಕೋಟಿ ರೂಪಾಯಿಗೆ ಖರೀದಿಸಿತು. ಆ ಸಂದರ್ಭದಲ್ಲಿ ಅವರ ಮೂಲ ಬೆಲೆ 10 ಲಕ್ಷವಾಗಿತ್ತು. ಆ ಋತುವಿನಲ್ಲಿ ಅವರು ಆಡಿದ್ದು ಕೇವಲ ಒಂದು ಪಂದ್ಯವಾಗಿದ್ದರೂ ಸಹ ಎರಡು ಓವರ್‌’ಗಳಲ್ಲಿ 28 ರನ್‌ ನೀಡಿ ಎಬಿ ಡಿವಿಲಿಯರ್ಸ್‌ ವಿಕೆಟ್‌ ಪಡೆದರು. ಇದಾದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News