T20ಯಲ್ಲಿ ಪಂದ್ಯ ಸೋತ ಬಳಿಕ ಸೂರ್ಯ ಕುಮಾರ್ ಯಾದವ್ ಪದೇ ಪದೇ ತೆಗೆದುಕೊಂಡಿದ್ದು ಈ ಆಟಗಾರನ ಹೆಸರನ್ನು

IND vs AUS 3rd T20, Suryakumar Yadav Statement :ಪಂದ್ಯ ಶ್ರೇಷ್ಠ ಎನಿಸಿಕೊಂಡ  ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಬಿರುಸಿನ ಇನಿಂಗ್ಸ್ ಆಡಿದರು. ಸೋಲಿನ ನಂತರ ಸೂರ್ಯಕುಮಾರ್ ಯಾದವ್ ತಮ್ಮ  ಪ್ಲಾನ್ ಅನ್ನು ಹಂಚಿಕೊಂಡಿದ್ದಾರೆ. 

Written by - Ranjitha R K | Last Updated : Nov 29, 2023, 09:48 AM IST
  • T20 ಸರಣಿಯ 3ನೇ ಪಂದ್ಯದಲ್ಲಿ ಭಾರತಕ್ಕೆ ಸೋಲು
  • ಪ್ರಯೋಜನಕ್ಕೆ ಬರಲಿಲ್ಲ ರಿತುರಾಜ್ ಶತಕ
  • ವಿಫಲವಾದ ಟೀಂ ಇಂಡಿಯಾ ನಾಯಕನ ಪ್ಲಾನ್
T20ಯಲ್ಲಿ ಪಂದ್ಯ ಸೋತ ಬಳಿಕ ಸೂರ್ಯ ಕುಮಾರ್ ಯಾದವ್ ಪದೇ ಪದೇ ತೆಗೆದುಕೊಂಡಿದ್ದು ಈ ಆಟಗಾರನ ಹೆಸರನ್ನು  title=

IND vs AUS 3rd T20, Suryakumar Yadav Statement : ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯಲ್ಲಿ ಭಾರತ ತನ್ನ ಮೊದಲ ಸೋಲನ್ನು  ಕಂಡಿದೆ. ಗುವಾಹಟಿಯಲ್ಲಿ ನಡೆದ ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್‌ಗಳ ಜಯ ಸಾಧಿಸಿತು. ಪಂದ್ಯ ಶ್ರೇಷ್ಠ ಎನಿಸಿಕೊಂಡ  ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಬಿರುಸಿನ ಇನಿಂಗ್ಸ್ ಆಡಿದರು. ಸೋಲಿನ ನಂತರ ಸೂರ್ಯಕುಮಾರ್ ಯಾದವ್ ತಮ್ಮ  ಪ್ಲಾನ್ ಅನ್ನು ಹಂಚಿಕೊಂಡಿದ್ದಾರೆ. 

ಪ್ರಯೋಜನಕ್ಕೆ ಬರಲಿಲ್ಲ ರಿತುರಾಜ್ ಶತಕ : 
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಸರಣಿಯ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿದೆ. ನಿಗದಿತ 20 ಓವರ್‌ಗಳಲ್ಲಿ ಭಾರತ  3 ವಿಕೆಟ್‌ಗೆ 
222 ರನ್ ಗಳಿಸಿತು. ಇದಾದ ಬಳಿಕ ಗ್ಲೆನ್ ಮ್ಯಾಕ್ಸ್ ವೆಲ್ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ 5 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಮ್ಯಾಕ್ಸ್‌ವೆಲ್ 48 ಎಸೆತಗಳಲ್ಲಿ 8 ಬೌಂಡರಿ ಮತ್ತು ಸಿಕ್ಸರ್‌ಗಳ ನೆರವಿನಿಂದ 104 ರನ್ ಗಳಿಸಿ ಅಜೇಯರಾಗಿ ಉಳಿದರು. ಇದಕ್ಕೂ ಮೊದಲು, ರುತುರಾಜ್ ಗಾಯಕ್ವಾಡ್  T20 ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಬಾರಿಸಿದರು. ಅಜೇಯ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದರು.

ಇದನ್ನೂ ಓದಿ : ಈ ವಿಚಾರದಲ್ಲಿ ಫುಟ್ಬಾಲ್ ದಿಗ್ಗಜರಾದ ರೊನಾಲ್ಡೋ-ಮೆಸ್ಸಿಯನ್ನೇ ಹಿಂದಿಕ್ಕಿದ ವಿರಾಟ್-ರೋಹಿತ್!

ವಿಫಲವಾದ ಪ್ಲಾನ್ :  
ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಆದಷ್ಟು ಬೇಗ  ಔಟ್ ಮಾಡುವುದು ನಮ್ಮ ಪ್ಲಾನ್ ಆಗಿತ್ತು ಎಂದು ಸೂರ್ಯ ಕುಮಾರ್ ಯಾದವ್ ಪಂದ್ಯದ ಬಳಿಕ  ಹೇಳಿದ್ದಾರೆ. ಇಷ್ಟು ಇಬ್ಬನಿಯೊಂದಿಗೆ 220 ರನ್‌ಗಳನ್ನು ರಕ್ಷಿಸಲು ಬೌಲರ್‌ಗಳು ಕಷ್ಟಪಡಬೇಕಾಗುತ್ತದೆ. ಆಸ್ಟ್ರೇಲಿಯಾ ಯಾವಾಗಲೂ ಒಳ್ಳೆಯ ಸ್ಪರ್ಧೆ ನೀಡುತ್ತದೆ ಎಂದು ಹೇಳಿದ್ದಾರೆ. ನಾವು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಬೇಗನೆ ಔಟ್ ಮಾಡಲು ಪ್ರಯತ್ನಿಸಬೇಕು ಎಂದು ತಂಡಕ್ಕೂ ಹೇಳಿದ್ದೆ ಎಂದಿದ್ದಾರೆ ಟೀಂ ಇಂಡಿಯಾ ನಾಯಕ. 

33 ವರ್ಷದ ಸೂರ್ಯಕುಮಾರ್ ಸೋಲಿನ ನಡುವೆಯೂ ತಂಡದ ಆಟಗಾರರನ್ನು ಹುರಿದುಂಬಿಸಿದರು. ನನ್ನ ತಂಡದ ಆಟಗಾರರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಹೇಳಿದ್ದಾರೆ.  5 ಪಂದ್ಯಗಳ ಸರಣಿಯಲ್ಲಿ ಭಾರತ ಮೊದಲ ಸೋಲನ್ನು ಎದುರಿಸಿದೆ. ಇದೀಗ ಸರಣಿಯ ನಾಲ್ಕನೇ ಟಿ20 ಪಂದ್ಯ ಡಿಸೆಂಬರ್ 1 ಶುಕ್ರವಾರ ರಾಯ್‌ಪುರದಲ್ಲಿ ನಡೆಯಲಿದೆ.

ಇದನ್ನೂ ಓದಿ : ನನ್ನ ಮದುವೆ ಇದೆ… ನನಗೆ ರಜೆ ಕೊಡಿ: ಬಿಸಿಸಿಐ ಮುಂದೆ ವಿಶೇಷ ಮನವಿಯಿಟ್ಟ ಟೀಂ ಇಂಡಿಯಾದ ಸ್ಟಾರ್ ವೇಗಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News