BCCI : ಟೀಂ ಇಂಡಿಯಾ ಈ 7 ಆಟಗಾರರಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ

Team India : ಈ ಪಟ್ಟಿಯಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿತ್ತು. ಟೀಂ ಇಂಡಿಯಾದ ಹಲವು ಆಟಗಾರರು ಭಾಗ್ಯ ಬಾಗಿಲು ತೆರೆದುಕೊಂಡಿದೆ, ಹಲವು ಆಟಗಾರರು ಭಾರಿ ನಿರಾಸೆ ಅನುಭವಿಸಿದ್ದಾರೆ . ಬಿಸಿಸಿಐ ಈ ಪಟ್ಟಿಯಿಂದ 7 ಆಟಗಾರರನ್ನು ಹೊರಗಿಟ್ಟಿದೆ, ಅದರ ನಂತರ ಈಗ ಅವರ ವೃತ್ತಿಜೀವನದ ಬಗ್ಗೆ ಬಿಕ್ಕಟ್ಟಿನ ಮೋಡ ಕವಿದಿದೆ.

Written by - Channabasava A Kashinakunti | Last Updated : Mar 28, 2023, 07:38 AM IST
  • ಕಾಂಟ್ರಾಕ್ಟ್ ಪಟ್ಟಿಯಿಂದ ಈ ಆಟಗಾರರು ಔಟ್
  • ಈ ಆಟಗಾರರ ವೃತ್ತಿಜೀವನ ಮುಗಿದಿದೆ!
  • ತಂಡಕ್ಕೆ ಮರಳಬಹುದು ಈ ಆಟಗಾರ
BCCI : ಟೀಂ ಇಂಡಿಯಾ ಈ 7 ಆಟಗಾರರಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ title=

BCCI Contract List : ಪ್ರತಿ ವರ್ಷ ಬಿಸಿಸಿಐ ಟೀಂ ಇಂಡಿಯಾದ ಆಟಗಾರರ ಪ್ರದರ್ಶನದ ಆಧಾರದ ಮೇಲೆ ವಾರ್ಷಿಕ ಗುತ್ತಿಗೆ(ಕಾಂಟ್ರಾಕ್ಟ್ ) ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಮಂಡಳಿಯು 2022-23 ನೇ ಸಾಲಿನ ವಾರ್ಷಿಕ ಕಾಂಟ್ರಾಕ್ಟ್  ಪಟ್ಟಿಯನ್ನು ಮಾರ್ಚ್ 26 ರಂದು ಬಿಡುಗಡೆ ಮಾಡಿತು. ಈ ಪಟ್ಟಿಯಲ್ಲಿ ಹಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿತ್ತು. ಟೀಂ ಇಂಡಿಯಾದ ಹಲವು ಆಟಗಾರರು ಭಾಗ್ಯ ಬಾಗಿಲು ತೆರೆದುಕೊಂಡಿದೆ, ಹಲವು ಆಟಗಾರರು ಭಾರಿ ನಿರಾಸೆ ಅನುಭವಿಸಿದ್ದಾರೆ . ಬಿಸಿಸಿಐ ಈ ಪಟ್ಟಿಯಿಂದ 7 ಆಟಗಾರರನ್ನು ಹೊರಗಿಟ್ಟಿದೆ, ಅದರ ನಂತರ ಈಗ ಅವರ ವೃತ್ತಿಜೀವನದ ಬಗ್ಗೆ ಬಿಕ್ಕಟ್ಟಿನ ಮೋಡ ಕವಿದಿದೆ.

ಕಾಂಟ್ರಾಕ್ಟ್ ಪಟ್ಟಿಯಿಂದ ಈ ಆಟಗಾರರು ಔಟ್

ಬಿಸಿಸಿಐ ಈ ವರ್ಷದ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದ ತಕ್ಷಣ. ಈ ಪಟ್ಟಿಯಿಂದ 7 ಭಾರತೀಯ ಆಟಗಾರರು ಹೊರಗುಳಿದಿದ್ದಾರೆ. ಇದರಲ್ಲಿ ಹಲವು ಅನುಭವಿ ಆಟಗಾರರಿದ್ದು, ಯುವ ಆಟಗಾರರೂ ಪಟ್ಟಿಯಲ್ಲಿ ಸೇರಿದ್ದಾರೆ. ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ, ವೇಗದ ಬೌಲರ್ ಇಶಾಂತ್ ಶರ್ಮಾ, ವೇಗದ ಬೌಲರ್ ಭುವನೇಶ್ವರ್ ಕುಮಾರ್, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ, ಬ್ಯಾಟ್ಸ್‌ಮನ್ ಹನುಮ ವಿಹಾರಿ, ಆರಂಭಿಕ ಮಯಾಂಕ್ ಅಗರ್ವಾಲ್ ಮತ್ತು ಆಲ್‌ರೌಂಡರ್ ದೀಪಕ್ ಚಹಾರ್ ಸೇರಿದ್ದಾರೆ. ಬಿಸಿಸಿಐ ಈ ಆಟಗಾರರನ್ನು ಈ ವರ್ಷದ ಗುತ್ತಿಗೆ ಪಟ್ಟಿಯಿಂದ ಹೊರಗಿಟ್ಟಿದೆ.

ಇದನ್ನೂ ಓದಿ : Team India: ಟೀಂ ಇಂಡಿಯಾದ ಸ್ಟಾರ್ ಆಟಗಾರನ ತಂದೆ ನಾಪತ್ತೆ: ತೀವ್ರ ಹುಡುಕಾಟ!!

ಈ ಆಟಗಾರರ ವೃತ್ತಿಜೀವನ ಮುಗಿದಿದೆ!

ಮಂಡಳಿಯು 7 ಆಟಗಾರರನ್ನು ಪಟ್ಟಿಯಿಂದ ತೆಗೆದುಹಾಕುತ್ತಿದ್ದಂತೆ, ಈಗ ಅವರ ವೃತ್ತಿಜೀವನದ ಮೇಲೆ ಪ್ರಶ್ನೆಗಳು ಉದ್ಭವಿಸಿವೆ. ಈ ಆಟಗಾರರು ದೀರ್ಘಕಾಲದವರೆಗೆ ತಂಡಕ್ಕಾಗಿ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈಗ ಈ ಆಟಗಾರರ ವೃತ್ತಿ ಜೀವನ ಅಪಾಯದಲ್ಲಿದೆ. ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್, ದೀಪಕ್ ಚಹಾರ್ ಮತ್ತು ಹನುಮ ವಿಹಾರಿ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಆದರೆ, ಈ ಆಟಗಾರರು ದೀರ್ಘಕಾಲದವರೆಗೆ ತಂಡಕ್ಕಾಗಿ ಯಾವುದೇ ಪಂದ್ಯವನ್ನು ಆಡಿಲ್ಲ, ಆದರೆ ಸಾಹಾ ಈಗಾಗಲೇ ತಂಡದಲ್ಲಿ ಅವಕಾಶ ಪಡೆಯುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ. 2022ರ ಜನವರಿಯಿಂದ ರಹಾನೆಗೂ ತಂಡದಲ್ಲಿ ಅವಕಾಶ ಸಿಕ್ಕಿಲ್ಲ.

ತಂಡಕ್ಕೆ ಮರಳಬಹುದು ಈ ಆಟಗಾರ 

ಕೈಬಿಡಲ್ಪಟ್ಟ ಆಟಗಾರನು ತಂಡಕ್ಕೆ ಮರಳಬಹುದು. ಮಯಾಂಕ್ ಅಗರ್ವಾಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯದ ನಂತರ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದರು. ಮಯಾಂಕ್ ಅಬ್ಬರದ ಪ್ರದರ್ಶನ ನೀಡುತ್ತಲೇ ರನ್ ಗಳ ಬಿರುಗಾಳಿ ತಂದಿದ್ದರು. 900ಕ್ಕೂ ಹೆಚ್ಚು ರನ್ ಗಳಿಸಿದ್ದ ಅವರು ದ್ವಿಶತಕವನ್ನೂ ಗಳಿಸಿದ್ದರು. ಅವರ ಪ್ರದರ್ಶನ ನೋಡಿದರೆ ಮತ್ತೆ ತಂಡಕ್ಕೆ ಕರೆತರಬಹುದು.

ಇದನ್ನೂ ಓದಿ : IPL 2023: ಕೊಲ್ಕತ್ತಾ ನೈಟ್ ರೈಡರ್ಸ್’ಗೆ ಹೊಸ ನಾಯಕ! ಶ್ರೇಯಸ್ ಅಯ್ಯರ್ ಬದಲು ಈ ಆಟಗಾರನದ್ದೇ ಸಾರಥ್ಯ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News