AUS ಸರಣಿಗೂ ಮುನ್ನ ಜಡೇಜಾಗೆ ಬಿಸಿಸಿಐ ಷರತ್ತು- ಈ ಕೆಲಸ ಮಾಡು ಇಲ್ಲವೇ...

BCCI condition for Ravindra Jadeja : ಫೆಬ್ರವರಿ 9 ರಂದು ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ರವೀಂದ್ರ ಜಡೇಜಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಬಿಸಿಸಿಐ ಅವರಿಗೆ ಷರತ್ತು ಹಾಕಿದೆ. 

Written by - Chetana Devarmani | Last Updated : Jan 14, 2023, 08:04 PM IST
  • ಫೆಬ್ರವರಿಯಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ
  • AUS ಸರಣಿಗೂ ಮುನ್ನ ಜಡೇಜಾಗೆ ಬಿಸಿಸಿಐ ಷರತ್ತು
  • ಬಿಸಿಸಿಐ ರವೀಂದ್ರ ಜಡೇಜಾ ಅವರ ಮುಂದೆ ಇಟ್ಟ ಷರತ್ತಿದು
AUS ಸರಣಿಗೂ ಮುನ್ನ ಜಡೇಜಾಗೆ ಬಿಸಿಸಿಐ ಷರತ್ತು- ಈ ಕೆಲಸ ಮಾಡು ಇಲ್ಲವೇ... title=

Cricket News: ಫೆಬ್ರವರಿಯಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಎರಡು ಟೆಸ್ಟ್ ಪಂದ್ಯಗಳಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದೆ. ಫೆಬ್ರವರಿ 9 ರಂದು ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. ರವೀಂದ್ರ ಜಡೇಜಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಷ್ಯಾಕಪ್‌ನಲ್ಲಿ ಗಾಯಗೊಂಡಿದ್ದರು. ಆತನ ಮೊಣಕಾಲಿಗೆ ಗಾಯವಾಗಿತ್ತು. ಕಳೆದ 5 ತಿಂಗಳಿಂದ ಅವರು ಮೈದಾನದಲ್ಲಿ ಕಾಣಿಸಿಯೇ ಇರಲಿಲ್ಲ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆದರು. ಆದರೆ ಅದಕ್ಕೂ ಮುನ್ನ ಅವರು ಹೊರಗಿದ್ದರು. ಇದೀಗ ಅವರನ್ನು ಬಾರ್ಡರ್-ಗವಾಸ್ಕರ್ ಸರಣಿಯ ಎರಡು ಟೆಸ್ಟ್ ಪಂದ್ಯಗಳಿಗೆ ತಂಡದ ಭಾಗವಾಗಿ ಮಾಡಲಾಗಿದೆ. ಆದರೆ ಬಿಸಿಸಿಐ ಅವರಿಗೆ ಷರತ್ತು ಹಾಕಿದೆ. 

ನಾಗ್ಪುರ ಟೆಸ್ಟ್ ಪಂದ್ಯಕ್ಕೂ ಮುನ್ನ ಬಿಸಿಸಿಐ ರವೀಂದ್ರ ಜಡೇಜಾ ಅವರ ಮುಂದೆ ಕನಿಷ್ಠ ಒಂದು ದೇಶೀಯ ಪಂದ್ಯವನ್ನಾದರೂ ಆಡಬೇಕು ಎಂದು ಷರತ್ತು ಹಾಕಿದೆ. ಮೂಲಗಳ ಪ್ರಕಾರ, ಜಡೇಜಾ ಅವರು ದೇಶೀಯ ಪಂದ್ಯವನ್ನು ಆಡಬೇಕಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ. ಜಡೇಜಾ ಫಿಟ್ ಆಗಿದ್ದರೆ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್ ಮನ್ ಕೊರತೆ ನೀಗಲಿದ್ದು, ಭಾರತ ತಂಡ 5 ಬೌಲರ್ ಗಳೊಂದಿಗೆ ಮೈದಾನಕ್ಕಿಳಿಯಬಹುದು. 

ಇದನ್ನೂ ಓದಿ : IND vs SL : ಟೀಂ ಇಂಡಿಯಾ ಪ್ಲೇಯಿಂಗ್ 11 ನಲ್ಲಿ ಭಾರಿ ಬದಲಾವಣೆ!

ಜಡೇಜಾ ಗಾಯಗೊಂಡ ನಂತರ ಅಕ್ಷರ್ ಪಟೇಲ್ ಭಾರತಕ್ಕಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುತ್ತಿದ್ದಾರೆ. ಬಾಲಿಂಗ್‌ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಅದ್ಭುತಗಳನ್ನು ಮಾಡುತ್ತಿದ್ದಾರೆ. ಬಾಂಗ್ಲಾದೇಶದ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದರು. 2 ಪಂದ್ಯಗಳಲ್ಲಿ 8 ಬ್ಯಾಟ್ಸ್ ಮನ್ ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದರು.

ಇದಲ್ಲದೆ, ಅವರು 3 ಇನ್ನಿಂಗ್ಸ್‌ಗಳಲ್ಲಿ 52 ರನ್ ಬಾರಿಸಿದ್ದರು. ಎರಡನೇ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅವರು 34 ರನ್ ಗಳಿಸಿದರು. ಅವರು ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಹೊರಬಂದರು ಮತ್ತು ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದರು. ಈ ಪಂದ್ಯದಲ್ಲಿ ರಾಹುಲ್, ಪಂತ್, ಗಿಲ್ ಮತ್ತು ವಿರಾಟ್ ಅವರ ಪೈಕಿ ಯಾರೊಬ್ಬರೂ 10ರ ಗಡಿ ದಾಟಲು ಸಾಧ್ಯವಾಗಲಿಲ್ಲ.

ಅಂಕಿಅಂಶಗಳಲ್ಲಿ ರವೀಂದ್ರ ಜಡೇಜಾಗೆ ಸಾಟಿಯಿಲ್ಲ. ಇಂಗ್ಲೆಂಡ್‌ನಲ್ಲಿ ಭಾರತದ ಪರ ಶತಕ ಬಾರಿಸಿದ್ದರು. ಆದರೆ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅದಕ್ಕೂ ಮೊದಲು, ಸ್ವದೇಶಿ ಸರಣಿಯಲ್ಲಿ, ಅವರು ಶ್ರೀಲಂಕಾ ವಿರುದ್ಧ ಮೊಹಾಲಿ ಟೆಸ್ಟ್‌ನಲ್ಲಿ 175 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು ಮತ್ತು 9 ವಿಕೆಟ್‌ಗಳನ್ನು ಸಹ ಪಡೆದರು.

ಇದನ್ನೂ ಓದಿ : ಕ್ರಿಕೆಟ್‌ ಲೋಕದಲ್ಲಿ ಎಂ.ಎಸ್ ಧೋನಿ ಕಮಾಲ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News