ಬಾಬರ್ ಅಜಂ ನಾಯಕತ್ವ ಬೆದರಿದ ಹಸುವಿನಂತಿತ್ತು: ಮೊಹಮ್ಮದ್ ಹಫೀಜ್

ಸೋಲಿನ ಬೆನ್ನಲ್ಲಿಯೇ ಪಾಕಿಸ್ತಾನದ ಆಲ್‍ರೌಂಡರ್ ಮೊಹಮ್ಮದ್ ಹಫೀಜ್ ಅವರು ಬಾಬರ್ ಅಜಂ ನಾಯಕತ್ವವನ್ನು ಕಟುವಾಗಿ ಟೀಕಿಸಿದ್ದಾರೆ. 

Written by - Puttaraj K Alur | Last Updated : Oct 25, 2022, 01:29 PM IST
  • ಬಾಬರ್ ಅಜಂ ನಾಯಕತ್ವ ಟೀಕಿಸಿದ ಪಾಕಿಸ್ತಾನದ ಆಲ್‍ರೌಂಡರ್ ಮೊಹಮ್ಮದ್ ಹಫೀಜ್
  • ಮೊಹ್ಮದ್ ನವಾಝ್‍ಗೆ 20ನೇ ಓವರ್ ಬೌಲಿಂಗ್‍ ನೀಡಿದ ಬಾಬರ್ ನಿರ್ಧಾರ ಪಾಕ್ ತಂಡಕ್ಕೆ ವಿನಾಶಕಾರಿ ಆಯಿತು
  • ಗೆಲ್ಲುವ ಪಂದ್ಯದಲ್ಲಿ ಪಾಕ್ ತಂಡ ಸೋಲು ಕಂಡಿದ್ದಕ್ಕೆ ದೊಡ್ಡ ನಿರಾಸೆಯಾಗಿದೆ
ಬಾಬರ್ ಅಜಂ ನಾಯಕತ್ವ ಬೆದರಿದ ಹಸುವಿನಂತಿತ್ತು: ಮೊಹಮ್ಮದ್ ಹಫೀಜ್ title=
ಬಾಬರ್ ನಾಯಕತ್ವ ಟೀಕಿಸಿದ ಹಫೀಜ್!

ನವದೆಹಲಿ: ಟಿ-20 ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಎದುರು ಗೆಲ್ಲುವ ಪಂದ್ಯ ಸೋತ ಬಳಿಕ ಪಾಕಿಸ್ತಾನಕ್ಕೆ ದೊಡ್ಡ ಆಘಾತವಾಗಿದೆ. ಕೆಲವು ಎಡವಟ್ಟು ಮಾಡಿಕೊಂಡು ಆಘಾತಕಾರಿ ಸೋಲು ಕಂಡ ಪಾಕಿಸ್ತಾನ ತಂಡ ಅಭಿಮಾನಿಗಳಿಗೆ ದೊಡ್ಡ ನಿರಾಸೆ ಮೂಡಿಸಿದೆ.

ಈ ಸೋಲಿನ ಬೆನ್ನಲ್ಲಿಯೇ ಪಾಕಿಸ್ತಾನದ ಆಲ್‍ರೌಂಡರ್ ಮೊಹಮ್ಮದ್ ಹಫೀಜ್ ಅವರು ಬಾಬರ್ ಅಜಂ ನಾಯಕತ್ವವನ್ನು ಕಟುವಾಗಿ ಟೀಕಿಸಿದ್ದಾರೆ. ಮೆಲ್ಬೋರ್ನ್ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆಯ ಅಗ್ರ ಕ್ರಮಾಂಕ ಆಘಾತಕಾರಿ ಕುಸಿತ ಕಂಡರೂ ನಂತರ ಚೇತರಿಸಿಕೊಂಡಿತ್ತು. ಹಾರ್ದಿಕ್ ಪಾಂಡ್ಯ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಅದರಲ್ಲೂ ಕೊಹ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.  

ಇದನ್ನೂ ಓದಿ:  Viral Video: ಸೋತ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ತಲೆ ಮೇಲೆ ಕೈ ಹೊತ್ತು ಕುಳಿತ ಪಾಕ್ ಆಟಗಾರರು!

53 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್, 6 ಬೌಂಡರಿ ಇದ್ದ ಅಜೇಯ 82 ರನ್ ಗಳಿಸಿದ ಕೊಹ್ಲಿ ತಾನು ಮತ್ತೊಮ್ಮೆ ಕ್ರಿಕೆಟ್ ಲೋಕದ ಕಿಂಗ್ ಎಂದು ಸಾಬೀತುಪಡಿಸಿದರು. ಹಾರಿಸ್ ರೌಫ್ ಎಸೆದ 19ನೇ ಓವರ್‍ನ ಕೊನೆಯ 2 ಎಸೆತಗಳನ್ನು ಸಿಕ್ಸರ್ ಅಟ್ಟುವ ಮೂಲಕ ಕೊಹ್ಲಿ ಕಾಸ್ಲಿಕ್ ಆಟವಾಡಿದರು. ಮೊಹ್ಮದ್ ನವಾಝ್‍ಗೆ 20ನೇ ಓವರ್ ಬೌಲಿಂಗ್‍ ನೀಡಿದ ಬಾಬರ್ ನಿರ್ಧಾರ ಪಾಕ್ ತಂಡಕ್ಕೆ ವಿನಾಶಕಾರಿ ಆಯಿತು ಅಂತಾ ಹಫೀಜ್ ಟೀಕಿಸಿದ್ದಾರೆ.

ಕೊನೆಯ 6 ಎಸೆತಗಳಲ್ಲಿ 16 ರನ್‍ಗಳಿಗೆ ಎದುರಾಳಿ ತಂಡವನ್ನು ಕಟ್ಟಿಹಾಕಲು ಸಾಧ್ಯವಾಗದೇ, ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಸೋಲು ಅನುಭವಿಸಬೇಕಾಯಿತು. ಇದು ದೊಡ್ಡ ದುರಂತ ಅಂತಾ ಬಾಬರ್ ನಾಯಕತ್ವವನ್ನು ಹಫೀಜ್ ಟೀಕಿಸಿದ್ದಾರೆ.

ಇದನ್ನೂ ಓದಿ: T20 World Cup 2022: ಅರ್ಷದೀಪ್ ಸಿಂಗ್ ಬೌಲಿಂಗ್ ಮಾಡುವಾಗ ತಾಯಿ ಏನ್ ಮಾಡ್ತಾರೆ ಗೊತ್ತಾ..?

‘ಬಾಬರ್ ಅಜಂ ನಾಯಕತ್ವ ಬೆದರಿದ ಹಸುವಿನಂತಿತ್ತು, ಇದನ್ನು ನಾವು ಟೀಕಿಸಲಾಗದು. ಬಾಬರ್ ನಾಯಕತ್ವದಲ್ಲಿ ದೋಷ ಕಂಡಿರುವುದು ಇದು ಸತತ 3ನೇ ಬಾರಿ. ಆದರೆ 32ನೇ ವರ್ಷದಲ್ಲೂ ಅವರು ಕಲಿಯುತ್ತಾರೆ ಎನ್ನುವುದನ್ನು ಕೇಳಿಸಿಕೊಳ್ಳುತ್ತಲೇ ಬಂದಿದ್ದೇವೆ. ಭಾನುವಾರದ ಪಂದ್ಯದಲ್ಲಿ 7 ರಿಂದ 11ನೇ ಓವರ್‍ವರೆಗೂ ಭಾರತ ಪ್ರತಿ ಓವರ್‍ಗೆ 4 ರನ್ ಗಳಿಸಲೂ ಪರದಾಡುತ್ತಿತ್ತು. ಈ ಅವಧಿಯಲ್ಲಿ ಬಾಬರ್ ಏಕೆ ಸ್ಪಿನ್ ಕೋಟಾವನ್ನು ಮುಗಿಸಲಿಲ್ಲ? ಅಂತಾ ಹಫೀಜ್ ಪ್ರಶ್ನಿಸಿದ್ದಾರೆ.

‘ಅಂತಿಮ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಅವರ 2 ನಿರ್ಣಾಯಕ ವಿಕೆಟ್‌ಗಳನ್ನು ನವಾಜ್ ಪಡೆದರು. ಆದರೂ ಹೈವೋಲ್ಟೇಜ್ ಪಂದ್ಯದಲ್ಲಿ ಕೊಹ್ಲಿ ಭರ್ಜರಿ ಬ್ಯಾಟಿಂಗ್‍ನಿಂದ ಪಾಕಿಸ್ತಾನ ಸೋಲಬೇಕಾಯಿತು. ಕೊನೆಯ ಓವರ್‍ನಲ್ಲಿ ಭಾರತಕ್ಕಿಂತಲೂ ಪಾಕಿಸ್ತಾನ ತಂಡಕ್ಕೆ ಗೆಲ್ಲುವ ಚಾನ್ಸ್ ಹೆಚ್ಚಿತ್ತು. ಆದರೆ ಈ ಸೋಲು ನಮಗೆ ದೊಡ್ಡ ನಿರಾಸೆ ಮೂಡಿಸಿದೆ’ ಎಂದು ಹಫೀಜ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News