Team India : ಈ ಆಟಗಾರನ ಅನುಪಸ್ಥಿತಿಯಿಂದ ಟೀಂ ಇಂಡಿಯಾಗೆ ಈ ಪರಸ್ಥಿತಿ!

2022ರ ಏಷ್ಯಾಕಪ್‌ನಲ್ಲಿ ಭಾರತ ತಂಡ ಫೈನಲ್‌ಗೆ ತಲುಪುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಇದಕ್ಕೆಲ್ಲ ಕರಣ ಏನು? ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Sep 7, 2022, 05:02 PM IST
  • ಏಷ್ಯಾಕಪ್ 2022 ರ ಟೂರ್ನಿಯಿಂದ ಬಹುತೇಕ ಹೊರಬಿದ್ದ ಟೀಂ ಇಂಡಿಯಾ
  • ಈ ಆಟಗಾರ ಇಲ್ಲದಕ್ಕೆ ಟೀಂ ಇಂಡಿಯಾಗೆ ಈ ಗತಿ
  • ಈ ತಪ್ಪು ನಿರ್ಧಾರ ಟೀಂ ಇಂಡಿಯಾ ಸಂಕಷ್ಟಕ್ಕೆ ಕಾರಣ
Team India : ಈ ಆಟಗಾರನ ಅನುಪಸ್ಥಿತಿಯಿಂದ ಟೀಂ ಇಂಡಿಯಾಗೆ ಈ ಪರಸ್ಥಿತಿ! title=

Asia Cup 2022 : ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಏಷ್ಯಾಕಪ್ 2022 ರಿಂದ ಬಹುತೇಕ ಹೊರಬಿದ್ದಿದೆ. ಏಷ್ಯಾಕಪ್ 2022 ರ ಸೂಪರ್ 4 ಹಂತದಲ್ಲಿ ಟೀಂ ಇಂಡಿಯಾವನ್ನು ಪಾಕಿಸ್ತಾನ 5 ವಿಕೆಟ್‌ಗಳಿಂದ ಸೋಲಿಸಿತು. ಇದಾದ ಬಳಿಕ ಭಾರತ ತಂಡ ಶ್ರೀಲಂಕಾವನ್ನು 6 ವಿಕೆಟ್‌ಗಳಿಂದ ಸೋಲಿಸಿ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. 2022ರ ಏಷ್ಯಾಕಪ್‌ನಲ್ಲಿ ಭಾರತ ತಂಡ ಫೈನಲ್‌ಗೆ ತಲುಪುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಇದಕ್ಕೆಲ್ಲ ಕರಣ ಏನು? ಇಲ್ಲಿದೆ ನೋಡಿ..

ಈ ಆಟಗಾರ ಇಲ್ಲದಕ್ಕೆ ಟೀಂ ಇಂಡಿಯಾಗೆ ಈ ಗತಿ

ಟೀಂ ಇಂಡಿಯಾದ ಈ ಸ್ಥಿತಿಗೆ ನಾಯಕ ರೋಹಿತ್ ಶರ್ಮಾ ಮತ್ತು ಟೀಂ ಮ್ಯಾನೇಜ್‌ಮೆಂಟ್‌ನ ತಪ್ಪು ನಿರ್ಧಾರವೇ ಕಾರಣ. ಏಷ್ಯಾ ಕಪ್ 2022 ರಲ್ಲಿ, ಟೀಂ ಇಂಡಿಯಾ ಆಟಗಾರನಿಗೆ ಅವಕಾಶ ನೀಡದೆ ತನ್ನ ಸೋಲನ್ನು ಒಪ್ಪಿಕೊಂಡಿದೆ. ಈ ಆಟಗಾರ ಏಷ್ಯಾಕಪ್‌ನಲ್ಲಿ ಆಡಿದ್ದರೆ ಟೀಂ ಇಂಡಿಯಾ ಟೂರ್ನಿಯಿಂದ ಹೊರಗುಳಿಯುವ ಹಂತ ತಲುಪುತ್ತಿರಲಿಲ್ಲ.

ಇದನ್ನೂ ಓದಿ : Team India: ಏಷ್ಯಾಕಪ್‌ನೊಂದಿಗೆ ಈ 2 ಆಟಗಾರರ ವೃತ್ತಿಜೀವನ ಬಹುತೇಕ ಅಂತ್ಯ..?

ಮ್ಯಾಚ್ ವಿನ್ನರ್ ಈ ಆಟಗಾರ

ಈ ಟೂರ್ನಿಗೆ ಶ್ರೇಯಸ್ ಅಯ್ಯರ್ ಅವರಂತಹ ಮಧ್ಯಮ ಕ್ರಮಾಂಕದ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳನ್ನು ಆಯ್ಕೆಗಾರರು ಆಯ್ಕೆ ಮಾಡದಿರುವುದಕ್ಕೆ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾದ ಸೋಲು ಅನುಭವಿಸಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಶ್ರೇಯಸ್ ಅಯ್ಯರ್ ಅವರನ್ನು ಸ್ಟ್ಯಾಂಡ್‌ಬೈ ಆಟಗಾರರಲ್ಲಿ ಮಾತ್ರ ಇರಿಸಲಾಗಿತ್ತು. ಈ ಆಟಗಾರ ಆಡಿದ್ದರೆ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಇಷ್ಟೊಂದು ಕಳಪೆಯಾಗಿರುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.

ಈ ತಪ್ಪು ನಿರ್ಧಾರ ಟೀಂ ಇಂಡಿಯಾ ಸಂಕಷ್ಟಕ್ಕೆ ಕಾರಣ

ಏಷ್ಯಾಕಪ್‌ನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡದೆ, ಆಯ್ಕೆಗಾರರು ದೀಪಕ್ ಹೂಡಾಗೆ ಅವಕಾಶ ನೀಡಿದರು, ಅದು ಕೂಡ ಅವರು ಬ್ಯಾಟಿಂಗ್ ಜೊತೆಗೆ ಸ್ವಲ್ಪ ಬೌಲಿಂಗ್ ಮಾಡಬಹುದು. ಅಚ್ಚರಿ ಎಂದರೆ ಈ ಏಷ್ಯಾಕಪ್‌ನಲ್ಲಿ ದೀಪಕ್ ಹೂಡಾ ಇದುವರೆಗೆ ಒಮ್ಮೆಯೂ ಬೌಲಿಂಗ್ ಮಾಡಿಲ್ಲ. ಹೀಗಾಗಿ, ಶ್ರೇಯಸ್ ಅಯ್ಯರ್ ಸೇರ್ಪಡೆ ಟೀಂ ಇಂಡಿಯಾಗೆ ಲಾಭದಾಯಕ ಒಪ್ಪಂದವಾಗಿದೆ. ಈ ತಪ್ಪು 2022ರ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಕಾರಣವಾಗಿದೆ.

ಟೀಂ ಇಂಡಿಯಾದ ಕಥೆಯೇ ಬೇರೆಯಾಗುತ್ತಿತ್ತು

ಶ್ರೇಯಸ್ ಅಯ್ಯರ್ ತಮ್ಮ ಕೊನೆಯ ಟಿ20 ಅಂತರಾಷ್ಟ್ರೀಯ ಪಂದ್ಯವನ್ನು ವೆಸ್ಟ್ ಇಂಡೀಸ್ ವಿರುದ್ಧ 7 ಆಗಸ್ಟ್ 2022 ರಂದು ಆಡಿದರು. ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ತಮ್ಮ ಬಿರುಸಿನ ಫಾರ್ಮ್ ಪ್ರದರ್ಶಿಸಿ 40 ಎಸೆತಗಳಲ್ಲಿ 64 ರನ್ ಗಳಿಸಿದರು. ಈ ಅದ್ಭುತ ಪ್ರದರ್ಶನದ ಹೊರತಾಗಿಯೂ, ಏಷ್ಯಾ ಕಪ್ ತಂಡದಲ್ಲಿ ಶ್ರೇಯಸ್ ಅಯ್ಯರ್ ಬದಲಿಗೆ ದೀಪಕ್ ಹೂಡಾ ಅವರನ್ನು ಆಯ್ಕೆಗಾರರು ಆಯ್ಕೆ ಮಾಡಿದರು. ಒಂದು ವೇಳೆ ಶ್ರೇಯಸ್ ಅಯ್ಯರ್ ಏಷ್ಯಾಕಪ್ ನಲ್ಲಿ ಆಡಿದ್ದರೆ ಟೀಂ ಇಂಡಿಯಾದ ಕಥೆಯೇ ಬೇರೆಯಾಗುತ್ತಿತ್ತು. 

ಇದನ್ನೂ ಓದಿ : Ind vs SL T20: ಶ್ರೀಲಂಕಾಗೆ 174 ರನ್ ಗಳ ಗುರಿ ನೀಡಿದ ಭಾರತ, ಇದೀಗ ಬೌಲರ್ಗಳ ಸರದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News