IND vs BAN: ಭಾರತದಲ್ಲಿ ತಮ್ಮ ಅತ್ಯುತ್ತಮ ಟಿ 20 ಇನ್ನಿಂಗ್ಸ್ ಬಳಿಕ ರಹೀಂ...!

India vs Bangladesh:  ರಹೀಂ ಅಜೇಯ 60 ರನ್‌ಗಳ ಇನ್ನಿಂಗ್ಸ್‌ನಿಂದಾಗಿ ಬಾಂಗ್ಲಾದೇಶ ಮೂರು ಎಸೆತಗಳಲ್ಲಿ ತಮ್ಮ ಗೋಲು ಸಾಧಿಸಿ ಏಳು ವಿಕೆಟ್‌ಗಳಿಂದ ಜಯಗಳಿಸಿತು. ಇದು ಭಾರತದ ವಿರುದ್ಧ ಬಾಂಗ್ಲಾದೇಶದ ಮೊದಲ ಟಿ 20 ಗೆಲುವು.

Last Updated : Nov 4, 2019, 09:33 AM IST
IND vs BAN: ಭಾರತದಲ್ಲಿ ತಮ್ಮ ಅತ್ಯುತ್ತಮ ಟಿ 20 ಇನ್ನಿಂಗ್ಸ್ ಬಳಿಕ ರಹೀಂ...! title=
Photo Courtesy: IANS

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ 20 ಸರಣಿಯ ಆರಂಭ ಬಾಂಗ್ಲಾದೇಶ ಅತಿತೇಯರ ವಿರುದ್ಧ ವಿಜಯ ಸಾಧಿಸಿದೆ. ದೆಹಲಿಯಲ್ಲಿ ನಡೆದ ಮೊದಲ ಟಿ 20 ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಭಾರತವನ್ನು ಏಳು ವಿಕೆಟ್‌ಗಳಿಂದ ಹಿಂದಿಕ್ಕಿದೆ. ಈ ಪಂದ್ಯದಲ್ಲಿ ತಂಡದ ವಿಕೆಟ್‌ಕೀಪರ್ ಮುಶ್ಫಿಕುರ್ ರಹೀಂ 60 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಪಂದ್ಯದ ನಂತರ ರಹೀಂ ತಮ್ಮ ಅರ್ಧಶತಕವನ್ನು ಮಗನಿಗೆ ಅರ್ಪಿಸಿದರು.

ಗೆಲುವಿನ ಬಳಿಕ ರಹೀಂ ಹೇಳಿದ್ದೇನು?
ಭಾರತದಲ್ಲಿ ಆಡುತ್ತಿರುವ ಈ ಟಿ 20  ಇನ್ನಿಂಗ್ಸ್ ನನ್ನ ವೃತ್ತಿಜೀವನದ ಅತ್ಯುತ್ತಮ  ಇನ್ನಿಂಗ್ಸ್ ಆಗಿದೆ ಎಂದು ರಹೀಂ ಹೇಳಿದರು. "ಪಂದ್ಯದ ಗೆಲುವಿನ ಬಳಿಕ ಬಹಳ ಸಂತಸವಾಗುತ್ತಿದೆ. ನಾನು ಈ ಇನ್ನಿಂಗ್ಸ್ ಅಥವಾ ಈ ವಿಜಯವನ್ನು ನನ್ನ ಮಗನಿಗೆ ಅರ್ಪಿಸಲು ಬಯಸುತ್ತೇನೆ. ನಾನು ಅವನನ್ನು ನಿಜವಾಗಿಯೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವನು ವೇಗವಾಗಿ ಬೆಳೆಯುತ್ತಿದ್ದಾನೆ ಮತ್ತು ಅವನು ನನ್ನನ್ನು ಟಿವಿಯಲ್ಲಿ ಗುರುತಿಸುತ್ತಾನೆ. ಇದು ನನಗೆ ತುಂಬಾ ವಿಶೇಷವಾಗಿದೆ. ಹಾಗಾಗಿ ಈ ಇನ್ನಿಂಗ್ಸ್ ಅನ್ನು ನನ್ನ ಮಗನಿಗೆ ಅರ್ಪಿಸಲು ನಾನು ಬಯಸುತ್ತೇನೆ" ಎಂದು ರಹೀಂ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಬಾಂಗ್ಲಾದೇಶಕ್ಕೆ ವಿಶೇಷ ಗೆಲುವು:
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 148 ರನ್ ಗಳಿಸಿದೆ. ರಹೀಂ ಅಜೇಯ 60 ರನ್‌ಗಳ ಇನ್ನಿಂಗ್ಸ್‌ನಿಂದಾಗಿ ಬಾಂಗ್ಲಾದೇಶ ಮೂರು ಎಸೆತಗಳಲ್ಲಿ ತಮ್ಮ ಗೋಲು ಸಾಧಿಸಿ ಏಳು ವಿಕೆಟ್‌ಗಳಿಂದ ಜಯಗಳಿಸಿತು. ಇದು ಭಾರತದ ವಿರುದ್ಧ ಬಾಂಗ್ಲಾದೇಶದ ಮೊದಲ ಟಿ 20 ಗೆಲುವು. ಈ ಗೆಲುವು ಬಾಂಗ್ಲಾದೇಶಕ್ಕೂ ವಿಶೇಷವಾಗಿತ್ತು ಏಕೆಂದರೆ ಇದು ವಿಶ್ವಕ್ಕೆ 1000 ನೇ ಅಂತರರಾಷ್ಟ್ರೀಯ ಟಿ 20 ಪಂದ್ಯವಾಗಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಹವಾಮಾನವೂ ತುಂಬಾ ಸವಾಲಾಗಿತ್ತು. ಆದರೆ ಪಂದ್ಯದ ಸಮಯದಲ್ಲಿ ಹವಾಮಾನ ಅಷ್ಟೇನೂ ಕೆಟ್ಟದಾಗಿರಲಿಲ್ಲ. ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ನಂತರ ರಹೀಂ, "ನಾವು ಪ್ರತಿ ಪಂದ್ಯದಲ್ಲೂ ಸ್ಪರ್ಧಿಸಲು ಇಲ್ಲಿಗೆ ಬಂದಿದ್ದೇವೆ. ನೀವು ಕ್ರಿಕೆಟ್ ಅನ್ನು ನಿರಂತರವಾಗಿ ಆಡುವವರೆಗೆ ಮತ್ತು ಪ್ರತಿ ಪಂದ್ಯದಲ್ಲೂ ಉತ್ತಮಗೊಳ್ಳುವವರೆಗೆ, ಇದು ನಮ್ಮ ಗುರಿಯಾಗಿದೆ. ಪಂದ್ಯವನ್ನು ಗೆದ್ದ ನಂತರ ನಾವು ಮುಂದಿನ ಪಂದ್ಯವನ್ನು ಗೆಲ್ಲುವ ಬಗ್ಗೆ ಯೋಚಿಸುತ್ತಿದ್ದೇವೆ" ಎಂದರು.

ಕೆಲವು ನ್ಯೂನತೆಗಳು:
ಈ ಪಂದ್ಯದಲ್ಲಿ ತಂಡದ ಕೆಲವು ನ್ಯೂನತೆಗಳ ಬಗ್ಗೆ ರಹೀಂ ಮಾತನಾಡಿದರು. "ನಾವು ಗೆದ್ದಿದ್ದೇವೆ, ಆದರೆ ಕೆಲವು ವಿಷಯಗಳಲ್ಲಿ ನಾವು ಸುಧಾರಿಸಬೇಕಾಗಿದೆ. ನಾವು ಅದನ್ನು ಉತ್ತಮಗೊಳಿಸುತ್ತೇವೆ ಮತ್ತು ಇಂದಿಗಿಂತ ಉತ್ತಮವಾಗಿ ಆಡಲಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಾಂಗ್ಲಾದೇಶಕ್ಕೆ ಉತ್ತಮ ಕ್ಷಣ:
ಟಿ 20 ಪಂದ್ಯಗಳಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ತಂಡದ ಮೊದಲ ಗೆಲುವು ಇದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಹೀಂ, "ಇದು ಬಾಂಗ್ಲಾದೇಶ ಕ್ರಿಕೆಟ್‌ಗೆ ಒಂದು ಉತ್ತಮ ಕ್ಷಣವಾಗಿದೆ. ನಾವು ಭಾರತದ ವಿರುದ್ಧ ಟಿ 20 ಸ್ವರೂಪದಲ್ಲಿ ಗೆದ್ದಿಲ್ಲ. ನಮ್ಮ ಕೆಲವು ಆಟಗಾರರನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ಯುವ ಆಟಗಾರರು ಆಟವನ್ನು ತೋರಿಸಿದ ರೀತಿ ಅದ್ಭುತವಾಗಿದೆ" ಎಂದು ಸಂತಸ ವ್ಯಕ್ತಪಡಿಸಿದರು.

Trending News