ಕನಸಿನಲ್ಲಿ ಈ 5 ವಸ್ತುಗಳನ್ನು ಕಂಡರೆ ಕಷ್ಟ ಕಳೆದು.. ಭಾಗ್ಯದ ಬಾಗಿಲು ತೆರೆಯಿತೆಂದೇ ಅರ್ಥ..!

dream astrology: ಆ ಕನಸಿನಲ್ಲಿ ಅನೇಕ ರೀತಿಯ ವಸ್ತುಗಳು, ಪ್ರಾಣಿಗಳು ಮತ್ತು ಪಕ್ಷಿಗಳು ಕಾಣುತ್ತವೆ. ನಿಮ್ಮ ಕನಸಿನಲ್ಲಿ ಈ 5 ವಿಷಯಗಳನ್ನು ಕಂಡರೆ ಒಳ್ಳೆಯ ದಿನಗಳು ಬರುತ್ತವೆ ಎಂದರ್ಥವಂತೆ.

Written by - Chetana Devarmani | Last Updated : Aug 25, 2024, 03:03 PM IST
  • ಕನಸಿನಲ್ಲಿ ಈ ವಸ್ತುಗಳನ್ನು ಕಂಡರೆ ಮಂಗಳಕರ
  • ಲಕ್ಷ್ಮಿ ದೇವಿಯ ಕೃಪೆ ಸಿಕ್ಕಿತೆಂದು ಅರ್ಥ
  • ಒಳ್ಳೆಯ ದಿನಗಳು ಬರುತ್ತವೆ ಎಂದರ್ಥವಂತೆ
ಕನಸಿನಲ್ಲಿ ಈ 5 ವಸ್ತುಗಳನ್ನು ಕಂಡರೆ ಕಷ್ಟ ಕಳೆದು.. ಭಾಗ್ಯದ ಬಾಗಿಲು ತೆರೆಯಿತೆಂದೇ ಅರ್ಥ..! title=

Swapna Shastra: ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸುತ್ತಾರೆ. ಲಕ್ಷ್ಮಿ ದೇವಿಯ ಕೃಪೆ ಇರುವಲ್ಲಿ ಸಂಪತ್ತಿನ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ. ಯಾರಿಗಾದರೂ ಯಾವಾಗಲೂ ಹಣಕಾಸಿನ ಸಮಸ್ಯೆಗಳಿದ್ದರೆ ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ ಪೂಜೆ ಮಾಡುತ್ತಾರೆ. ನಿದ್ರೆಯಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಕನಸುಗಳು ಬೀಳುತ್ತವೆ. ಆ ಕನಸಿನಲ್ಲಿ ಅನೇಕ ರೀತಿಯ ವಸ್ತುಗಳು, ಪ್ರಾಣಿಗಳು ಮತ್ತು ಪಕ್ಷಿಗಳು ಕಾಣುತ್ತವೆ. ನಿಮ್ಮ ಕನಸಿನಲ್ಲಿ ಈ 5 ವಿಷಯಗಳನ್ನು ಕಂಡರೆ ಒಳ್ಳೆಯ ದಿನಗಳು ಬರುತ್ತವೆ ಎಂದರ್ಥವಂತೆ.

ಗೂಬೆ

ಗೂಬೆ ಲಕ್ಷ್ಮಿ ದೇವಿಯ ವಾಹನವಾಗಿದೆ. ಯಾರಿಗಾದರೂ ಕನಸಿನಲ್ಲಿ ಗೂಬೆ ಕಂಡರೆ ಜೀವನದಲ್ಲಿ ಆರ್ಥಿಕವಾಗಿ ಲಾಭವಾಗುವ ಸಂಭವವಿದೆ ಎಂದರ್ಥ. ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವು ಅವರ ಮೇಲೆ ಇರುತ್ತದೆ. ಕನಸಿನಲ್ಲಿ ಗೂಬೆಯನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಹಾವು

ಕನಸಿನಲ್ಲಿ ಹಾವು ಕಂಡರೆ ಅಶುಭ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ ಅದು ಸ್ವಲ್ಪವೂ ನಿಜವಲ್ಲ. ಹಾವನ್ನು ನೋಡುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ.. ಅದು ಹಣ ಬರುವ ಸೂಚನೆ ಎಂದೂ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಎಷ್ಟೆ ನಾಶ ಮಾಡಿದರೂ ಮತ್ತೆ ಮತ್ತೆ ಜೇಡ ಮನೆಯಲ್ಲಿ ಬಲೆ ಕಟ್ಟುತ್ತಿದೆಯಾ? ಹೀಗೆ ಮಾಡಿ ಇವುಗಳ ಸುಳಿವು ಕೂಡ ಇಲ್ಲದಂತೆ ಮಾಯವಾಗುತ್ತೆ

ಗರುಡ ಪಕ್ಷಿ

ಗರುಡ ಪಕ್ಷಿ ಈ ಜಗತ್ತನ್ನು ಕಾಪಾಡುವ ಭಗವಾನ್ ವಿಷ್ಣುವಿನ ವಾಹನವೆಂದು ಪರಿಗಣಿಸಲಾಗಿದೆ. ಗರುಡನು ಕನಸಿನಲ್ಲಿ ಕಾಣಿಸಿಕೊಂಡಾಗ ವಿಷ್ಣುವು ನಿಮ್ಮನ್ನು ಆಶೀರ್ವದಿಸುತ್ತಾನೆ ಎಂದು ಅರ್ಥಮಾಡಿಕೊಳ್ಳಬೇಕು. ಕನಸಿನಲ್ಲಿ ಗರುಡನನ್ನು ಕಂಡರೆ ಶೀಘ್ರದಲ್ಲೇ ಜೀವನದಲ್ಲಿ ಶ್ರೀಮಂತರಾಗುತ್ತೀರಿ ಎಂದು ನಂಬಲಾಗಿದೆ.

ಚಿನ್ನ

ಕನಸಿನಲ್ಲಿ ಚಿನ್ನವನ್ನು ಕಂಡರೆ ಕೆಲವು ಸಮಸ್ಯೆಗಳು ಬಗೆಹರಿಯುತ್ತವೆ ಎಂದರ್ಥ. ಕನಸಿನಲ್ಲಿ ಚಿನ್ನವನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ಆಗಮನವನ್ನು ಸಂಕೇತಿಸುತ್ತದೆ. 

ದೀಪ

ದೀಪಕ್ಕೆ ವಿಶೇಷ ಮಹತ್ವವಿದೆ. ಪ್ರತಿದಿನ ಪೂಜಾ ಕೋಣೆಯಲ್ಲಿ ದೀಪವನ್ನು ಹಚ್ಚುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಬೆಳಗುವ ದೀಪವನ್ನು ನೋಡಿದರೆ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಗೆ ಒಳ್ಳೆಯ ದಿನಗಳು ಬರುತ್ತವೆ ಎಂಬ ನಂಬಿಕೆ ಇದೆ. ಆರ್ಥಿಕ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ರಾತ್ರಿ ವೇಳೆ ತಪ್ಪಿಯೂ ಸಹ ಈ ದಿಕ್ಕಿಗೆ ಕಾಲು ಹಾಕಿ ಮಲಗಬೇಡಿ: ಮನೆ ಹಿರಿಯನ ಆಯಸ್ಸಿಗೆ ಬರುತ್ತೆ ಆಪತ್ತು; ಬಡತನ ಹೆಚ್ಚುತ್ತೆ!

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

  

Trending News