Rudraksha: ರಾಶಿಗನುಗುಣವಾಗಿ ರುದ್ರಾಕ್ಷಿಯ ಈ ಉಪಾಯ ಅನುಸರಿಸುವ ಬಡವರೂ ಕೂಡ ಶ್ರೀಮಂತರಾಗುತ್ತಾರೆ

Rudraksha Importance: ಆಧ್ಯಾತ್ಮದ ಅಧ್ಯಯನವಿರುವ ಜನರು ಯಾವಾಗಲೂ ಕೆಂಪು ಅಥವಾ ಹಳದಿ ದಾರದಲ್ಲಿ ರುದ್ರಾಕ್ಷಿಯನ್ನು ಧರಿಸಲು ಶಿಫಾರಸು ಮಾಡುತ್ತಾರೆ. ಅದನ್ನು ಧರಿಸಿದ ನಂತರ, ಅದರ ಶುಚಿತ್ವಕ್ಕೆ ವಿಶೇಷ ಗಮನಹರಿಸುವುದು ತುಂಬಾ ಮುಖ್ಯವಾಗುತ್ತದೆ.  

Written by - Nitin Tabib | Last Updated : Dec 11, 2022, 07:59 PM IST
  • ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ ಅಗ್ನಿ ಮತ್ತು ಅಗ್ನಿಯ ರೂಪವು ಅತ್ಯುತ್ತಮವೆಂದು ಹೇಳಲಾಗುತ್ತದೆ.
  • ಕಾರ್ತಿಕೇಯನ ಆರು ಮುಖಿ ರುದ್ರಾಕ್ಷಿಯು ವೃಷಭ ಮತ್ತು ತುಲಾ ರಾಶಿಯವರಿಗೆ ಉತ್ತಮವಾಗಿದೆ.
  • ಬ್ರಹ್ಮದೇವನ ರೂಪದಲ್ಲಿ ನಾಲ್ಕು ಮುಖಿ ರುದ್ರಾಕ್ಷವು ಮಿಥುನ ಮತ್ತು ಕನ್ಯಾ ರಾಶಿಯವರಿಗೆ ಉತ್ತಮವಾಗಿದೆ.
Rudraksha: ರಾಶಿಗನುಗುಣವಾಗಿ ರುದ್ರಾಕ್ಷಿಯ ಈ ಉಪಾಯ ಅನುಸರಿಸುವ ಬಡವರೂ ಕೂಡ ಶ್ರೀಮಂತರಾಗುತ್ತಾರೆ title=
Importance Of Rudraksh

Rudraksha Use: ಹಿಂದೂ ಧರ್ಮದಲ್ಲಿ ರುದ್ರಾಕ್ಷಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಪೂಜೆ, ಧಾರ್ಮಿಕ ಆಚರಣೆಗಳು ಮತ್ತು ಮಂತ್ರಗಳ ಪಠಣದಲ್ಲಿ ಇದು ಬಹಳ ಮುಖ್ಯವಾಗಿದೆ. ಮೂಲ ರುದ್ರಾಕ್ಷಿಯನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಜನರು ಮಾರುಕಟ್ಟೆಯಲ್ಲಿ ಇದರ ಬಗ್ಗೆ ದೊಡ್ಡ ಹಕ್ಕುಗಳನ್ನು ಮಂಡಿಸುತ್ತಾರೆ, ಆದರೆ ಇದು ದೀರ್ಘಕಾಲದವರೆಗೆ ಅದರೊಂದಿಗೆ ಸಂಬಂಧಿಸಿದ ಜನರಿಂದ ಮಾತ್ರ ಗುರುತಿಸಲ್ಪಟ್ಟಿದೆ. ರುದ್ರಾಕ್ಷಿ ಶಿವನ ಕಣ್ಣೀರಿನಿಂದ ತಯಾರಾಗಿದೆ ಮತ್ತು ಅದನ್ನು ಧರಿಸುವುದರಿಂದ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ರುದ್ರಾಕ್ಷಿ ನಮ್ಮನ್ನು ಅಹಿತಕರ, ಅಕಾಲಿಕ ಮರಣ ಮತ್ತು ಶತ್ರುಗಳಿಂದ ರಕ್ಷಿಸುತ್ತದೆ. 14 ಮುಖಿ ರುದ್ರಾಕ್ಷಗಳ ಜೊತೆಗೆ ಗೌರಿ ಶಂಕರ ಮತ್ತು ಗಣೇಶ ರುದ್ರಾಕ್ಷವನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ.

ಆಧ್ಯಾತ್ಮಿಕ ಅಧ್ಯಯನವುಳ್ಳ ಜನರು ಯಾವಾಗಲೂ ಕೆಂಪು ಅಥವಾ ಹಳದಿ ದಾರದಲ್ಲಿ ರುದ್ರಾಕ್ಷಿಯನ್ನು ಧರಿಸಲು ಶಿಫಾರಸು ಮಾಡುತ್ತಾರೆ. ಅದನ್ನು ಧರಿಸಿದ ನಂತರ, ಶುಚಿತ್ವಕ್ಕೆ ಗಮನ ಕೊಡುವುದು ಬಹಳ ಮುಖ್ಯವಾಗುತ್ತದೆ. ಹುಣ್ಣಿಮೆಯ ದಿನ, ಅಮಾವಾಸ್ಯೆ ಅಥವಾ ಸೋಮವಾರದಂದು ಇದನ್ನು ಧರಿಸಲು ಸಲಹೆ ನೀಡಲಾಗುತ್ತದೆ.

ರುದ್ರಾಕ್ಷಿಯನ್ನು ಧರಿಸುವಾಗ ಅವುಗಳ ಸಂಖ್ಯೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಇದನ್ನು ಒಂದು, 27, 54 ಅಥವಾ 108 ರ ಸಂಖ್ಯೆಯಲ್ಲಿ ಧರಿಸಬೇಕು. ರುದ್ರಾಕ್ಷಿಯನ್ನು ಧರಿಸಿದ ಬಳಿಕ, ಮಾಂಸ ಮತ್ತು ಮದ್ಯದಿಂದ ಅಂತರ ಕಾಯ್ದುಕೊಳ್ಳಬೇಕು. ರುರಾಕ್ಷಿಯನ್ನು ಚಿನ್ನ, ಬೆಳ್ಳಿ ಅಥವಾ ತಾಮ್ರದಿಂದಲೂ ಧರಿಸಬಹುದು. ಒಬ್ಬರು ತೆಗೆದ ರುದ್ರಾಕ್ಷಿಯನ್ನು  ಮತ್ತೊಬ್ಬರು ಎಂದಿಗೂ ಧರಿಸಬಾರದು. ಮಲಗುವಾಗ ರುದ್ರಾಕ್ಷಿಯನ್ನು ತೆಗೆಯಬೇಕು.

ಇದನ್ನೂ ಓದಿ-Chandal Yog: ಎಚ್ಚರ...! 2023ರಲ್ಲಿ ನಿರ್ಮಾಣಗೊಳ್ಳುತ್ತಿದೆ ಮಹಾ ಭಯಂಕರ ಗುರು ಚಾಂಡಾಲ ಯೋಗ

ರುದ್ರಾಕ್ಷಿಯ ಪ್ರಯೋಜನಗಳು
>> ದಾಂಪತ್ಯದಲ್ಲಿ ಅಡೆತಡೆಗಳಿದ್ದಲ್ಲಿ, ಎರಡು ಮುಖದ ರುದ್ರಾಕ್ಷ ಮತ್ತು ಗೌರಿ ಶಂಕರ ರುದ್ರಾಕ್ಷವನ್ನು ಧರಿಸಬೇಕು.
 
>> ಪಂಚ ಮುಖಿ ರುದ್ರಾಕ್ಷಿ ಧರಿಸುವುದು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಏಕಾಗ್ರತೆಗೆ ಒಂದು ಸಂಪೂರ್ಣ ಪರಿಹಾರವಾಗಿದೆ.

>> ಏಕ ಮುಖಿ ಅಥವಾ 11 ಮುಖಿ ರುದ್ರಾಕ್ಷಿಯನ್ನು ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

>> ಉದ್ಯೋಗ ಕ್ಷೇತ್ರದಲ್ಲಿ ಬರುವ ಸಮಸ್ಯೆಗಳನ್ನು ಹೋಗಲಾಡಿಸಲು ಮೂರು ಮುಖದ ರುದ್ರಾಕ್ಷಿಯನ್ನು ಧರಿಸಬೇಕು.

>> ಕೆಟ್ಟ ಅಭ್ಯಾಸವನ್ನು ತಪ್ಪಿಸಲು ಪಂಚಮುಖಿ ರುದ್ರಾಕ್ಷವನ್ನು ಧರಿಸಬೇಕು. ಇದು ಅಕ್ ಮುಖಿ ಆಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.

>> 11 ಮುಖಿ ರುದ್ರಾಕ್ಷಿಯು ಭಕ್ತಿಗೆ ಅತ್ಯುತ್ತಮವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ-Vastu Tips: ಜಾತಕದಲ್ಲಿನ ರಾಹು, ಕೇತು ಹಾಗೂ ಶನಿ ದೋಷದಿಂದ ಮುಕ್ತಿ ಪಡೆಯಲು ಈ ಉಪಾಯ ಅನುಸರಿಸಿ

ರಾಶಿಗಳಿಗೆ ಅನುಗುಣವಾಗಿ ರುದ್ರಾಕ್ಷಿಯನ್ನು ಧರಿಸಬೇಕು
ಮೇಷ ಮತ್ತು ವೃಶ್ಚಿಕ ರಾಶಿಯವರಿಗೆ ಅಗ್ನಿ ಮತ್ತು ಅಗ್ನಿಯ ರೂಪವು ಅತ್ಯುತ್ತಮವೆಂದು ಹೇಳಲಾಗುತ್ತದೆ. ಕಾರ್ತಿಕೇಯನ ಆರು ಮುಖಿ ರುದ್ರಾಕ್ಷಿಯು ವೃಷಭ ಮತ್ತು ತುಲಾ ರಾಶಿಯವರಿಗೆ ಉತ್ತಮವಾಗಿದೆ. ಬ್ರಹ್ಮದೇವನ ರೂಪದಲ್ಲಿ ನಾಲ್ಕು ಮುಖಿ ರುದ್ರಾಕ್ಷವು ಮಿಥುನ ಮತ್ತು ಕನ್ಯಾ ರಾಶಿಯವರಿಗೆ ಉತ್ತಮವಾಗಿದೆ. ಅರ್ಧನಾರೀಶ್ವರನ ಎರಡು ಮುಖಿ ರುದ್ರಾಕ್ಷಿಯನ್ನು ಕರ್ಕ ರಾಶಿಯವರಿಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಏಕ ಮುಖ ರುದ್ರಾಕ್ಷಿಯನ್ನು ಧರಿಸಿದವರಿಗೆ ಶಿವನ ರೂಪವು ಅತ್ಯುತ್ತಮವಾಗಿದೆ. ಕಾಲಾಗ್ನಿ ಅಥವಾ ಐದು ಮುಖಿ ರುದ್ರಾಕ್ಷಿ ಧನು ರಾಶಿ ಮತ್ತು ಮೀನ ರಾಶಿಯವರಿಗೆ ಉತ್ತಮ ಎಂದು ಹೇಳಲಾಗುತ್ತದೆ. ಸಪ್ತಮಾತೃಕಾ  ಮತ್ತು ಸಪ್ತಋಷಿಗಳ ರೂಪದಲ್ಲಿ ಏಳು ಮುಖಿ ರುದ್ರಾಕ್ಷವು ಮಕರ ಮತ್ತು ಕುಂಭ ರಾಶಿಯವರಿಗೆ ಉತ್ತಮವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News