Mars Transit: ಜುಲೈ 1ರವರೆಗೆ ಈ ರಾಶಿಯವರಿಗೆ ಅಪಾರ ಸಂಪತ್ತು ನೀಡಲಿದ್ದಾನೆ ಮಂಗಳ

Mars Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಬಲಿಷ್ಠ ಗ್ರಹ ಎಂದು ಪರಿಗಣಿಸಲ್ಪಟ್ಟಿರುವ ಮಂಗಳನು ಮೇ 10, 2023ರಂದು ಕರ್ನಾಟಕ ರಾಶಿಯನ್ನು ಪ್ರವೇಶಿಸಿದ್ದಾನೆ. ಜುಲೈ 1ರವರೆಗೂ ಇದೇ ರಾಶಿಯಲ್ಲಿ ಸಂಚರಿಸಲಿರುವ ಮಂಗಳನು ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jun 9, 2023, 08:51 AM IST
  • ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನನ್ನು ಶಕ್ತಿ, ಧೈರ್ಯ ಮತ್ತು ಚೈತನ್ಯದ ಅಂಶ ಎಂದು ಹೇಳಲಾಗುತ್ತದೆ
  • ಮಂಗಳ ಗ್ರಹವು ವ್ಯಕ್ತಿಯ ಶಕ್ತಿಯ ಮಟ್ಟವನು ಪ್ರತಿನಿಧಿಸುತ್ತದೆ.
  • ಯಾವುದೇ ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹವು ಬಲವಾಗಿದ್ದಾಗ ಆತನ ಜೀವನದ್ಲಲಿ ಎಷ್ಟೇ ಕಷ್ಟಗಳು ಬಂದರೂ ಅದನ್ನು ಧೈರ್ಯದಿಂದ ಎದುರಿಸುತ್ತಾರೆ ಎನ್ನಲಾಗುತ್ತದೆ
Mars Transit: ಜುಲೈ 1ರವರೆಗೆ ಈ ರಾಶಿಯವರಿಗೆ ಅಪಾರ ಸಂಪತ್ತು  ನೀಡಲಿದ್ದಾನೆ ಮಂಗಳ  title=
Mangala Rashi Parivartane

Mangala Rashi Parivartane: ವೈದಿಕ ಜ್ಯೋತಿಷ್ಯದಲ್ಲಿ ಧೈರ್ಯ, ಆತ್ಮವಿಶ್ವಾಸ, ಯೋಧ, ಆಕ್ರಮಣಶೀಲತೆಯನ್ನು ಪ್ರತಿನಿಧಿಸುವ ಗ್ರಹ ಎಂದು ಕರೆಯಲ್ಪಡುವ ಮಂಗಳನು ಕಳೆದ ಮೇ 10, 2023ರಂದು ಕರ್ಕಾಟಕ ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಇದನ್ನು ಮಂಗಳನ ದುರ್ಬಲ ಚಿಹ್ನೆ ಎಂದು ಹೇಳಲಾಗುತ್ತದೆ. ಮಂಗಳ ಗ್ರಹವು 10 ಮೇ 2023 ರಂದು ಮಧ್ಯಾಹ್ನ 1:44ಕ್ಕೆ ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದು, 1 ಜುಲೈ 2023 ರಂದು 1:52 ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದೆ. 

ಕರ್ಕಾಟಕ ರಾಶಿಯಲ್ಲಿ ಮಂಗಳನ ಸಂಚಾರವು ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಈ ಸಂದರ್ಭದಲ್ಲಿ ಕೆಲವು ರಾಶಿಯ ಜನರ ಜೀವನದಲ್ಲಿ ದೊಡ್ಡ ಏರಿಳಿತಗಳು ಕಂಡುಬರುತ್ತವೆ. ಆದರೂ, ಈ ಇದನ್ನು ಕೆಲವು ರಾಶಿಯವರ ಜೀವನದಲ್ಲಿ ಮಂಗಳಕರ ಸಮಯ ಎಂದು ಬಣ್ಣಿಸಲಾಗುತ್ತದೆ. 

ಜುಲೈ 1ರವರೆಗೆ ಈ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದ್ದಾನೆ ಮಂಗಳ: 
ಮೇಷ ರಾಶಿ: 

ಮೇಷ ರಾಶಿಯ ಅಧಿಪತಿ ಗ್ರಹವಾಗಿರುವ ಮಂಗಳ ರಾಶಿ ಬದಲಾವಣೆಯು ಈ ರಾಶಿಯವರಿಗೆ ಕೆಲಸದಲ್ಲಿ ಪ್ರಗತಿ ನೀಡಲಿದೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಭೂಮಿ- ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ಬಗೆಹರಿಯಲಿವೆ. ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ಕೋಪಕ್ಕೆ ಕಡಿವಾಣ ಹಾಕುವುದು ಒಳ್ಳೆಯದು. 

ಇದನ್ನೂ ಓದಿ- Shukra Gochar 2023: ಮುಂದಿನ 29 ದಿನಗಳವರೆಗೆ ಈ ರಾಶಿಯವರಿಗೆ ಸಿಗುತ್ತೆ ಅಪಾರ ಹಣ, ಕೀರ್ತಿ, ಪ್ರಗತಿ

ಕರ್ಕಾಟಕ ರಾಶಿ: 
ಮಂಗಳ ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರಿಗೆ ದಿಢೀರ್ ಲಾಭವನ್ನು ತರಲಿದೆ. ಈ ಸಮಯದಲ್ಲಿ  ಸರ್ಕಾರದ ಟೆಂಡರ್ ನಿಮ್ಮ ಕೈ ಸೇರುವ ಅವಕಾಶಗಳಿವೆ. ಉದ್ಯೋಗಸ್ಥರಿಗೂ ಇದನ್ನು ಉತ್ತಮ ಸಮಯ ಎಂದು ಬಣ್ಣಿಸಲಾಗುತ್ತದೆ. ಆದಾಗ್ಯೂ, ಅಪಘಾತದ ಸಂಭವವಿರುವುದರಿಂದ ಈ ವಿಷಯದಲ್ಲಿ ಜಾಗರೂಕರಾಗಿರಿ. 

ಕನ್ಯಾ ರಾಶಿ: 
ಮಂಗಳ ರಾಶಿ ಬದಲಾವಣೆಯು ಕನ್ಯಾ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ತರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಸಮಯ ಇದಾಗಿದ್ದು, ನಿಮ್ಮ ಶ್ರಮದ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. 

ತುಲಾ ರಾಶಿ: 
ತುಲಾ ರಾಶಿಯವರಿಗೆ ಜುಲೈ 1 ರವರೆಗಿನ ಸಮಯವನ್ನು ಭಾಗ್ಯೋದಯದ ಸಮಯ ಎಂದು ಹೇಳಲಾಗುತ್ತಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ದೊರೆಯಲಿದೆ. ಈ ಸಮಯದಲ್ಲಿ ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದ್ದು ಹೊಸ ವಾಹನ ಖರೀದಿ ಯೋಗವೂ ಇದೆ. 

ಇದನ್ನೂ ಓದಿ- ಶನಿಯ ಹಿಮ್ಮುಖ ಚಲನೆಯಿಂದ ತ್ರಿಕೋನ ರಾಜಯೋಗ ನಿರ್ಮಾಣ: ಈ ರಾಶಿಯವರಿಗೆ ಧನ ಯೋಗ

ಮೀನ ರಾಶಿ: 
ಕರ್ಕಾಟಕ ರಾಶಿಯಲ್ಲಿರುವ ಮಂಗಳನು ಮೀನ ರಾಶಿಯವರಿಗೆ ಹಠಾತ್ ಹಣದ ಲಾಭವನ್ನು ನೀಡಲಿದ್ದಾನೆ. ಉದ್ಯೋಗ-ವ್ಯವಹಾರಗಳಿಗೆ ಸಮಯ ಉತ್ತಮವಾಗಿದ್ದು ನೀವು ಕೈ ಹಾಕುವ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಒಟ್ಟಿನಲ್ಲಿ ಇದು ನಿಮಗೆ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News