Sankashti Chaturthi 2022: ಸಂಕಷ್ಟಿಯಂದು ಈ ರೀತಿ ವ್ರತ ಮಾಡಿದರೆ ಜೀವನಪೂರ್ತಿ ಕಷ್ಟಗಳು ನಿಮ್ಮ ಬಳಿ ಸುಳಿಯುವುದಿಲ್ಲ!

Sankashta Chathurthi 2022:  ಜೋತಿಷ್ಯರ ಪ್ರಕಾರ, ಈ ದಿನದಂದು ಉಪವಾಸ ಮತ್ತು ಗಣೇಶನನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಜೊತೆಗೆ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ವಿಶೇಷವಾಗಿ ಈ ವ್ರತವನ್ನು ಆಚರಿಸುವುದರಿಂದ ಜೀವನದಲ್ಲಿ ಎಲ್ಲಾ ದುಃಖಗಳು ದೂರವಾಗುತ್ತವೆ ಎನ್ನುತ್ತಾರೆ ಜೋತಿಷ್ಯರು.

Written by - Bhavishya Shetty | Last Updated : Nov 13, 2022, 12:34 PM IST
    • ಗಣಪತಿಯನ್ನು ಭಕ್ತಿಯಿಂದ ಪೂಜಿಸಿ ಉಪವಾಸ ಮಾಡುವುದರಿಂದ ಅನೇಕ ಲಾಭಗಳು ದೊರೆಯುತ್ತವೆ
    • ಈ ವ್ರತವನ್ನು ಪ್ರತಿ ವರ್ಷ ಪ್ರತಿ ತಿಂಗಳಲ್ಲಿ ಒಂದು ದಿನ ಆಚರಿಸಲಾಗುತ್ತದೆ
    • ಡಿಸೆಂಬರ್ ತಿಂಗಳ ಸಂಕಷ್ಟಿ ಚತುರ್ಥಿ 11ರಂದು ಬರಲಿದೆ
Sankashti Chaturthi 2022: ಸಂಕಷ್ಟಿಯಂದು ಈ ರೀತಿ ವ್ರತ ಮಾಡಿದರೆ ಜೀವನಪೂರ್ತಿ ಕಷ್ಟಗಳು ನಿಮ್ಮ ಬಳಿ ಸುಳಿಯುವುದಿಲ್ಲ! title=
Sankashti

Sankashta Chathurthi 2022: ಸಂಕಷ್ಟಿ ಚತುರ್ಥಿ ಉಪವಾಸವನ್ನು ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತಿ ತಿಂಗಳ ಕೃಷ್ಣ ಪಕ್ಷ ಚತುರ್ಥಿ ತಿಥಿಯಂದು ಆಚರಿಸಲಾಗುತ್ತದೆ. ಇದಲ್ಲದೆ ಈ ಸಂಕಷ್ಟ ಚತುರ್ಥಿ ಬಹಳ ಜನಪ್ರಿಯವಾಗಿದೆ. ಗಣಪತಿಯನ್ನು ಭಕ್ತಿಯಿಂದ ಪೂಜಿಸಿ ಉಪವಾಸ ಮಾಡುವುದರಿಂದ ಅನೇಕ ಲಾಭಗಳು ದೊರೆಯುತ್ತವೆ ಎನ್ನುತ್ತಾರೆ ಜ್ಯೋತಿಷ್ಯರು. ಸಂಕಷ್ಟಿ ಚತುರ್ಥಿ ವ್ರತವನ್ನು ಪ್ರತಿ ವರ್ಷ ಪ್ರತಿ ತಿಂಗಳಲ್ಲಿ ಒಂದು ದಿನ ಆಚರಿಸಲಾಗುತ್ತದೆ. ಇನ್ನು ಡಿಸೆಂಬರ್ ತಿಂಗಳ ಸಂಕಷ್ಟಿ ಚತುರ್ಥಿ 11ರಂದು ಬರಲಿದೆ.

ಇದನ್ನೂ ಓದಿ: Garuda Purana : ಜೀವನದಲ್ಲಿ ಯಾವತ್ತೂ ಮಾಡಬೇಡಿ ಈ ತಪ್ಪುಗಳನ್ನು, ಇವು ಲಕ್ಷ್ಮಿದೇವಿ ಕೋಪಕ್ಕೆ ಕಾರಣ!

ಜೋತಿಷ್ಯರ ಪ್ರಕಾರ, ಈ ದಿನದಂದು ಉಪವಾಸ ಮತ್ತು ಗಣೇಶನನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಜೊತೆಗೆ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ವಿಶೇಷವಾಗಿ ಈ ವ್ರತವನ್ನು ಆಚರಿಸುವುದರಿಂದ ಜೀವನದಲ್ಲಿ ಎಲ್ಲಾ ದುಃಖಗಳು ದೂರವಾಗುತ್ತವೆ ಎನ್ನುತ್ತಾರೆ ಜೋತಿಷ್ಯರು. ಆದರೆ ಸಂಕಷ್ಟಿ ಚತುರ್ಥಿ ವ್ರತವನ್ನು ಆಚರಿಸಲು ಹಲವಾರು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ಫಲಿತಾಂಶ ಸಿಗುವುದಿಲ್ಲ. ಈಗ ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಯೋಣ.

ಸಂಕಷ್ಟಿ ಚತುರ್ಥಿ ಪೂಜೆ ಮುಹೂರ್ತ:

  • ಚತುರ್ಥಿ ದಿನಾಂಕ ಪ್ರಾರಂಭ - 11 ಡಿಸೆಂಬರ್ 2022 ರಾತ್ರಿ 08.17
  • ಚತುರ್ಥಿ ದಿನಾಂಕ ಕೊನೆ- 12 ಡಿಸೆಂಬರ್ 2022 ಕ್ಕೆ ರಾತ್ರಿ 10.25

ಆದರೆ ಈ ವ್ರತವನ್ನು ಮಾಡುವವರು ಬೆಳಿಗ್ಗೆ 08:02 ರಿಂದ 09:23 ರವರೆಗೆ ಮತ್ತು ಮಧ್ಯಾಹ್ನ 01:26 ರಿಂದ ಸಂಜೆ 04:08 ರವರೆಗೆ ಮಾತ್ರ ಗಣೇಶನನ್ನು ಪೂಜಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಜೋತಿಷ್ಯರು ಹೇಳುತ್ತಾರೆ. ಇದಲ್ಲದೆ, ಎಲ್ಲಾ ದೇವತೆಗಳನ್ನು ಈ ಕ್ರಮದಲ್ಲಿ ಪೂಜಿಸಬಹುದು.

ಸಂಕಷ್ಟಿ ಚತುರ್ಥಿ ಪರಿಹಾರ:

  • ಜೀವನದಲ್ಲಿ ಕಷ್ಟಗಳನ್ನು ಅನುಭವಿಸುವವರಿಗೆ ಈ ಕ್ರಮದಲ್ಲಿ ಮುಕ್ತಿ ಸಿಗುತ್ತದೆ. ಓಂ ಗಂಗಾ ಗಣಪತಯೇ ನಮಃ ಎಂಬ ಮಂತ್ರವನ್ನೂ ಪಠಿಸಿ.
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವತ್ರವನ್ನು ನೋಡಿದ ನಂತರ ಯಂತ್ರವನ್ನು ಮನೆಯಲ್ಲಿಯೂ ಜೋಡಿಸಬೇಕು. ಪೂಜೆಯ ನಂತರ ಗಣಪತಿಗೆ ನೈವೇದ್ಯವಾಗಿ ಅರ್ಪಿಸಬೇಕು.
  • ಉಪವಾಸ ಆಚರಿಸಿದ ನಂತರ ಗಣೇಶ ಮಂದಿರಕ್ಕೆ ಹೋಗಿ 108 ಪ್ರದಕ್ಷಿಣೆ ಮಾಡಬೇಕು. ಮೇಲಾಗಿ 'ವಕ್ರತುಂಡಾಯ ಮಹಾಕಾಯ' ಮಂತ್ರವನ್ನು ಈ ಕ್ರಮದಲ್ಲಿ ಅನುಸರಿಸಬೇಕು.
  • ಈ ಕ್ರಮದಲ್ಲಿ ಗಣೇಶನಿಗೆ ಬೆಲ್ಲ ಮತ್ತು ತುಪ್ಪವನ್ನು ನೈವೇದ್ಯ ಮಾಡಬೇಕು.

ಇದನ್ನೂ ಓದಿ: Palmistry: ಅಂಗೈಯಲ್ಲಿ ಈ ರೇಖೆ ಹೀಗಿದ್ದರೆ ನೀವು ಶ್ರೀಮಂತರಾಗುತ್ತೀರಿ ಎಂದರ್ಥ!

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು, ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಪರಿಶೀಲಿಸಿರುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News