Horoscope Today: ಈ ರಾಶಿಯವರಿಗೆ ಇಂದು ಹೊಸ ಅವಕಾಶಗಳು ಲಭ್ಯ..!

ರಾಶಿಗನುಗುಣವಾಗಿ ದ್ವಾದಶ ರಾಶಿಗಳ ಇಂದಿನ ಫಲಾಫಲ ಹೀಗಿದೆ. 

Written by - Zee Kannada News Desk | Last Updated : Nov 10, 2022, 10:19 AM IST
  • ಮೇಷ ರಾಶಿಯವರಿಗೆ ವಾಣಿಜ್ಯ ವಹಿವಾಟಿನಲ್ಲಿ ಲಾಭ
  • ಮಿಥುನ ರಾಶಿ ಯವರಿಗೆ ಅಪವಾದಗಳು ಬರುವ ಸಾಧ್ಯತೆ
  • ಸಿಂಹ ರಾಶಿಯವರಿಗೆ ಪಾನೀಯಗಳಿಂದ ಆರೋಗ್ಯಕ್ಕೆ ತೊಂದರೆ ಸಾಧ್ಯತೆ
Horoscope Today: ಈ ರಾಶಿಯವರಿಗೆ ಇಂದು ಹೊಸ ಅವಕಾಶಗಳು ಲಭ್ಯ..!   title=
today horoscope

ಬೆಂಗಳೂರು : ಜೀವನದಲ್ಲಿ ಏನು ನಡೆಯಬಹುದು ಎನ್ನುವುದರ ಬಗ್ಗೆ   ರಾಶಿ ನಕ್ಷತ್ರಗಳು  ಸೂಚನೆ ನೀಡುತ್ತವೆ. ಜ್ಯೋತಿಷ್ಯದ ಪ್ರಕಾರ ನಮ್ಮ ಜೀವನದಲ್ಲಿ ಘಟಿಸುವ ಘಟನೆಗಳು ರಾಶಿ ನಕ್ಷತ್ರಗಳನ್ನು ಕೂಡಾ ಅವಲಂಬಿಸಿರುತ್ತವೆ. ರಾಶಿಗನುಗುಣವಾಗಿ ದ್ವಾದಶ ರಾಶಿಗಳ ಇಂದಿನ ಫಲಾಫಲ ಹೀಗಿದೆ. 

ಮೇಷ ರಾಶಿ : ವಾಣಿಜ್ಯ ವಹಿವಾಟಿನಲ್ಲಿ ಲಾಭ. ತವರುಮನೆ ಕಡೆಯಿಂದ  ಉಡುಗೊರೆ ಸಿಗುವ ಸಂಭವವಿದೆ. 
ಯಶಸ್ಸು - 79%.

ವೃಷಭ ರಾಶಿ : ವಿದ್ಯಾರ್ಥಿಗಳಿಗೆ ಬಹಳ ಒಳ್ಳೆಯ ಸಮಯ . ಪ್ರತಿಭೆಗಳಿಗೆ ಹೊಸ ವೇದಿಕೆ ಲಭ್ಯವಾಗುವ ಸಮಯ. 
ಯಶಸ್ಸು - 81 %

ಮಿಥುನ ರಾಶಿ :  ಅಪವಾದಗಳು ಬರುವ ಸಾಧ್ಯತೆ. ಪ್ರಯಾಣದಲ್ಲಿ ಸಮಸ್ಯೆ ಎದುರಾಗಬಹುದು. ಬಾಳ ಸಂಗಾತಿ ಕಡೆಯಿಂದ ಧನ ಲಾಭ. 
ಯಶಸ್ಸು - 86%.

ಇದನ್ನೂ ಓದಿ : Chanakya Niti : ಪತಿಯಿಂದ ಈ 5 ವಿಷಯಗಳನ್ನು ಯಾವಾಗಲು ಮುಚ್ಚಿಡುತ್ತಾಳೆ ಪತ್ನಿ!

ಕಟಕ ರಾಶಿ : ಸಹವಾಸ ದೋಷ. ಅವಕಾಶ ಕೈ ತಪ್ಪುವ ಸನ್ನಿವೇಶ. ತಾಳ್ಮೆ ಹಾಗೂ ಸಮಯೋಚಿತ ತಂತ್ರಗಾರಿಕೆಯಿಂದ ಕಾರ್ಯ ಸಾಧನೆ .
ಯಶಸ್ಸು - 75%.

ಸಿಂಹ ರಾಶಿ : ವಿದೇಶಿ ವಸ್ತುಗಳ ಮೇಲೆ ವ್ಯಾಮೋಹ. ಪಾನೀಯಗಳಿಂದ ಆರೋಗ್ಯಕ್ಕೆ ತೊಂದರೆ. ರಹಸ್ಯ ವಿದ್ಯೆ ಕಲಿಯುವ ಅವಕಾಶ. 
ಯಶಸ್ಸು - 64%.

ಕನ್ಯಾ ರಾಶಿ : ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಹಿತ ಶತ್ರುಗಳಿದ್ದರೂ ಏನೂ ಮಾಡಲು ಆಗುವುದಿಲ್ಲ. 
ಯಶಸ್ಸು - 74%.

ಇದನ್ನೂ ಓದಿ : Gemstone : ರಾಹುವಿನ ಕೆಟ್ಟ ಪರಿಣಾಮಗಳಿಗೆ ಪರಿಹಾರ ನೀಡುತ್ತೆ ಈ ರತ್ನ..!

ತುಲಾ ರಾಶಿ : ಅಪನಂಬಿಕೆ. ಭವಿಷ್ಯದ ಬಗ್ಗೆ ಬಹಳ ಚಿಂತೆ. ಅಸಹಾಯಕತೆಯನ್ನು ಹೇಳಿಕೊಳ್ಳಲಾಗದೆ ಹಿಂಸೆ. 
ಯಶಸ್ಸು - 47%.

ವೃಶ್ಚಿಕ ರಾಶಿ : ತಂದೆಯಿಂದ ಲಾಭ. ಅಪಘಾತಗಳು ಆಗಬಹುದು. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ .
ಯಶಸ್ಸು - 69%.

ಧನು ರಾಶಿ : ಮನೆಯಲ್ಲಿ ನೆಮ್ಮದಿಯ ವಾತಾವರಣ. ಉತ್ಸಾಹಭರಿತ ಜೀವನ. ಹೊಸ ಅವಕಾಶಗಳು ಲಭ್ಯ. 
ಯಶಸ್ಸು - 76%.

ಮಕರ ರಾಶಿ : ವಾಹನ ಅಪಘಾತ, ನಾಸ್ತಿಕತೆಯ ಭಾವನೆ. ಪ್ರೇಮ ಪ್ರಕರಣಗಳಿಂದ ಚಿಂತೆ. 
ಯಶಸ್ಸು - 52%.

ಇದನ್ನೂ ಓದಿ Astro Tips : ಸಕ್ಕರೆಯ ಈ ಸರಳ ಪರಿಹಾರದಿಂದ ನಿಮ್ಮ ಅದೃಷ್ಟದ ಹಾದಿ ತೆರೆಯುತ್ತದೆ

ಕುಂಭ ರಾಶಿ : ಆಲಸ್ಯದ ಜೀವನದಿಂದ ಬಿಡುಗಡೆ. ಪ್ರಯಾಣದಲ್ಲಿ ಎಚ್ಚರಿಕೆ ವಹಿಸಬೇಕು. ಹೊರಗಿನ ಊಟದ ಬಗ್ಗೆ ಗಮನ ಹರಿಸಬೇಕು. 
ಯಶಸ್ಸು - 73%.

ಮೀನ ರಾಶಿ : ಬಹಳ ಸವಾಲುಗಳು ಒಟ್ಟಿಗೆ ಕಾಡುವ ಸಮಯ. ಪ್ರಯತ್ನಕ್ಕೆ ತಕ್ಕ ಫಲ ಸಿಗುವುದಿಲ್ಲ. ವೈರಾಗ್ಯದ ಕಡೆಗೆ ಯೋಚನೆ. ಯಶಸ್ಸು - 61%

- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News