ಈ ಗಿಡಗಳು ನಿಮ್ಮ ಮನೆಯ ಹತ್ತಿರದಲ್ಲಿರದಂತೆ ನೋಡಿಕೊಳ್ಳಿ, ಇವು ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತವೆ!

Home Vastu Tips ಮನೆಯಲ್ಲಿ ಗಿಡಗಳನ್ನು ನೆಡುವುದರಿಂದ ಹಲವಾರು ಪ್ರಯೋಜನಗಳಿವೆ. ವಾಸ್ತು ಪ್ರಕಾರ ತುಳಸಿ, ಕಮಲದಂತಹ ಗಿಡಗಳು ಮನೆಯಲ್ಲಿದ್ದರೆ, ಮನೆ ಸುತ್ತಲಿನ ಗಾಳಿಯ ಗುಣಮಟ್ಟ ಚೆನ್ನಾಗಿರುತ್ತದೆ. (Spritual News In Kannada)

Written by - Nitin Tabib | Last Updated : Nov 19, 2023, 08:46 PM IST
  • ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮೆಹಂದಿ ಗಿಡ ನೆಡಬಾರದು. ಈ ಸಸ್ಯದಲ್ಲಿ ದುಷ್ಟಶಕ್ತಿಗಳು ವಾಸಿಸುತ್ತವೆ ಎಂದು ನಂಬಲಾಗಿದೆ.
  • ಅಲ್ಲದೆ, ಈ ಸಸ್ಯವು ಎಲ್ಲೆಲ್ಲಿ ಇದೆಯೋ, ಅದರ ಸುತ್ತಲೂ ನಕಾರಾತ್ಮಕ ಶಕ್ತಿಯು ಹರಡುತ್ತದೆ.
  • ಇಂತಹ ಪರಿಸ್ಥಿತಿಯಲ್ಲಿ, ಈ ಸಸ್ಯವನ್ನು ಎಂದಿಗೂ ಮನೆಯೊಳಗೆ ಅಥವಾ ಮನೆಯ ಹತ್ತಿರ ನೆಡಬಾರದು.
ಈ ಗಿಡಗಳು ನಿಮ್ಮ ಮನೆಯ ಹತ್ತಿರದಲ್ಲಿರದಂತೆ ನೋಡಿಕೊಳ್ಳಿ, ಇವು ನಕಾರಾತ್ಮಕ ಶಕ್ತಿಗೆ ಕಾರಣವಾಗುತ್ತವೆ! title=

Home Vastu Tips ಮನೆಯಲ್ಲಿ ಗಿಡಗಳನ್ನು ನೆಡುವುದರಿಂದ ಹಲವಾರು ಪ್ರಯೋಜನಗಳಿವೆ. ವಾಸ್ತು ಪ್ರಕಾರ ತುಳಸಿ, ಕಮಲದಂತಹ ಗಿಡಗಳು ಮನೆಯಲ್ಲಿದ್ದರೆ, ಮನೆ ಸುತ್ತಲಿನ ಗಾಳಿಯ ಗುಣಮಟ್ಟ ಚೆನ್ನಾಗಿರುತ್ತದೆ. ಅಲ್ಲದೆ ವಾಸ್ತು ದೋಷವೂ ಇರುವುದಿಲ್ಲ. ವಾಸ್ತು ಶಾಸ್ತ್ರದಲ್ಲಿ, ಕೆಲ ಗಿಡಗಳ ಬಗ್ಗೆ ಹೇಳಲಾಗಿದ್ದು, ಅವು ಮನೆಗೆ ದುರದೃಷ್ಟವನ್ನು ತರುತ್ತದೆ ಎನ್ನಲಾಗಿದೆ. (Spiritual News In Kannada)

1. ಅಕೇಶಿಯಾ ಗಿಡ - ಅಕೇಶಿಯಾ ಗಿಡವನ್ನು ಮನೆಯೊಳಗೆ ಅಥವಾ ಹತ್ತಿರ ನೆಡಬಾರದು. ವಾಸ್ತುವಿನ ದೃಷ್ಟಿಯಿಂದ ಇದು ಅಶುಭವೆಂದು ಪರಿಗಣಿಸಲಾಗಿದೆ. ಈ ಗಿಡವನ್ನು ನೆಟ್ಟ ಮನೆಯಲ್ಲಿ ಮನೆಯ ಸದಸ್ಯರು ಪರಸ್ಪರ ಹೊಂದಾಣಿಕೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಸದಾ ಗಲಾಟೆ ನಡೆಯುತ್ತಲೇ ಇರುತ್ತದೆ.

2. ಹತ್ತಿ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹತ್ತಿ ಅಥವಾ ರೇಷ್ಮೆ  ಹತ್ತಿಯ ಗಿಡ ನೆಡಬಾರದು. ಈ ಗಿಡಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತವೆ. ಇವು ಜೀವನದಲ್ಲಿ ದುರದೃಷ್ಟ ಮತ್ತು ಬಡತನವನ್ನು ಹೆಚ್ಚಿಸುತ್ತವೆ.

3. ಗೋರಂಟಿ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮೆಹಂದಿ ಗಿಡ ನೆಡಬಾರದು. ಈ ಸಸ್ಯದಲ್ಲಿ ದುಷ್ಟಶಕ್ತಿಗಳು ವಾಸಿಸುತ್ತವೆ ಎಂದು ನಂಬಲಾಗಿದೆ. ಅಲ್ಲದೆ, ಈ ಸಸ್ಯವು ಎಲ್ಲೆಲ್ಲಿ ಇದೆಯೋ, ಅದರ ಸುತ್ತಲೂ ನಕಾರಾತ್ಮಕ ಶಕ್ತಿಯು ಹರಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಸಸ್ಯವನ್ನು ಎಂದಿಗೂ ಮನೆಯೊಳಗೆ ಅಥವಾ ಮನೆಯ ಹತ್ತಿರ ನೆಡಬಾರದು.

4. ಹುಣಸೆ ಮರ - ವಾಸ್ತು ಪ್ರಕಾರ ಮನೆಯಲ್ಲಿ ಅಥವಾ ಮನೆಯ ಹತ್ತಿರದಲ್ಲಿ  ಹುಣಸೆ ಮರವನ್ನು ನೆಡಬಾರದು. ವಾಸ್ತವದಲ್ಲಿ ನಕಾರಾತ್ಮಕ ಶಕ್ತಿಯು ಈ ಸಸ್ಯದಲ್ಲಿ ನೆಲೆಸಿರುತ್ತದೆ. ಇದಲ್ಲದೇ ಹುಣಸೆ ಮರ ಇರುವ ಜಾಗದಲ್ಲಿ ಮನೆ ಕಟ್ಟುವುದನ್ನು ತಪ್ಪಿಸಬೇಕು.

ಇದನ್ನೂ ಓದಿ-

5. ಒಣಗಿದೆ ಗಿಡ -ವಾಸ್ತು ಶಾಸ್ತ್ರದ ಪ್ರಕಾರ ಒಣ ಗಿಡಗಳನ್ನು ಮನೆಯಲ್ಲಿ ಅಥವಾ ಮನೆಯ ಆವರಣದಲ್ಲಿ ಇರಬಾರದು. ಮನೆಯ ಮಡಿಕೆಯಲ್ಲಿ ಯಾವುದೇ ಒಂದು ಸಸ್ಯ ಒಣಗಿದರೆ, ಅದನ್ನು ತಕ್ಷಣವೇ ತೆಗೆದುಹಾಕಬೇಕು, ಏಕೆಂದರೆ ಇಂತಹ ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತವೆ. ಇದರಿಂದಾಗಿ ಜೀವನದಲ್ಲಿ ದುಃಖಗಳು ಮತ್ತು ತೊಂದರೆಗಳು ಎದುರಾಗುತ್ತಲೇ ಇರುತ್ತವೆ.

ಇದನ್ನೂ ಓದಿ-

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News