Betel Leaves Remedies: ಹಣಕಾಸಿನ ಬಿಕ್ಕಟ್ಟಿನಿಂದ ತೊಂದರೆಗೀಡಾಗಿದ್ದೀರಾ? ವೀಳ್ಯದೆಲೆಯ ಈ ಪರಿಹಾರಗಳನ್ನು ಮಾಡಿ

Betel Leaves Remedies: ನಿಮ್ಮ ಮನೆಯಲ್ಲೂ ಅಶಾಂತಿ ಮತ್ತು ಆರ್ಥಿಕ ಬಿಕ್ಕಟ್ಟಿನ ವಾತಾವರಣವಿದೆಯೇ? ಹಾಗಿದ್ದಲ್ಲಿ, ಇಂದು ನೀವು ವೀಳ್ಯದೆಲೆಗೆ ಸಂಬಂಧಿಸಿದ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದನ್ನು ಮಾಡುವುದರಿಂದ ನೀವು ಶೀಘ್ರದಲ್ಲೇ ಪ್ರಯೋಜನಗಳನ್ನು ನೋಡುತ್ತೀರಿ. 

Written by - Yashaswini V | Last Updated : Jun 16, 2022, 06:57 AM IST
  • ಮಂಗಳ-ಶನಿ ಗ್ರಹ ದೋಷ ನಿವಾರಣೆಗೆ ವೀಳ್ಯದೆಲೆ ಪ್ರಯೋಜನಕಾರಿ
  • ಬುಧವಾರದಂದು ವೀಳ್ಯದೆಲೆ ಸೇವಿಸುವುದರಿಂದ ವ್ಯಕ್ತಿಯಲ್ಲಿ ಸ್ನಾಯು ಶಕ್ತಿ ಮತ್ತು ಮಾನಸಿಕ ಶಕ್ತಿ ಹೆಚ್ಚುತ್ತದೆ
  • ದುಷ್ಟ ಶಕ್ತಿಗಳನ್ನು ತೊಡೆದುಹಾಕಲು ವೀಳ್ಯದೆಲೆ ಪ್ರಯೋಜನಕಾರಿ
Betel Leaves Remedies: ಹಣಕಾಸಿನ ಬಿಕ್ಕಟ್ಟಿನಿಂದ ತೊಂದರೆಗೀಡಾಗಿದ್ದೀರಾ? ವೀಳ್ಯದೆಲೆಯ ಈ ಪರಿಹಾರಗಳನ್ನು ಮಾಡಿ title=
Betel leaves Remedies

ವೀಳ್ಯದೆಲೆ ಪರಿಹಾರ:  ನೀವೂ ಸಹ ಆರ್ಥಿಕ ಬಿಕ್ಕಟ್ಟಿನಿಂದ ಬೇಸತ್ತಿದ್ದೀರಾ... ಯಾವುದೇ ಕೆಲಸಕ್ಕೆ ಕೈ ಹಾಕಿದರೂ ತೊಂದರೆಗಳು ಎದುರಾಗುತ್ತಿವೆಯೇ? ನಿಮ್ಮ ಮನೆಯಲ್ಲೂ ಅಶಾಂತಿ ಮತ್ತು ಆರ್ಥಿಕ ಬಿಕ್ಕಟ್ಟಿನ ವಾತಾವರಣವಿದೆಯೇ?  ಮನೆಯಲ್ಲಿ ಯಾರಾದರೂ ಆಗಾಗ್ಗ ಕಾಯಿಲೆಯಿಂದ ಬಳಲುತ್ತಿರುವರೆ... ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ವೀಳ್ಯದೆಲೆ ಪರಿಹಾರ ನೀಡಲಿದೆ. ಹೌದು, ವೀಳ್ಯದೆಲೆಗೆ ಸಂಬಂಧಿಸಿದ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಲಾಗುತ್ತದೆ.

ಪೂಜೆಯ ತಟ್ಟೆಯಲ್ಲಿ ಇಡುವ ಪ್ರತಿಯೊಂದು ವಸ್ತುವಿಗೂ ಇದೆ ತನ್ನದೇ ಆದ ಪ್ರಾಮುಖ್ಯತೆ:
ಸನಾತನ ಧರ್ಮದಲ್ಲಿ ಪೂಜೆಗೆ ಹಲವು ಬಗೆಯ ಸಾಮಗ್ರಿಗಳನ್ನು ಬಳಸುತ್ತಾರೆ ಎಂಬುದು ನಮಗೆಲ್ಲ ಗೊತ್ತೇ ಇದೆ. ಈ ಪ್ರತಿಯೊಂದು ಪದಾರ್ಥಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ, ಇದರಿಂದ ನಾವು ವಿವಿಧ ರೀತಿಯ ಫಲಗಳನ್ನು ಪಡೆಯುತ್ತೇವೆ. ಈ ಪದಾರ್ಥಗಳಲ್ಲಿ ಒಂದು ವೀಳ್ಯದೆಲೆ. ಅನೇಕ ಜನರು ವೀಳ್ಯದೆಲೆಯನ್ನು ಖಾದ್ಯವೆಂದು ಪರಿಗಣಿಸುತ್ತಾರೆ. ಅಷ್ಟು ಮಾತ್ರವಲ್ಲ ವೀಳ್ಯದೆಲೆಯು ದೇವರ ಪೂಜೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮನೆಯಲ್ಲಿ ಏನೇ ಶುಭ ಕಾರ್ಯ ನಡೆದರೂ ಅಲ್ಲಿಯೂ ವೀಳ್ಯದೆಲೆ ಬಹಳ ಮುಖ್ಯ. 

ಮಂಗಳ-ಶನಿ ಗ್ರಹ ದೋಷ ನಿವಾರಣೆಗೆ ವೀಳ್ಯದೆಲೆ :
ಮಂಗಳವಾರ ಮತ್ತು ಶನಿವಾರದಂದು ಬಜರಂಗ ಬಲಿಗೆ ವೀಳ್ಯದೆಲೆಯನ್ನು ಅರ್ಪಿಸಿದರೆ, ಮಂಗಳ ಮತ್ತು ಶನಿ ದೋಷದಿಂದ ಪರಿಹಾರ ದೊರೆಯುವುದರ ಜೊತೆಗೆ ಸ್ಥಗಿತಗೊಂಡ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಇದರೊಂದಿಗೆ, ತೊಂದರೆಗಳು ಮತ್ತು ರೋಗಗಳು ಸಹ ಮನೆಯಿಂದ ಓಡಿಹೋಗುತ್ತವೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಬುಧವಾರದಂದು ವೀಳ್ಯದೆಲೆ ಸೇವಿಸುವುದರಿಂದ  ವ್ಯಕ್ತಿಯಲ್ಲಿ ಸ್ನಾಯು ಶಕ್ತಿ ಮತ್ತು ಮಾನಸಿಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆಯೂ ಇದೆ.

ಇದನ್ನೂ ಓದಿ- Surya Gochar 2022: ಮಿಥುನ ರಾಶಿಗೆ ಸೂರ್ಯನ ಪ್ರವೇಶ, ಈ ರಾಶಿಯವರು ಜಾಗರೂಕರಾಗಿರಿ

ದುಷ್ಟ ಶಕ್ತಿಗಳನ್ನು ತೊಡೆದುಹಾಕಲು ಈ ಕ್ರಮಗಳನ್ನು ಕೈಗೊಳ್ಳಿ:
ಮನೆಯಲ್ಲಿ ದುಷ್ಟ ಶಕ್ತಿಗಳನ್ನು ನಿವಾರಿಸಲು ವೀಳ್ಯದೆಲೆಯಲ್ಲಿ ಕೆಲವು ಗುಲಾಬಿ ದಳಗಳನ್ನು ಇರಿಸಿ ಆಹಾರವನ್ನು ನೀಡಬೇಕು ಎಂದು ಅನೇಕ ಗ್ರಂಥಗಳಲ್ಲಿ ಹೇಳಲಾಗಿದೆ. ಹೀಗೆ ಮಾಡುವುದರಿಂದ ಎಲ್ಲಾ ದುಷ್ಟ ಶಕ್ತಿಗಳು ಆ ಮನೆಯಿಂದ ದೂರವಾಗುತ್ತವೆ. ನೀವು ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸಲು ಬಯಸಿದರೆ, ವೀಳ್ಯದೆಲೆಯಲ್ಲಿ ಕುಂಕುಮವನ್ನು ಇಟ್ಟು ಗಣೇಶನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಗಜಾನನನು ಪ್ರಸನ್ನನಾಗುತ್ತಾನೆ ಮತ್ತು ಜೀವನದಲ್ಲಿನ ಎಲ್ಲಾ ತೊಂದರೆಗಳನ್ನು ತೊಡೆದುಹಾಕುತ್ತಾನೆ ಎಂದು ಹೇಳಲಾಗುತ್ತದೆ.

ಈ ಪರಿಹಾರದಿಂದ ಮನೆಯ ವಾತಾವರಣ ಚೆನ್ನಾಗಿರುತ್ತದೆ:
ನಿಮ್ಮ ಮನೆಯಲ್ಲಿ ನಕಾರಾತ್ಮಕತೆ ಹರಡಿದರೆ ಮತ್ತು ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯದ ವಾತಾವರಣವಿದ್ದರೆ, ಮನೆಯ ಮುಖ್ಯ ಗೇಟ್‌ನಲ್ಲಿ ಪ್ರತಿದಿನ ವೀಳ್ಯದೆಲೆ ಅನ್ನು ನೇತುಹಾಕಿ. ಹೀಗೆ ಮಾಡುವುದರಿಂದ ಮನೆಯ ಋಣಾತ್ಮಕತೆ ಕೊನೆಗೊಳ್ಳುತ್ತದೆ ಮತ್ತು ಧನಾತ್ಮಕ ಶಕ್ತಿ ಕುಟುಂಬದಲ್ಲಿ ನೆಲೆಸುತ್ತದೆ ಎಂದು ನಂಬಲಾಗಿದೆ. 

ಇದನ್ನೂ ಓದಿ- ಈ ರೀತಿ ತುಳಸಿ ಒಣಗದಂತೆ ಕಾಪಾಡಿ, ಲಕ್ಷ್ಮೀ ನಾರಾಯಣ ಕೃಪೆಗೆ ಪಾತ್ರರಾಗಿ

ಪೂಜೆಗೆ ಇರಿಸಿದ ವೀಳ್ಯದೆಲೆಯಲ್ಲಿ ಈ ರೀತಿ ತಪ್ಪುಗಳಾಗಬಾರದು:
ನೀವು ಮನೆಯಲ್ಲಿ ಪೂಜೆಯ ತಟ್ಟೆಯನ್ನು ತಯಾರಿಸುವಾಗ, ಅದರಲ್ಲಿ ಇಟ್ಟಿರುವ ವೀಳ್ಯದೆಲೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ಆ ವೀಳ್ಯದೆಲೆಯನ್ನು ಕತ್ತರಿಸದಂತೆ ಅಥವಾ ಒಣಗದಂತೆ ಗಮನ ಹರಿಸಿ. ತಟ್ಟೆಯಲ್ಲಿ ಯಾವಾಗಲೂ ತಾಜಾ ಹಸಿರು, ಹೊಳೆಯುವ ಮತ್ತು ಪೂರ್ಣ ಎಲೆಗಳನ್ನು ಇರಿಸಿ. ಹೀಗೆ ಮಾಡದಿದ್ದಲ್ಲಿ ಪೂಜೆಯ ಪೂರ್ಣ ಫಲ ಸಿಗುವುದಿಲ್ಲ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News