ದಿನಭವಿಷ್ಯ 23-08-2024: ಶುಕ್ರವಾರದಂದು ಈ ರಾಶಿಯವರಿಗೆ ಲಕ್ಷ್ಮಿ ಕೃಪೆ, ಹೆಚ್ಚಾಗಲಿದೆ ಸಂಪತ್ತು

Today Horoscope 23rd August 2024: ಶುಕ್ರವಾರ, ರೇವತಿ ನಕ್ಷತ್ರ, ಶೂಲ ಮತ್ತು ಗಂಡ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Aug 23, 2024, 07:47 AM IST
  • ವೃಷಭ ರಾಶಿಯ ಜನರು ಇಂದು ಭೌತಿಕ ಸಂಪತ್ತನ್ನು ಹೆಚ್ಚಿಸಲು ನೀವು ಶಾಪಿಂಗ್ ಹೋಗಬಹುದು.
  • ಸಿಂಹ ರಾಶಿಯವರು ಇಂದು ತಾಯಿ ಮಹಾಲಕ್ಷ್ಮಿಯ ಕೃಪೆಯಿಂದ ಇಂದು ನೀವು ಹಣಕಾಸಿನ ವಿಷಯದಲ್ಲಿ ಏಳ್ಗೆಯನ್ನು ಕಾಣುವಿರಿ.
  • ಧನು ರಾಶಿಯ ಜನರಿಗೆ ಇಂದು ನಿಮ್ಮ ಆರ್ಥಿಕ ಭವಿಷ್ಯವನ್ನು ಯೋಜಿಸಲು ಅತ್ಯುತ್ತಮವಾದ ದಿನ. ನಿಮ್ಮ
ದಿನಭವಿಷ್ಯ 23-08-2024:  ಶುಕ್ರವಾರದಂದು ಈ ರಾಶಿಯವರಿಗೆ ಲಕ್ಷ್ಮಿ ಕೃಪೆ, ಹೆಚ್ಚಾಗಲಿದೆ ಸಂಪತ್ತು  title=

Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಶುಕ್ರವಾರ, ರೇವತಿ ನಕ್ಷತ್ರ, ಶೂಲ ಮತ್ತು ಗಂಡ ಯೋಗ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ಲಕ್ಷ್ಮಿ ಕೃಪೆಯಿಂದಾಗಿ ನೀವು ಉತ್ತಮ ಲಾಭವನ್ನು ಗಳಿಸುವಿರಿ. ಹೂಡಿಕೆಯಿಂದ ಲಾಭ ಗಳಿಸುವಿರಿ. ಆದಾಗ್ಯೂ, ಬೇಗ ಶ್ರೀಮಂತರಾಗುವ ಯೋಜನೆಗಳನ್ನು ತಪ್ಪಿಸಿ.  ವೃತ್ತಿಪರರಿಗೆ ಪ್ರಗತಿಯ ದಿನ. ಜೀವನದಲ್ಲಿ ಎದುರಾಗಿರುವ ಕೆಲವು ಸಮಸ್ಯೆಗಳು ಬಗೆಹರಿಯಲಿವೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಭೌತಿಕ ಸಂಪತ್ತನ್ನು ಹೆಚ್ಚಿಸಲು ನೀವು ಇಂದು ಶಾಪಿಂಗ್ ಹೋಗಬಹುದು. ವ್ಯವಹಾರದಲ್ಲಿ ಲಾಭದಾಯಕ ದಿನವಾಗಿದ್ದು ಪರಿಸ್ಥಿತಿ ಸುಧಾರಣೆಯಾಗಲಿದೆ. ಕಠಿಣ ಪರಿಶ್ರಮದ ನಂತರ ನೀವು ಭೂಮಿ ಖರೀದಿ ಮತ್ತು ಮಾರಾಟದಲ್ಲಿ ಭಾಗಶಃ ಯಶಸ್ಸನ್ನು ಪಡೆಯುತ್ತೀರಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನೀವು ಜೀವನದ ಪ್ರಮುಖ ವಿಷಯಗಳನ್ನು ನಿರ್ಲಕ್ಷಿಸುವುದನ್ನು ತಪ್ಪಿಸಿ, ಇಲ್ಲವೇ ಭಾರೀ ನಷ್ಟ ಉಂಟಾಗಬಹುದು. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ಇಂದು ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ವೃತ್ತಿಪರ ಮತ್ತು ಆರ್ಥಿಕ ಏಣಿಯನ್ನು ಸ್ಥಿರವಾಗಿ ಏರುತ್ತಲೇ ಇರಿ. ಜೀವನದಲ್ಲಿ ಕಷ್ಟ-ಸುಖ ಎರಡೂ ಕೂಡ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ವೃತ್ತಿಜೀವನದ ಒತ್ತಡದಿಂದ ನಿಮ್ಮ ಪ್ರೀತಿಪಾತ್ರರನ್ನು ನಿರ್ಲಕ್ಷಿಸದಂತೆ ಜಾಗರೂಕರಾಗಿರಿ

ಇದನ್ನೂ ಓದಿ- Mangala Guru Yuti: ಬರೋಬ್ಬರಿ 12 ವರ್ಷಗಳ ಬಳಿಕ ಸನಿಹಕ್ಕೆ ಬಂದ ಮಂಗಳ-ಗುರು:  ಈ ಜನರಿಗೆ ವೃತ್ತಿಯಲ್ಲಿ ಪ್ರಗತಿ, ಕೈತುಂಬಾ ಹಣ 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ತಾಯಿ ಮಹಾಲಕ್ಷ್ಮಿಯ ಕೃಪೆಯಿಂದ ಇಂದು ನೀವು ಹಣಕಾಸಿನ ವಿಷಯದಲ್ಲಿ ಏಳ್ಗೆಯನ್ನು ಕಾಣುವಿರಿ. ಸಹೋದ್ಯೋಗಿಯ ಮೂಲಕ ನಿಮಗೆ ಹಣ ಬರುತ್ತದೆ ಮತ್ತು ನಿಮ್ಮ ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ. ಪ್ರೇಮ ಸಂಬಂಧದಲ್ಲಿ ಇದ್ದಕ್ಕಿದ್ದಂತೆ ಇಂದು ನೀವು ಬಯಸಿದ ಅಮೂಲ್ಯ ಉಡುಗೊರೆಯನ್ನು ಪಡೆಯುವಿರಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ನಿಮ್ಮ ಯೋಜನೆಗಳಲ್ಲಿ ಇಂದು ಪ್ರಗತಿಯನ್ನು ಕಾಣುವಿರಿ. ಆದಾಯದ ಕ್ಷೇತ್ರದಲ್ಲಿ ಕೆಲವು ಅಭಿವೃದ್ಧಿಯನ್ನು ನಿರೀಕ್ಷಿಸಬಹುದು. ನಿಮ್ಮ ಆದಾಯವನ್ನು ಖರ್ಚು ಮಾಡುವ ಬದಲು ಅದನ್ನು ಹೆಚ್ಚಿಸುವತ್ತ ಗಮನಹರಿಸಿ. ನಿಮ್ಮ ಮಾತು ಮತ್ತು ನಡವಳಿಕೆ ಎಲ್ಲರನ್ನೂ ನಿಮ್ಮತ್ತ ಆಕರ್ಷಿಸುತ್ತದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ನಿಮಗೆ ಅರಿವಿಲ್ಲದೆಯೇ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಇದು ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂದು ನೀವು ಕೆಲವು ಅಲ್ಪಾವಧಿಯ ಪ್ರಯೋಜನಗಳನ್ನು ನೋಡಬಹುದು. ವ್ಯಾಪಾರದಲ್ಲಿ ಆದಾಯ ಹೆಚ್ಚಾಗುತ್ತದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಈ ರಾಶಿಯ ವ್ಯಾಪಾರಸ್ಥರಿಗೆ ಬಂಪರ್ ಲಾಭ, ಲಕ್ಷ್ಮಿ ಆಶೀರ್ವಾದದಿಂದ ಕೈತುಂಬಾ ಹಣ ಸಂಪಾದನೆಯಾಗಲಿದೆ. ನಿಮ್ಮ ಪ್ರಯತ್ನಗಳಲ್ಲಿ ನೀವು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇಂದು ನಿಮ್ಮ ಬೆಳವಣಿಗೆಗೆ ಉತ್ತಮ ಅವಕಾಶಗಳು ಲಭಿಸುತ್ತವೆ. 

ಇದನ್ನೂ ಓದಿ- ಶನಿಯ ನಕ್ಷತ್ರ ಸಂಕ್ರಮಣ: ಈ 3 ರಾಶಿಯವರ ಜೀವನದಲ್ಲಿ ಹಣದ ಸುರಿಮಳೆಯಾಗಲಿದೆ!

ಧನು ರಾಶಿಯವರ ಭವಿಷ್ಯ (Sagittarius Horoscope):  
ಈ ರಾಶಿಯ ಜನರಿಗೆ ಇಂದು ನಿಮ್ಮ ಆರ್ಥಿಕ ಭವಿಷ್ಯವನ್ನು ಯೋಜಿಸಲು ಅತ್ಯುತ್ತಮವಾದ ದಿನ. ನಿಮ್ಮ ದೀರ್ಘಾವಧಿಯ ಹಣಕಾಸಿನ ಗುರಿಗಳನ್ನು ನೀವು ಪೂರೈಸಬಹುದು. ಹೊಸ ಕೆಲಸವನ್ನು ಪ್ರಾರಂಭಿಸಲು ಇಂದು ಉತ್ತಮ ದಿನವಾಗಿದೆ.

ಮಕರ ರಾಶಿಯವರ ಭವಿಷ್ಯ (Capricorn Horoscope):  
ಕೆಲವು ಅನಿರೀಕ್ಷಿತ ಲಾಭಗಳಿಂದ ವ್ಯವಹಾರದಲ್ಲಿ ಇತ್ತೀಚಿನ ನಷ್ಟಗಳನ್ನು ಸರಿದೂಗಿಸಬಹುದು. ಹಿಂದೆ ಮಾಡಿದ ಹೂಡಿಕೆಗಳಿಂದ ಲಾಭವನು ಗಳಿಸುವಿರಿ. ಮನೆ ಅಥವಾ ವ್ಯಾಪಾರ ಸ್ಥಳದಿಂದ ಕೆಲವು ಬೆಲೆಬಾಳುವ ವಸ್ತು ಕಳ್ಳತನವಾಗುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಜಾಗರೂಕರಾಗಿರಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ವ್ಯವಹಾರಸ್ಥರಿಗೆ ಇಂದು ಲಾಭದಾಯಕ ದಿನ. ನಿಮ್ಮ ಹಣಕ್ಕಾಗಿ ಉತ್ತಮ ಹೂಡಿಕೆ ಆಯ್ಕೆಗಳು ಗೋಚರಿಸಲಿವೆ. ವೃತ್ತಿಪರರು ಇಂದು ಸಿಗುವ ಯಾವುದೇ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಶುಭ ಸಮಯ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಹಣ ಸಂಪಾದಿಸಲು ನೀವು ನಿರಂತರವಾಗಿ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದರೆ ಇಂದು ಶುಭ ಸಮಯ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಕಾಣುವಿರಿ. ಇಂದು ಆರ್ಥಿಕ ಕ್ಷೇತ್ರದಲ್ಲಿ ಭಾರೀ ಏರುಪೇರು ಉಂಟಾಗಬಹುದು. ನಿರೀಕ್ಷಿತ ಆದಾಯ ಸಿಗದಿರುವ ಸಾಧ್ಯತೆಗಳಿವೆ.

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News