ಕೆಲವೇ ಕ್ಷಣಗಳಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣ, ಈ 3 ರಾಶಿಗಳ ಜನರ ತಿಜೋರಿ ಸಿರಿ-ಸಂಪತ್ತಿನಿಂದ ತುಂಬಿ ತುಳುಕಲಿದೆ!

Gajkesari Rajyog 2023 In Aries: ವೈದಿಕ ಜೋತಿಷ್ಯ  ಶಾಸ್ತ್ರದ ಪ್ರಕಾರ ಮೇಷ ರಾಶಿಯಲ್ಲಿ ಚಂದ್ರ ಹಾಗೂ ದೇವಗುರು ಬೃಹಸ್ಪತಿಯ ಯುತಿ ನೆರವೇರಲಿದೆ. ಇದರಿಂದ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು, ಇದು ಒಟ್ಟು 3 ರಾಶಿಗಳ ಜಾತಕದವರಿಗೆ ವಿಶೇಷ ಲಾಭಗಳನ್ನು ತಂದುಕೊಡಲಿದೆ. (Spiritual News In Kannada)
 

ಬೆಂಗಳೂರು: ವೈದಿಕ ಜೋತಿಷ್ಯದಲ್ಲಿ ಚಂದ್ರನನ್ನು ಅತ್ಯಂತ ವೇಗವಾಗಿ ಚಲಿಸುವ ಗ್ರಹ ಎಂದು ಭಾವಿಸಲಾಗಿದೆ. ಚಂದ್ರ ಕೇವಲ ಒಂದು ರಾಶಿಯಲ್ಲಿ ಕೇವಲ ಎರಡೂವರೆ ದಿನಗಳ ಕಾಲ ಮಾತ್ರ ವಿರಾಜಮಾನನಾಗುತ್ತಾನೆ ಎನ್ನಲಾಗುತ್ತದೆ. ಹೀಗಿರುವಾಗ ಒಂದೇ ವಾರದ ಅವಧಿಯಲ್ಲಿ ಎರಡು ಬಾರಿ ಆತ ಬೇರೊಂದು ರಾಶಿಗೆ ಪ್ರವೇಶಿಸಿ, ಯಾವುದಾದರೊಂದು ಗ್ರಹಗಳ ಜೊತೆಗೆ ಮೈತ್ರಿಯನ್ನು ಮಾಡಿಕೊಳ್ಳುತ್ತಾನೆ. ಹೀಗಿರುವಾಗ ಪ್ರಸ್ತುತ ಚಂದ್ರ ಇಂದು ಅಂದರೆ, ಸೆಪ್ಟೆಂಬರ್ 29ರಂದು ರಾಟಿ 9ಗಂಟೆ 8 ನಿಮಿಷಕ್ಕೆ ಮೀನ ರಾಶಿಯನ್ನು ತೊರೆದು ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಈ ರಾಶಿಯಲ್ಲಿ ಆತ ಅಕ್ಟೋಬರ್ 2ರ ಬೆಳಗ್ಗೆ 12ಗಂಟೆ 14 ನಿಮಿಷದವರೆಗೆ ಇರಲಿದ್ದಾನೆ. ಮೇಷ ರಾಶಿಯಲ್ಲಿ ಈಗಾಗಲೇ ದೇವಗುರು ಬೃಹಸ್ಪತಿ ವಿರಾಜಮಾನನಾಗಿರುವ ಕಾರಣ ಗಜಕೇಸರಿ ಯೋಗ ನಿರ್ಮಾಣಗೊಳ್ಳುತ್ತಿದೆ. ಈ ಗಜಕೇಸರಿ ಯೋಗ (Budh Chandra Yuti 2023) ಹಲವು ರಾಶಿಗಳ ಜನರ ಜೀವನದಲ್ಲಿ ಖುಷಿಗಳೆ-ಖುಷಿಗಳನ್ನು ಹೊತ್ತು ತರಲಿದೆ. ಮೇಷ ರಾಶಿಯ ಈ ಗಜಕೇಸರಿ ಯೋಗ ಯಾವ ರಾಶಿಗಳ ಜನರ ಪಾಲಿಗೆ ವಿಶೇಷವಾಗಿರಲಿದೆ ತಿಳಿದುಕೊಳ್ಳೋಣ, Spiritual News In Kannada
 

ಇದನ್ನೂ ಓದಿ-ಸ್ವರಾಶಿಯಲ್ಲಿ ಕರ್ಮ ಫಲದಾತ ಶನಿಯ ನೇರನಡೆ, ಧನದ ಅಧಿದೇವತೆಯ ಕೃಪೆಯಿಂದ ಪಾರ ಧನ-ಸಂಪತ್ತು ಪ್ರಾಪ್ತಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Gajkesari Rajyog 2023 In Aries: ವೈದಿಕ ಜೋತಿಷ್ಯ  ಶಾಸ್ತ್ರದ ಪ್ರಕಾರ ಮೇಷ ರಾಶಿಯಲ್ಲಿ ಚಂದ್ರ ಹಾಗೂ ದೇವಗುರು ಬೃಹಸ್ಪತಿಯ ಯುತಿ ನೆರವೇರಲಿದೆ. ಇದರಿಂದ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳುತ್ತಿದ್ದು, ಇದು ಒಟ್ಟು 3 ರಾಶಿಗಳ ಜಾತಕದವರಿಗೆ ವಿಶೇಷ ಲಾಭಗಳನ್ನು ತಂದುಕೊಡಲಿದೆ. (Spiritual News In Kannada)  

2 /5

ಮೇಷ ರಾಶಿ: ಪ್ರಸ್ತುತ ಮೇಷ ರಾಶಿಯಲ್ಲಿಯೇ ದೇವಗುರು ಬೃಹಸ್ಪತಿ ವಕ್ರಾವಸ್ಥೆಯಲ್ಲಿ ವಿರಾಜಮಾನನಾಗಿದ್ದಾನೆ. ಚಂದ್ರನ ಮೇಷ ರಾಶಿ ಪ್ರವೇಶದಿಂದ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ಶುಭಯೋಗದ ನಿರ್ಮಾಣ ನಿಮಗೆ ಸಾಕಷ್ಟು ಖುಷಿಗಳನ್ನು ಹೊತ್ತು ತರಲಿದ್ದು, ಧನ-ಧಾನ್ಯ ವೃದ್ದಿಯಾಗಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗಿರಲಿದೆ. ಸ್ಥಾನಮಾನ-ಪ್ರತಿಷ್ಠೆ ಹೆಚ್ಚಾಗಲಿದೆ.   

3 /5

ಮಿಥುನ ರಾಶಿ: ಗಜಕೇಸರಿ ರಾಜಯೋಗ ನಿರ್ಮಾಣದಿಂದ ಮಿಥುನ ರಾಶಿಯ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ದೇವಗುರು ಬೃಹಸ್ಪತಿ ಸ್ಥಿತನಾಗಿದ್ದಾನೆ. ಹೀಗಾಗಿ ಗಜಕೇಸರಿ ರಾಜಯೋಗ ನಿಮ್ಮ ಪಾಲಿಗೆ ಆಕಸ್ಮಿಕ ಧನಲಾಭವನ್ನು ತಂದು ಕೊಡಲಿದೆ. ಆದಾಯದ ಹೊಸ ಮೂಲಗಳು ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ. ನಿಮ್ಮ ಪಾಲಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಹೂಡಿಕೆಗಾಗಿ ಯೋಚಿಸುತ್ತಿದ್ದಾರೆ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಸಮಾಜದಲ್ಲಿ ನಿಮ್ಮ ಘನತೆ-ಗೌರವ ಹೆಚ್ಚಾಗಲಿದೆ.   

4 /5

ಸಿಂಹ ರಾಶಿ: ಗಜಕೇಸರಿ ರಾಜಯೋಗ ನಿರ್ಮಾಣ ಸಿಂಹ ರಾಶಿಯ ಜಾತಕದವರಿಗೆ ಸಾಕಷ್ಟು ಖುಷಿಗಳನ್ನು ತರಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯಲು ಯಾತ್ರೆಯೊಂದನ್ನು ಕೈಗೊಳ್ಳಬಹುದು. ಬಿಸ್ನೆಸ್ ನಲ್ಲಿ ಅಪಾರ ಯಶಸ್ಸಿನ ಜೊತೆಗೆ ಒಪ್ಪಂದವನ್ನು ನೀವು ಅಂತಿಮಗೊಳಿಸುವಲ್ಲಿ ಯಶಸ್ಸನ್ನು ಸಂಪಾದಿಸುವಿರಿ. ಚಿಕ್ಕ ವ್ಯಾಪಾರದಲ್ಲಿಯೂ ಕೂಡ ಅಧಿಕ ಲಾಭ ಗಳಿಸುವಲ್ಲಿ ಯಶಸ್ಸನ್ನು ಕಾಣುವಿರಿ. ನೌಕರಿ ಮಾಡುವ ಜನರಿಗೆ ಪದೋನ್ನತಿ ಭಾಗ್ಯ ಪ್ರಾಪ್ತಿಯಾಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)