ಗುರುವಿನ ಕೃಪೆಯಿಂದ ಈ ರಾಶಿಯವರಿಗೆ ಅಪಾರ ಧನಪ್ರಾಪ್ತಿ, ಉದ್ಯೋಗದಲ್ಲಿ ಪ್ರಗತಿ!

Guru Chandal Yog: ಗ್ರಹಗಳ ಸಂಕ್ರಮಣದ ಜೊತೆಗೆ ಅನೇಕ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಗುರು ಮತ್ತು ರಾಹುವಿನ ಸಂಯೋಜನೆಯಿಂದ ರೂಪುಗೊಂಡ ಚಂಡಾಲ ದೋಷ ಕೆಲವರಿಗೆ ಕಷ್ಟಗಳ ಸರಮಾಲೆ ನೀಡುತ್ತದೆ. ಇದೀಗ ಗುರು ಮತ್ತು ರಾಹುವಿನ ಮೈತ್ರಿ ಮುರಿಯಲಿದೆ.
 

Jupiter Transit: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ರಾಶಿ ಮತ್ತು ನಕ್ಷತ್ರಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಒಂದು ಗ್ರಹವು ಸ್ಥಾನ ಬದಲಾಯಿಸಿದಾಗ ಬೇರೆ ಗ್ರಹಗಳು ಒಟ್ಟಿಗೆ ಸೇರುತ್ತವೆ. ಈ ಸ್ಥಿತಿಯನ್ನು ಗ್ರಹಗಳ ಸಂಯೋಗ ಎಂದು ಕರೆಯಲಾಗುತ್ತದೆ. ಗ್ರಹಗಳ ಮೈತ್ರಿಯು ಶುಭ ಮತ್ತು ಅಶುಭ ಯೋಗಗಳನ್ನು ರೂಪಿಸುತ್ತವೆ. ಈ ದಿನಗಳಲ್ಲಿ ಗುರು ಮತ್ತು ರಾಹುವಿನ ಸಂಯೋಜನೆಯಿಂದ ಗುರು ಚಂಡಾಲ ಯೋಗವು ರೂಪುಗೊಳ್ಳುತ್ತದೆ. ಈ ಯೋಗ  ಜ್ಯೋತಿಷ್ಯದಲ್ಲಿ ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ. ಈಗ ಗುರು ಅಶ್ವನಿ ನಕ್ಷತ್ರವನ್ನು ತೊರೆದು ಭರಣಿ ನಕ್ಷತ್ರಕ್ಕೆ ಪ್ರವೇಶಿಸುವರು. ಇದರಿಂದ ಗುರು ಮತ್ತು ರಾಹುವಿನ ಮೈತ್ರಿ ಮುರಿದು ಗುರು ಚಂಡಾಲ ದೋಷ ಕರಗುತ್ತದೆ. ಈ ದೋಷ ಕರಗಿದ ಕೂಡಲೇ ಈ 5 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ.

1 /5

ಗುರು ಚಂಡಾಲ ದೋಷ ನಿವಾರಣೆಯಿಂದ ಧನು ರಾಶಿಯವರಿಗೆ ವರದಾನದಂತೆ. ಹೂಡಿಕೆ ಮಾಡಲು ಇದು ಶುಭ ಸಮಯ ಮತ್ತು ನೀವು ಉತ್ತಮ ಆದಾಯವನ್ನು ಪಡೆಯುತ್ತೀರಿ. ವಿದೇಶದಲ್ಲಿ ವ್ಯಾಸಂಗ ಮಾಡುವ ಕನಸು ನನಸಾಗಲಿದೆ.  

2 /5

ಗುರು ಚಂಡಾಲ ದೋಷ ನಿವಾರಣೆಯಾಗುವುದು ಬಹಳ ಪ್ರಯೋಜನಕಾರಿ. ಈ ಸಮಯದಲ್ಲಿ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ ಮತ್ತು ದೀರ್ಘಕಾಲ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಹೊಸ ಉದ್ಯಮ ಆರಂಭಿಸುವ ಆಲೋಚನೆಯಲ್ಲಿರುವ ಉದ್ಯಮಿಗಳ ಕನಸು ಈಡೇರಲಿದೆ.  

3 /5

ಅದೃಷ್ಟವು ಹೊಳೆಯಲಾರಂಭಿಸುತ್ತದೆ. ಮಿಥುನ ರಾಶಿಯ ಜಾತಕದಲ್ಲಿ ಗುರುವಿನ ಸ್ಥಾನ ಬದಲಾದ ತಕ್ಷಣ ಬುಧಾದಿತ್ಯ ಮತ್ತು ಭದ್ರ ರಾಜಯೋಗವು ರೂಪುಗೊಳ್ಳುತ್ತದೆ. ಇದು ಎಲ್ಲಾ ಕೆಲಸದ ಕ್ಷೇತ್ರಗಳಲ್ಲಿ ಯಶಸ್ಸನ್ನು  ನೀಡುತ್ತದೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ.  

4 /5

ಕೆಲಸದ ಸ್ಥಳದಲ್ಲಿ ಲಾಭವಾಗಲಿದೆ. ಅತ್ಯುತ್ತಮ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಕಛೇರಿಯಲ್ಲಿರುವ ಬಾಸ್ ನಿಮ್ಮ ಕೆಲಸದಿಂದ ಸಂತುಷ್ಟರಾಗಿ ನಿಮ್ಮನ್ನು ಹೊಗಳುತ್ತಾರೆ. ಧನಲಾಭದಿಂದ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ.  

5 /5

ಈ ರಾಶಿಯವರ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಹಣ ಗಳಿಸಬಹುದು. ಉದ್ಯೋಗದಲ್ಲಿ ಬಡ್ತಿಗಾಗಿ ಕಾಯುತ್ತಿದ್ದವರ ಕನಸು ಈಡೇರಲಿದೆ.