ಡಿವೋರ್ಸ್‌ ವದಂತಿಗೆ ಬ್ರೇಕ್‌ ಹಾಕಿದ ಮಹಾಲಕ್ಷ್ಮೀ ರವೀಂದರ್ ಹೇಳಿದ್ದೇನು?

Mahalakshmi Ravindran : ಪ್ರೀತಿಯನ್ನು ಕುರುಡು ಎಂದು ಕರೆಯಲಾಗುತ್ತದೆ. ಕೆಲವರಿಗೆ ಇದು ನಿಜ. ಅದರಲ್ಲಿ ಮಹಾಲಕ್ಷ್ಮಿ ಮತ್ತು ರವೀಂದರ್ ದಂಪತಿಯನ್ನು ನೋಡಿದರೆ ಈ ವಿಷಯ ನಿಜವೇ ಅನ್ನಿಸುತ್ತದೆ. ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರನ್ ಮದುವೆಯಾಗಿ ಹಲವು ತಿಂಗಳುಗಳಾಗಿವೆ. ಆದರೆ ಈ ಜೋಡಿ ಆಗಾಗ ಸುದ್ದಿಯಲ್ಲಿರುತ್ತದೆ. 

1 /6

ಮೊದಲ ಮದುವೆಯಲ್ಲಿ ಮಗನನ್ನು ಹೊಂದಿದ್ದ ಮಹಾಲಕ್ಷ್ಮಿ ನಂತರ ನಿರ್ಮಾಪಕ ರವೀಂದರ್ ಅವರನ್ನು ವಿವಾಹವಾದರು. ಇವರಿಬ್ಬರು ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.   

2 /6

ಮಹಾಲಕ್ಷ್ಮೀ ಹಾಗೂ ರವೀಂದರ್​ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆದ ಬೆನ್ನಲ್ಲೇ ಈ ಜೋಡಿ ಈ ವದಂತಿಗೆ ತೆರೆ ಎಳೆದಿದೆ.  

3 /6

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಹಂಚಿಕೊಳ್ಳುವ ಮೂಲಕ ಮಹಾಲಕ್ಷ್ಮೀ ಎಲ್ಲಾ ಸುಳ್ಳು ಸುದ್ದಿಗೆ ಬ್ರೇಕ್​ ಹಾಕಿದ್ದಾರೆ.  

4 /6

ನೀವು ನನ್ನ ಭುಜದ ಮೇಲೆ ಕೈ ಇಟ್ಟರೆ ನಾನು ಈ ಜಗತ್ತಿನಲ್ಲಿ ಏನು ಬೇಕಿದ್ದರೂ ಮಾಡಬಲ್ಲೆ ಎಂದು ಈ ಫೋಟೋಗಳಿಗೆ ಮಹಾಲಕ್ಷ್ಮೀ ಶೀರ್ಷಿಕೆ ನೀಡಿದ್ದು ನಮ್ಮ ನಡುವೆ ಎಲ್ಲವೂ ಸರಿಯಾಗಿದೆ ಎಂಬ ಸಂದೇಶ ಸಾರಿದ್ದಾರೆ.  

5 /6

ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಜೊತೆ ಮದುವೆಯಾದ ನಂತರ ನಟಿ ಮಹಾಲಕ್ಷ್ಮಿ ಸದಾ ಸುದ್ದಿಯಲ್ಲಿರುತ್ತಾರೆ. ಮತ್ತು ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.  

6 /6

ಆದರೆ ಮದುವೆಯಾದ ನಂತರವೂ ಸೋಷಿಯಲ್ ಮೀಡಿಯಾ ಬಳಕೆದಾರರು ಈ ಜೋಡಿಯನ್ನು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ.