Vastu Tips: ಶ್ರಾವಣ ಮಾಸದಲ್ಲಿ ಈ ಸಸ್ಯಗಳನ್ನು ಮನೆಗೆ ತಂದರೆ ಸಿಗುತ್ತೆ ಸಿರಿವಂತರಾಗುವ ಭಾಗ್ಯ

                                         

Plants Vastu: ಕಣ್ಣಿಗೆ ಮುದ ನೀಡುವ ಹಸಿರು ಸಸ್ಯಗಳು ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ. ಜ್ಯೋತಿಷ್ಯ ಹಾಗೂ ವಾಸ್ತು ಶಾಸ್ತ್ರದಲ್ಲಿಯೂ, ಹಸಿರು ಸಸ್ಯಗಳಿಗೆ ತುಂಬಾ ಮಹತ್ವವಿದ್ದು ಶ್ರಾವಣ ಮಾಸದಲ್ಲಿ ಕೆಲವು ಸಸ್ಯಗಳನ್ನು ಮನೆಗೆ ತರುವುದನ್ನು ತುಂಬಾ ಲಾಭದಾಯಕ ಎಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಹಸಿರು ಸಮೃದ್ಧಿಯ ಸಂಕೇತ.  ಹಸಿರು ಸಸ್ಯಗಳು ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿ ಆಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹಸಿರು ಸಸ್ಯಗಳು ಮನೆಯಲ್ಲಿ ಸುಖ-ಶಾಂತಿ, ನೆಮ್ಮದಿಯನ್ನು ತರುತ್ತವೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಲವು ಸಸ್ಯಗಳು ಹಣದ ಹರಿವನ್ನು ಹರಿಸುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಭಗವಾನ್ ಶಿವನಿಗೆ ಹಸಿರು ಸಸ್ಯಗಳೆಂದರೆ ತುಂಬಾ ಅಚ್ಚು ಮೆಚ್ಚು ಎಂತಲೂ ಹೇಳಲಾಗುತ್ತದೆ. 

2 /8

ಧಾರ್ಮಿಕ ನಂಬಿಕೆಗಳ ಪ್ರಕಾರ, ಮಹಾದೇವನಿಗೆ ಕೆಲವು ಸಸ್ಯಗಳು ಮರಗಳೆಂದರೆ ಬಹಳ ಇಷ್ಟವಂತೆ. ಈ ಸಸ್ಯಗಳನ್ನು ಮನೆಗೆ ತರುವುದರಿಂದ ಸುಖ-ಶಾಂತಿ ನೆಲೆಸಿ ಅಂತಹ ಮನೆಯಲ್ಲಿ ಹಣದ ಹೊಳೆಯೇ ಹರಿಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲೂ, ಶ್ರಾವಣ ಮಾಸದಲ್ಲಿ ಈ ಸಸ್ಯಗಳನ್ನು ಮನೆಗೆ ತರುವುದರಿಂದ ಅಂತಹ ಮನೆಯಲ್ಲಿ ಹಣದ ಕೊರತೆಯೇ ಇರುವುದಿಲ್ಲ ಎಂದು ನಂಬಲಾಗಿದೆ. ಹಾಗಿದ್ದರೆ, ಆ ಸಸ್ಯಗಳು ಯಾವುವು ಎಂದು ನೋಡುವುದಾದರೆ... 

3 /8

ಶಿವನಿಗೆ ಪ್ರಿಯವಾದ ಸಸ್ಯಗಳಲ್ಲಿ ಶಮಿ ಗಿಡವೂ ಒಂದು. ಶ್ರಾವಣ ಮಾಸದಲ್ಲಿ ಮನೆಗೆ ಶಮಿ ಗಿಡವನ್ನು ತರುವುದರಿಂದ ಅಂತಹ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಿ ಸಂಪತ್ತಿನ ಸುರಿಮಳೆಯೇ ಆಗಲಿದೆ. ಇದಕ್ಕಾಗಿ, ಶಮಿ ಗಿಡವನ್ನು ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ನೆಡುವುದು ತುಂಬಾ ಶ್ರೇಷ್ಠ ಎಂದು ಭಾವಿಸಲಾಗಿದೆ. 

4 /8

ಪ್ರತಿಯೊಬ್ಬರಿಗೂ ತಿಳಿದಿರುವಂತೆ ಭಗವಾನ್ ಭೋಲೆನಾತನಿಗೆ ಬಿಲ್ವಪತ್ರೆ ಎಂದರೆ ತುಂಬಾ ಇಷ್ಟ. ಒಂದೇ ಒಂದು ದಳ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಿ ಭಕ್ತರು ಏನೇ ಬೇಡಿಕೆ ಇಟ್ಟರೂ ಅವರ ಮನೋಕಾಮನೆ ನೆರವೇರುತ್ತದೆ ಎಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ಈ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ ಆರ್ಥಿಕ ಸಂಕಷ್ಟಗಳಿಂದ ಪಾರಗಬಹುದು ಎಂದು ಹೇಳಲಾಗುತ್ತದೆ. 

5 /8

ಶಾಸ್ತ್ರಗಳ ಪ್ರಕಾರ, ಬಾಳೆ ಗಿಡದಲ್ಲಿ ಭಗವಾನ್ ಶ್ರೀ ವಿಷ್ಣು ನೆಲೆಸಿದ್ದಾನೆ ಎಂಬ ನಂಬಿಕೆಯಿದೆ. ಶ್ರಾವಣ ಮಾಸದಲ್ಲಿ ಬಾಳೆ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುತ್ತವೆ. ಅಂತಹ ಮನೆಯಲ್ಲಿ ಸದಾ ವಿಷ್ಣು- ಲಕ್ಷ್ಮಿಯ ಆಶೀರ್ವಾದ ಇದ್ದೇ ಇರುತ್ತದೆ ಎನ್ನಲಾಗುತ್ತದೆ.   

6 /8

ಜ್ಯೋತಿಷ್ಯ ಶಾಸ್ತ್ರ ಪ್ರಕಾರ, ಎಕ್ಕದ ಗಿಡದಲ್ಲಿ ವಿಘ್ನ ವಿನಾಶಕ ಗಣಪತಿ ನೆಲೆಸಿರುತ್ತಾನೆ ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಎಕ್ಕದ ಹೂ ಶಿವನಿಗೆ ತುಂಬಾ ಪ್ರಿಯ. ಈ ಸಸ್ಯವನ್ನು ಶ್ರಾವಣ ಮಾಸದಲ್ಲಿ ಮನೆಯ ಮುಂದೆ ನೆಡುವುದರಿಂದ ಅಂತಹ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಶಕ್ತಿ ತುಂಬುತ್ತದೆ ಎಂದು ಹೇಳಲಾಗುತ್ತದೆ. 

7 /8

ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯದಲ್ಲಿ ಸಂಪತ್ತಿನ ದೇವತೆ ಮಾತೆ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ. ಲಕ್ಷ್ಮಿ ಸ್ವರೂಪಿಯಾದ ತುಳಸಿ ಸಸ್ಯವನ್ನು ಶ್ರಾವಣ ಮಾಸದಲ್ಲಿ ನೆಡುವುದರಿಂದ ಹಾಗೂ ನಿತ್ಯ ಪೂಜೆ ಮಾಡಿ ತುಪ್ಪದ ದೀಪ ಹಚ್ಚುವುದರಿಂದ ಅಂತಹ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಆ ಮನೆಯಲ್ಲಿ ಸುಖ-ಸಂಪತ್ತಿಗೆ ಕೊರತೆಯೇ ಇರುವುದಿಲ್ಲ ಎಂದು ನಂಬಲಾಗಿದೆ. 

8 /8

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.