ತಂದೆಯ ಅಂತ್ಯಕ್ರಿಯೆಗೂ ಹೋಗದೆ ಕಣ್ಣೀರು ಹಾಕುತ್ತಾ ತಂಡಕ್ಕೋಸ್ಕರ ಆಡಿದ್ದರು ಈ ಸ್ಟಾರ್ ಬೌಲರ್!

Mohammad Siraj: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡಿದ ಮೊಹಮ್ಮದ್ ಸಿರಾಜ್, 'ಆಸ್ಟ್ರೇಲಿಯಾದಲ್ಲಿರುವ ಇತರ ಆಟಗಾರರ ಕೊಠಡಿಗಳಿಗೆ ಯಾರೂ ಹೋಗುವಂತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಾವು ವೀಡಿಯೊ ಕರೆಗಳಲ್ಲಿ ಮಾತನಾಡುತ್ತಿದ್ದೆವು” ಎಂದು ಹೇಳುವ ಮೂಲಕ ತಮ್ಮ ನೋವಿನ ಅನುಭವವನ್ನು ಹೇಳಿದ್ದಾರೆ.

1 /5

ಟೀಂ ಇಂಡಿಯಾದ ವೇಗಿಗಳ ದಾಳಿಯನ್ನು ಮುನ್ನಡೆಸಿದ್ದ ಮೊಹಮ್ಮದ್ ಸಿರಾಜ್, ಆಸ್ಟ್ರೇಲಿಯಾ ಪ್ರವಾಸದ ವೇಳೆ ತಂದೆಯ ಸಾವಿನ ನಂತರ ತಮಗಾದ ಅನುಭವವನ್ನು ಹೇಳಿದ್ದಾರೆ. ಆ ಸಂದರ್ಭದಲ್ಲಿ ಕೊರೊನಾ ಕಾರಣದಿಂದ 'ಬಯೋ-ಬಬಲ್' ನಲ್ಲಿದ್ದರು. ಒಂದು ಕಡೆ ತಂದೆಯನ್ನೂ ನೋಡೋಕಾಗದ ನೋವಿನಲ್ಲಿ  ತಮ್ಮ ಕೋಣೆಯಲ್ಲಿ ಆಗಾಗ್ಗೆ ಅಳುತ್ತಿದ್ದರು ಎಂದು ಹೇಳಿದರು. ಸಿರಾಜ್ ಅವರ ತಂದೆ ಮೊಹಮ್ಮದ್ ಗೌಸ್ ನವೆಂಬರ್ 2020 ರಲ್ಲಿ ನಿಧನರಾದರು.

2 /5

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡಿದ ಮೊಹಮ್ಮದ್ ಸಿರಾಜ್, 'ಆಸ್ಟ್ರೇಲಿಯಾದಲ್ಲಿರುವ ಇತರ ಆಟಗಾರರ ಕೊಠಡಿಗಳಿಗೆ ಯಾರೂ ಹೋಗುವಂತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಾವು ವೀಡಿಯೊ ಕರೆಗಳಲ್ಲಿ ಮಾತನಾಡುತ್ತಿದ್ದೆವು” ಎಂದು ಹೇಳುವ ಮೂಲಕ ತಮ್ಮ ನೋವಿನ ಅನುಭವವನ್ನು ಹೇಳಿದ್ದಾರೆ.

3 /5

ಆರ್‌ಸಿಬಿ 'ಸೀಸನ್ 2 ಪಾಡ್‌ಕ್ಯಾಸ್ಟ್' ನಲ್ಲಿ ಸಿರಾಜ್ ಮಾತನಾಡಿದ್ದು, 'ಭಾರತದ ಮಾಜಿ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಸರ್ ಅವರು ತಮ್ಮ ಯೋಗಕ್ಷೇಮವನ್ನು ಫೋನ್‌ನಲ್ಲಿ ಕೇಳುತ್ತಿದ್ದರು. ಹೇಗಿದ್ದೀಯ, ಏನು ತಿಂದೆ ಎಂದು ಕೇಳುತ್ತಿದ್ದರು. ಇದರಿಂದ ನನಗೆ ಒಳ್ಳೆಯದಾಯಿತು. ಆ ಸಮಯದಲ್ಲಿ ನನ್ನ ಭಾವಿ ಪತ್ನಿ ಕೂಡ ನನ್ನೊಂದಿಗೆ ಫೋನ್‌ನಲ್ಲಿ ಮಾತನಾಡಿ ಪ್ರೋತ್ಸಾಹಿಸುತ್ತಿದ್ದಳು” ಎಂದು ಹೇಳಿದರು.

4 /5

ಘಟನೆಯನ್ನು ವಿವರಿಸುತ್ತಾ, "ನಾನು ಎಂದಿಗೂ ಫೋನ್‌ನಲ್ಲಿ ಅಳಲಿಲ್ಲ ಆದರೆ ನಾನು ಕೋಣೆಯಲ್ಲಿ ಅಳುತ್ತಾ, ನನ್ನ ಭಾವಿ ಪತ್ನಿಯೊಂದಿಗೆ ಮಾತನಾಡಿದ ಹಲವು ಸಂದರ್ಭಗಳಿವೆ" ಎಂದು ಹೇಳಿದರು.

5 /5

'ನನ್ನ ತಂದೆಯ ಮರಣದ ಮರುದಿನ ನಾನು ಮೈದಾನಕ್ಕೆ ಇಳಿದಿದ್ದೆ. ತಂದೆಯ ಆಶೀರ್ವಾದ ನಿನ್ನ ಮೇಲಿದೆ. ನೀನು 5 ವಿಕೆಟ್‌ಗಳನ್ನು ಪಡೆಯುತ್ತೀಯ ಎಂದು ರವಿಶಾಸ್ತ್ರಿ ಹೇಳಿದ್ದರು. ಅದರಂತೆ ನಾನು ಬ್ರಿಸ್ಬೇನ್ ಮೈದಾನದಲ್ಲಿ 5 ವಿಕೆಟ್ ಪಡೆದಾಗ, ನೋಡು ನನ್ನ ಮಾತು ನಿಜವಾಯಿತು ಎಂದು ಹೇಳಿದರು” ಎಂದರು.