Diabetes: ಈ ಕಾರಣಗಳು ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು!

Diabetes Risk: ಒಮ್ಮೆ ಮಧುಮೇಹ ಬಂದ ಮೇಲೆ ಅದನ್ನು ನಿಯಂತ್ರಿಸಬಹುದೇ ಹೊರತು ಸಂಪೂರ್ಣವಾಗಿ ಅದರಿಂದ ಹೊರಬರಲು ಸಾಧ್ಯವಿಲ್ಲ. ಆದರ್,ಎ ಮಧುಮೇಹ ಇಲ್ಲದವರು ಅದನ್ನು ತಪ್ಪಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಬೇಕು. ಇದಕ್ಕಾಗಿ ಯಾವ ಕಾರಣಕ್ಕಾಗಿ ಮಧುಮೇಹ ಬರಬಹುದು. ಯಾವ ಕಾರಣಗಳು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದನ್ನು ತಿಳಿದಿರಬೇಕು. 

Diabetes Risk: ಪ್ರಪಂಚದಾದ್ಯಂತ ಮಧುಮೇಹದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ, ಭಾರತವನ್ನು 'ಡಯಾಬಿಟಿಸ್ ಕ್ಯಾಪಿಟಲ್' ಎಂದೂ ಕರೆಯುತ್ತಾರೆ. ಏಕೆಂದರೆ, ಭಾರತದಲ್ಲಿ ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿರುವವವರ ಸಂಖ್ಯೆ ಅತಿ ಹೆಚ್ಚು. ಇಲ್ಲಿ ಜನರು ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಸುಧಾರಿಸುವಲ್ಲಿ ಕಡಿಮೆ ಒತ್ತು ನೀಡುತ್ತಾರೆ. ಇದರಿಂದಾಗಿ ಡಯಾಬಿಟಿಸ್ ಅಪಾಯ ಹೆಚ್ಚು ಎನ್ನುತ್ತಾರೆ ತಜ್ಞರು. 

ಒಮ್ಮೆ ಮಧುಮೇಹ ಬಂದ ಮೇಲೆ ಅದನ್ನು ನಿಯಂತ್ರಿಸಬಹುದೇ ಹೊರತು ಸಂಪೂರ್ಣವಾಗಿ ಅದರಿಂದ ಹೊರಬರಲು ಸಾಧ್ಯವಿಲ್ಲ. ಆದರ್,ಎ ಮಧುಮೇಹ ಇಲ್ಲದವರು ಅದನ್ನು ತಪ್ಪಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಬೇಕು. ಇದಕ್ಕಾಗಿ ಯಾವ ಕಾರಣಕ್ಕಾಗಿ ಮಧುಮೇಹ ಬರಬಹುದು. ಯಾವ ಕಾರಣಗಳು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತವೆ ಎಂಬುದನ್ನು ತಿಳಿದಿರಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಅನುವಂಶಿಕ ಕಾರಣ: ಮಧುಮೇಹದ ಅಪಾಯವನ್ನು ಹೆಚ್ಚಿಸುವಲ್ಲಿ ಅನುವಂಶಿಕ ಕಾರಣಗಳನ್ನು ನಿರಾಕರಿಸಲಾಗದು. ನಿಮ್ಮ ಹಿರಿಯರು, ಪೋಷಕರು ಅಥವಾ ನಿಮ್ಮ ಯಾವುದೇ ನಿಕಟ ಕುಟುಂಬದ ಸದಸ್ಯರಿಗೆ ಮಧುಮೇಹ ಇದ್ದರೆ, ನೀವು ಸಹ ಈ ಸಮಸ್ಯೆಗೆ ಬಲಿಯಾಗಬಹುದು. ಇದನ್ನು ತಪ್ಪಿಸಲು, ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಿ.

2 /5

ಎಣ್ಣೆಯುಕ್ತ ಆಹಾರಗಳು: ಭಾರತದಲ್ಲಿ ಎಣ್ಣೆಯುಕ್ತ ಪದಾರ್ಥಗಳನ್ನು ತಿನ್ನುವ ಪ್ರವೃತ್ತಿ ತುಂಬಾ ಹೆಚ್ಚಾಗಿದೆ. ಕೆಲವರಿಗೆ, ಎಣ್ಣೆ ಇಲ್ಲದ ಆಹಾರಗಳು ಅಷ್ಟು ಇಷ್ಟವಾಗುವುದಿಲ್ಲ. ಅದರ ರುಚಿ ನಮ್ಮ ನಾಲಿಗೆಗೆ ಆಹ್ಲಾದಕರ ಎನಿಸುವುದಿಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ಎಣ್ಣೆಯುಕ್ತ ಆಹಾರಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಇದು ಸಹ ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು ಎಂಬುದನ್ನು ತಳ್ಳಿಹಾಕುವಂತಿಲ್ಲ.

3 /5

ಸೂಕ್ಷ್ಮ ಪೋಷಕಾಂಶಗಳ ಕೊರತೆ: ನಿಮ್ಮ ದೇಹದಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿದ್ದರೆ, ಮಧುಮೇಹದಂತಹ ಸಂಕೀರ್ಣ ಕಾಯಿಲೆಯ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದಕ್ಕಾಗಿ ನೀವು ಹೆಚ್ಚು ಹೆಚ್ಚು ಸಸ್ಯಾಹಾರಿ ಆಹಾರವನ್ನು ಸೇವಿಸುವುದು ಮುಖ್ಯ. ವಿಟಮಿನ್ ಡಿ ಕೊರತೆಯು ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣದಿಂದ ಹೊರಬರಲು ಕಾರಣವಾಗಬಹುದು, ಆದ್ದರಿಂದ ಪ್ರತಿದಿನ 10 ರಿಂದ 15 ನಿಮಿಷಗಳ ಕಾಲ ಬಿಸಿಲಿನಲ್ಲಿರಲು ಪ್ರಯತ್ನಿಸಿ.

4 /5

ದೈಹಿಕ ಚಟುವಟಿಕೆಗಳ ಕೊರತೆ: ತಾಲೀಮು ಮತ್ತು ದೈಹಿಕ ಚಟುವಟಿಕೆಗಳಿಗೆ ಸಮಯ ಸಿಗದ ಜನರು ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅವರು ಮೊದಲು ಸ್ಥೂಲಕಾಯತೆಗೆ ಬಲಿಯಾಗುತ್ತಾರೆ, ನಂತರ ಹೆಚ್ಚಿನ ಕೊಲೆಸ್ಟ್ರಾಲ್‌ನಿಂದ, ಅವರು ಹೃದಯ ಕಾಯಿಲೆಗಳು ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೂ ಗುರಿಯಾಗಬಹುದು.

5 /5

ಸಿಗರೇಟ್ ಮತ್ತು ಮದ್ಯ: ಧೂಮಪಾನ ಮತ್ತು ಮದ್ಯಪಾನವು ನಮ್ಮ ಆರೋಗ್ಯದ ದೊಡ್ಡ ಶತ್ರುಗಳು ಎಂದು ನಾವು ಶತಮಾನಗಳಿಂದ ತಿಳಿದಿದ್ದೇವೆ, ಆದರೆ ಈ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಲು ನಮ್ಮಲ್ಲಿ ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ.  ಸಿಗರೇಟ್, ಬೀಡಿ, ಹುಕ್ಕಾ, ಆಲ್ಕೋಹಾಲ್ ಮುಂತಾದವುಗಳು ಮಧುಮೇಹದ ಅಪಾಯವನ್ನು ಮಾತ್ರವಲ್ಲ, ರಕ್ತದೊತ್ತಡ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತವೆ.   ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ  ಇದನ್ನು ಖಚಿತಪಡಿಸುವುದಿಲ್ಲ