Side Effects of Ginger: ಎಚ್ಚರ! ಶುಂಠಿಯ ಮಿತಿಮೀರಿದ ಸೇವನೆ ಅಪಾಯಕಾರಿ

                           

Side Effects of Ginger: ಶುಂಠಿಯು ನಮ್ಮ ಅಡುಗೆಮನೆಯಲ್ಲಿ ಯಾವಾಗಲೂ ಇರುವ ಪದಾರ್ಥವಾಗಿದೆ. ಈ ಶುಂಠಿಯಲ್ಲಿ ಇಂಜ್ರೋಲ್ ಎಂಬ ಸಕ್ರಿಯ ಅಂಶವಿದೆ, ಇದು ಮಧುಮೇಹ, ನೆಗಡಿ, ಹೊಟ್ಟೆಯ ಸಮಸ್ಯೆಗಳು, ಅಧಿಕ ರಕ್ತದೊತ್ತಡ ಮತ್ತು ವಾಕರಿಕೆ ಮುಂತಾದ ಅನೇಕ ಸಮಸ್ಯೆಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಶುಂಠಿಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಶುಂಠಿಯನ್ನು ಮಿತವಾಗಿ ತಿನ್ನುವುದು ಆರೋಗ್ಯಕರ ಎಂದು ಹೇಳಲಾಗುತ್ತದೆ. ನೀವು ಹೆಚ್ಚು ಶುಂಠಿಯನ್ನು ಸೇವಿಸಿದರೆ ಯಾವ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ಇಲ್ಲಿ ನಾವು ನೋಡುತ್ತೇವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಗರ್ಭಾವಸ್ಥೆಯಲ್ಲಿ ವಾಕರಿಕೆ ಅಥವಾ ವಾಂತಿಯನ್ನು ಸರಿಪಡಿಸಲು ಶುಂಠಿಯು ಗರ್ಭಿಣಿಯರಿಗೆ ಸಹಾಯ ಮಾಡುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಶುಂಠಿಯು ಗರ್ಭಪಾತಕ್ಕೆ ಕಾರಣವಾಗಬಹುದು. ಹಾಗಾಗಿ ರಕ್ತಸ್ರಾವ ಸಮಸ್ಯೆ ಇರುವ ಮಹಿಳೆಯರು ಶುಂಠಿಯನ್ನು ತಪ್ಪಿಸುವುದು ಉತ್ತಮ.  

2 /5

ಶುಂಠಿ ತೂಕ ಇಳಿಸಲು ಸಹಾಯ ಮಾಡುತ್ತದೆ. ಆದರೆ, ತೂಕ ಇಳಿಸಿಕೊಳ್ಳಲು ಬಯಸದ ಅಥವಾ ಕಡಿಮೆ ತೂಕ ಹೊಂದಿರುವ ಜನರು ಈ ಶುಂಠಿಯನ್ನು ತಮ್ಮ ಆಹಾರದಿಂದ ತಪ್ಪಿಸಬೇಕು ಎಂದು ಹೇಳಲಾಗುತ್ತದೆ.  

3 /5

ಪಿತ್ತಗಲ್ಲು: ಶುಂಠಿಯು ನಿಮ್ಮ ಪಿತ್ತಕೋಶದಲ್ಲಿ ಪಿತ್ತಗಲ್ಲುಗಳನ್ನು ಉಂಟುಮಾಡಬಹುದು. ಶುಂಠಿಯ ಅತಿಯಾದ ಸೇವನೆಯು ಪಿತ್ತಜನಕಾಂಗದಲ್ಲಿ ಅಧಿಕ ಪಿತ್ತರಸ ಸ್ರವಿಸುವಿಕೆಯನ್ನು ಉಂಟುಮಾಡಬಹುದು ಮತ್ತು ಪಿತ್ತಗಲ್ಲುಗಳನ್ನು ಉಂಟುಮಾಡಬಹುದು. ಇದನ್ನೂ ಓದಿ- Weight Loss Tips : ನಿತ್ಯ ಶುಂಠಿಯನ್ನು ಈ ರೀತಿ ಬಳಸಿದರೆ ಬಹುಬೇಗ Weight Loss ಮಾಡಿಕೊಳ್ಳಬಹುದು

4 /5

ಶುಂಠಿಯಲ್ಲಿ ಸ್ಯಾಲಿಸಿಲೇಟ್‌ಗಳು ಸಮೃದ್ಧವಾಗಿವೆ. ರಕ್ತಹೀನತೆ (Anemia) ಮತ್ತು ಹಿಮೋಫಿಲಿಯಾದಂತಹ ಕಾಯಿಲೆಗಳಿಂದ ಬಳಲುತ್ತಿರುವ ಜನರು ಖಂಡಿತವಾಗಿಯೂ ಶುಂಠಿಯನ್ನು ತಮ್ಮ ಆಹಾರದಿಂದ ತಪ್ಪಿಸಬೇಕು. ಏಕೆಂದರೆ ಶುಂಠಿಯು ಅಧಿಕ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಇದನ್ನೂ ಓದಿ- Ginger Water For Glowing Skin:ಹೊಳೆಯುವ ಚರ್ಮಕ್ಕಾಗಿ ನಿತ್ಯ ಬಳಸಿ ಶುಂಠಿ ನೀರು

5 /5

ಆಸಿಡ್ ರಿಫ್ಲಕ್ಸ್ ನಂತಹ ಉರಿಯೂತದ ಸಮಸ್ಯೆ ಇರುವವರಿಗೆ, ಅತಿಯಾದ ಶುಂಠಿ ಸೇವನೆಯು ಆಸಿಡ್ ರಿಫ್ಲಕ್ಸ್, ಹೊಟ್ಟೆ ಉರಿ, ಎದೆ ನೋವು ಮತ್ತು ಎದೆಯುರಿ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಆಸಿಡ್ ರಿಫ್ಲಕ್ಸ್ ನಂತಹ ಮೇಲೆ ತಿಳಿಸಿದ ಸಮಸ್ಯೆಗಳನ್ನು ತಡೆಗಟ್ಟಲು ಕಡಿಮೆ ಶುಂಠಿಯನ್ನು ಸೇವಿಸುವುದು ಉತ್ತಮ. (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)