30 ವರ್ಷಗಳಲ್ಲಿ ಇದೇ ಮೊದಲು... ಜನ್ಮಾಷ್ಟಮಿಯಂದು ಈ ರಾಶಿಯವರಿಗೆ ಅಖಂಡ ವರ ಸಿದ್ಧಿ! ಶ್ರೀಕೃಷ್ಣನ ದಯೆಯಿಂದ ಹಣದ ಸುರಿಮಳೆ, ಬ್ಯಾಕ್ ಟು ಬ್ಯಾಕ್ ಸಕ್ಸಸ್

Shri Krishna Janmashtami Lucky Zodiac signs: ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನದಂದು ಶ್ರೀ ಕೃಷ್ಣನ ಜನ್ಮದಿನವನ್ನು ಆಚರಿಸಲಾಗುತ್ತದೆ. ಇದನ್ನು ಜನ್ಮಾಷ್ಟಮಿ ಎಂದೂ ಕರೆಯುವುದುಂಟು. ಅಂದಹಾಗೆ ಈ ವರ್ಷ ಜನ್ಮಾಷ್ಟಮಿ ಹಬ್ಬವನ್ನು ಕೆಲವೆಡೆ ಸೆಪ್ಟೆಂಬರ್ 6 ರಂದು, ಇನ್ನೂ ಕೆಲವೆಡೆ 7ನೇ ತಾರೀಖಿನಂದು ಆಚರಿಸಲಾಗುತ್ತಿದೆ.

  • Sep 06, 2023, 06:16 AM IST

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್

1 /10

ಇಂದು ಶ್ರೀಕೃಷ್ಟ ಜನ್ಮಾಷ್ಟಮಿ. ಈ ದಿನದಂದು ಗ್ರಹಗಳು ಮತ್ತು ನಕ್ಷತ್ರಪುಂಜಗಳ ಅಪರೂಪದ ಸಂಯೋಗ ನಡೆಯುತ್ತಿದೆ. 30 ವರ್ಷಗಳ ನಂತರ ಜನ್ಮಾಷ್ಟಮಿಯಂದು ಸರ್ವಾರ್ಥ ಸಿದ್ಧಿ ಯೋಗವು ರೂಪುಗೊಳ್ಳುತ್ತಿದೆ. ಇದರ ಪ್ರಭಾವದಿಂದ ಕೆಲ ರಾಶಿಗಳಿಗೆ ಶುಭವಾಗಲಿದೆ,

2 /10

ಇದರ ಜೊತೆಗೆ ಶ್ರೀಕೃಷ್ಣನು ಸುಮಾರು 30 ವರ್ಷಗಳ ಬಳಿಕ ಏಳು ರಾಶಿಯ ಜನರಿಗೆ ಸರ್ವಮಂಗಳವನ್ನುಂಟು ಮಾಡಲಿದ್ದಾರೆ. ಈ ರಾಶಿಗಳಿಗೆ ಜನ್ಮಾಷ್ಟಮಿಯಂದು ಅದೃಷ್ಟದ ಬಾಗಿಲು ತೆರೆಯಲಿದೆ. ಗೋಪಾಲನು ಅಪಾರ  ಆಶೀರ್ವಾದ ಕರುಣಿಸಿ, ಈ ಜನರ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಪ್ರೀತಿಯನ್ನು ನೀಡಲಿದ್ದಾರೆ,

3 /10

ವೃಷಭ ರಾಶಿ: ಈ ರಾಶಿಯ ಜನರಿಗೆ ಈ ಶ್ರೀಕೃಷ್ಣ ಜನ್ಮಾಷ್ಟಮಿ ಅದೃಷ್ಟ ತರಲಿದೆ. ಆತ್ಮವಿಶ್ವಾಸ ಹೆಚ್ಚಳದ ಜೊತೆ ಆರೋಗ್ಯವಾಗಿರುತ್ತೀರಿ. ಒಂದರ ಹಿಂದೆ ಒಂದರಂತೆ ಯಶಸ್ಸು ನಿಮ್ಮ ಪಾಲಾಗಲಿದೆ.

4 /10

 ಕಟಕ ರಾಶಿ: ಜನ್ಮಾಷ್ಟಮಿಯಂದು ಈ ರಾಶಿಯವರ ಬದುಕು ಬಂಗಾರವಾಗಲಿದೆ. ಮನೆಯಲ್ಲಿ ಸಂತೋಷವಿರಲಿದೆ. ಲಾಭದ ಹೆಚ್ಚಳ ಮತ್ತು ವ್ಯವಹಾರದಲ್ಲಿ ಹೊಸ ಆದಾಯದ ಮೂಲಗಳು ಬರಲಿವೆ. ಸಂತಾನ ಭಾಗ್ಯವೂ ಪ್ರಾಪ್ತಿಯಾಗಲಿದೆ.

5 /10

ಸಿಂಹ ರಾಶಿ: ಶ್ರೀಕೃಷ್ಣನ ಅನುಗ್ರಹದಿಂದ ಕೈಯಿಟ್ಟ ಪ್ರತೀ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ. ಇಂದು ನಿಮ್ಮ ಅದೃಷ್ಟದ ದಿನ. ಮನಸ್ಸು ಶಾಂತವಾಗಿರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಎಂದೂ ಕಾಣದ ಯಶಸ್ಸು ಕಾಣುವಿರಿ.

6 /10

ವೃಶ್ಚಿಕ ರಾಶಿ: ಈ ರಾಶಿಯ ಜನರಿಗೆ ಶ್ರೀಕೃಷ್ಣನು ಸಂಪತ್ತಿನ ಮಳೆಯನ್ನೇ ಹರಿಸಲಿದ್ದಾನೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ, ಸ್ಥಾನ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಜೀವನದಲ್ಲಿ ಸಂತೋಷ ವೃದ್ಧಿಸುತ್ತದೆ.

7 /10

ಧನು ರಾಶಿ: ಈ ರಾಶಿಯ ಜನರಿಗೆ ಜನ್ಮಾಷ್ಟಮಿಯು ಸಂಪತ್ತನ್ನು ಕರುಣಿಸಲಿದೆ. ಉದ್ಯೋಗದಲ್ಲಿ ಬಡ್ತಿ ಭಾಗ್ಯವೂ ಇದೆ. ಆದಾಯ ಹೆಚ್ಚಾಗುವ ಲಕ್ಷಣಗಳಿವೆ. ಆರೋಗ್ಯ ಉತ್ತಮವಾಗಿರುತ್ತದೆ.

8 /10

ಕುಂಭ ರಾಶಿ: ಈ ರಾಶಿಯವರಿಗೆ ಜನ್ಮಾಷ್ಟಮಿ ಅದೃಷ್ಟ ತರಲಿದೆ. ಮನಸ್ಸು ಪ್ರೀತಿ ಮತ್ತು ಸಹಾನುಭೂತಿಯಿಂದ ತುಂಬಿರುತ್ತದೆ. ಆಸ್ತಿ ಅಥವಾ ವಾಹನ ಖರೀದಿಸುವಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

9 /10

ಮೀನ ರಾಶಿ: ಈ ರಾಶಿಯ ಜನರಿಗೆ ಶತ್ರುಗಳು ಕಾಟ ನೀಡಿದರೂ ಶ್ರೀಕೃಷ್ಣ ಬೆಂಗಾವಲಾಗಿ ನಿಲ್ಲುತ್ತಾನೆ. ಹಣದ ಮೂಲಗಳು ವೃದ್ಧಿಸುತ್ತವೆ. ಕೆಲಸದಲ್ಲಿ ಎಲ್ಲವೂ ಶುಭವಾಗಲಿದೆ. ಉದ್ಯೋಗಸ್ಥರಿಗೆ ಇನ್ಕ್ರಿಮೆಂಟ್ ಕೂಡ ಸಿಗಲಿದೆ.

10 /10

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)