Plant Vastu Tips: ಮನೆಯ ಮುಖ್ಯ ದ್ವಾರದಲ್ಲಿ ಈ ಗಿಡಗಳನ್ನು ನೆಟ್ಟರೆ ಶುಭ

ವಾಸ್ತು ಪ್ರಕಾರ, ಮನೆಯಲ್ಲಿರುವ ಮರಗಳು ಮತ್ತು ಸಸ್ಯಗಳು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ, ಅವು ಮನೆಯಲ್ಲಿ ಶಾಂತಿಯನ್ನು ನೀಡುತ್ತವೆ. ಇಂದು ನಾವು ಅಂತಹ ಕೆಲವು ಸಸ್ಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. 

Plant For House: ವಾಸ್ತು ಪ್ರಕಾರ, ಮನೆಯಲ್ಲಿರುವ ಮರಗಳು ಮತ್ತು ಸಸ್ಯಗಳು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ, ಅವು ಮನೆಯಲ್ಲಿ ಶಾಂತಿಯನ್ನು ನೀಡುತ್ತವೆ. ಇಂದು ನಾವು ಅಂತಹ ಕೆಲವು ಸಸ್ಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಗಿಡಗಳನ್ನು ಮನೆಯ ಮುಖ್ಯ ದ್ವಾರದ ಬಳಿ ನೆಡುವುದರಿಂದ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಅಲ್ಲದೆ, ಮನೆಯಲ್ಲಿ ಸಂತೋಷ  ತುಂಬಿರುತ್ತದೆ ಎನ್ನಲಾಗುತ್ತದೆ ಅಂತಹ ಸಸ್ಯಗಳ ಬಗ್ಗೆ ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಫೆಂಗ್ ಶೂಯಿ ಪ್ರಕಾರ, ಮನೆಯ ಹೊರಗೆ ನಿಂಬೆ ಮರ ಅಥವಾ ಕಿತ್ತಳೆ ಮರವನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಅದೃಷ್ಟದ ಮೋಡಿಯಂತೆ ಕೆಲಸ ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಮನೆಯ ಮುಖ್ಯ ದ್ವಾರದ ಮುಂದೆ ಬಲಭಾಗದಲ್ಲಿ ಈ ಗಿಡಗಳನ್ನೂ ನೆಡುವುದರಿಂದ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. 

2 /6

ಜರೀಗಿಡವು ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೇ ಅದೃಷ್ಟವೆಂದೂ ಪರಿಗಣಿಸಲಾಗಿದೆ. ಈ ಗಿಡವನ್ನು ಮನೆಯ ಹೊರಗೆ ನೆಡುವುದರಿಂದ ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸುತ್ತದೆ. ಈ ಸಸ್ಯವನ್ನು ಮನೆಯಲ್ಲಿ ಇಡುವುದರಿಂದ  ಅಭಿವೃದ್ಧಿಯಾಗುತ್ತದೆ. 

3 /6

ಮಲ್ಲಿಗೆ ಗಿಡವನ್ನು ಜಾಸ್ಮಿನ್ ಸಸ್ಯ ಎಂದೂ ಕರೆಯುತ್ತಾರೆ. ಮನೆಯ ಮುಖ್ಯ ದ್ವಾರದಲ್ಲಿ ಮಲ್ಲಿಗೆ ಗಿಡ ನೆಟ್ಟರೆ ಅದೃಷ್ಟ. ಅದರ ಪರಿಮಳವು ಮನೆಗೆ ಸುಗಂಧವಾಗಿ ಕೆಲಸ ಮಾಡುತ್ತದೆ. ಅದೇ ಸಮಯದಲ್ಲಿ, ಇದು ವ್ಯಕ್ತಿಗೆ ಅದೃಷ್ಟವೂ ಆಗಿದೆ. ಇದರಿಂದ ಮನೆಗೆ ಹಣದ ಆಗಮನ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

4 /6

ತಾಳೆ ಮರವನ್ನು ಏರ್ ಪ್ಯೂರಿಫೈಯರ್ ಎಂದೂ ಕರೆಯುತ್ತಾರೆ. ಅದನ್ನು ನೋಡಿಕೊಳ್ಳುವುದು ತುಂಬಾ ಸುಲಭ. ಇದನ್ನು ಮನೆಯ ಮುಖ್ಯ ಬಾಗಿಲಿಣ ಬಳಿ ನೆಡುವುದರಿಂದ  ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ, ಇದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ. 

5 /6

ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ತುಳಸಿಯನ್ನು ಮನೆಯಲ್ಲಿ ನೆಡುವುದರಿಂದ ಧನಾತ್ಮಕ ಶಕ್ತಿ ನೆಲೆಸುತ್ತದೆ ಮತ್ತು ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ತುಳಸಿ ಸಸ್ಯವು ಹಗಲು ಮತ್ತು ರಾತ್ರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಮನೆಯ ಮುಖ್ಯ ದ್ವಾರದಲ್ಲಿ ನೆಡುವುದರಿಂದ ಪರಿಸರ ಶುದ್ಧವಾಗುತ್ತದೆ. ಇದು ಮನೆಗೆ ಅದೃಷ್ಟವೆಂದು ಪರಿಗಣಿಸಲಾಗಿದೆ. ಅಲ್ಲದೆ ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಹಣದ ಆಗಮನ ಹೆಚ್ಚುತ್ತದೆ ಎಂದೂ ಸಹ ಹೇಳಲಾಗುತ್ತದೆ.

6 /6

ಮನಿ ಪ್ಲಾಂಟ್‌ನ ಸಸ್ಯವು ಸಕಾರಾತ್ಮಕ ಶಕ್ತಿಯನ್ನು ಸಹ ರವಾನಿಸುತ್ತದೆ. ಇದನ್ನು ಒಳಾಂಗಣ ಅಥವಾ ಹೊರಾಂಗಣದಲ್ಲಿ ಎಲ್ಲಿಯಾದರೂ ನೆಡಬಹುದು. ಇದು ಸಕಾರಾತ್ಮಕ ಪರಿಣಾಮವನ್ನು ಮಾತ್ರ ಬಿಡುತ್ತದೆ. ಅದರ ಬಳ್ಳಿಯನ್ನು ಮುಖ್ಯ ಬಾಗಿಲಿನ ಮೇಲೆ ನೆಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎನ್ನಲಾಗುತ್ತದೆ.