ಕೇವಲ ಹಿಂದೂಗಳು ಮಾತ್ರ ಈ 6 ದೇವಾಲಯಗಳಿವೆ ಭೇಟಿ ನೀಡಬಹುದು..! ಇತರರಿಗೆ ಪ್ರವೇಶ ನಿಷೇಧ

Hindu Templs in India : ನಮ್ಮ ದೇಶದಲ್ಲಿ ಹಿಂದೂಗಳ ಹೊರತಾಗಿ ಬೇರೆ ಯಾರಿಗೂ ಕೆಲವು ದೇವಾಲಯ ಪ್ರವೇಶಿಸಲು ಅವಕಾಶವಿಲ್ಲ. ಈ ದೆಗುಲಕ್ಕೆ ಹಿಂದೂಯೇತರ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ. ಅವು ಯಾವುವು..? ಬನ್ನಿ ತಿಳಿಯೋಣ.. 

1 /6

ಪ್ರತಿ ವರ್ಷ ಲಕ್ಷಾಂತರ ಜನರು ಜಗನ್ನಾಥ ಪುರಿಗೆ ಭೇಟಿ ನೀಡುತ್ತಾರೆ. ಈ ದೇವಾಲಯದಲ್ಲಿ ಹಿಂದೂಯೇತರರ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ಧರ್ಮನಿಷ್ಠ ಹಿಂದೂಗಳಿಗೆ ಮಾತ್ರ ಇಲ್ಲಿಗೆ ಭೇಟಿ ನೀಡಲು ಅವಕಾಶವಿದೆ. ಅಷ್ಟೇ ಅಲ್ಲ ಈ ದೇವಸ್ಥಾನಕ್ಕೆ ವಿದೇಶಿ ಪ್ರವಾಸಿಗರ ಪ್ರವೇಶವನ್ನೂ ನಿಷೇಧಿಸಲಾಗಿದೆ.    

2 /6

ಚೆನ್ನೈನ ಮಲಯಪುರದಲ್ಲಿರುವ ಕಪಾಲೇಶ್ವರ ದೇವಸ್ಥಾನದಲ್ಲಿ ಹಿಂದೂಯೇತರರ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ಇದು 17ನೇ ಶತಮಾನದ ಐತಿಹಾಸಿಕ ದೇವಾಲಯವಾಗಿದೆ. ದ್ರಾವಿಡ ನಾಗರಿಕತೆಯ ಈ ಶಿವ ದೇವಾಲಯಕ್ಕೆ ಹಿಂದೂಗಳು ಮಾತ್ರ ಭೇಟಿ ನೀಡಬಹುದು. ಅಲ್ಲದೆ, ವಿದೇಶಿ ಪ್ರವಾಸಿಗರ ಭೇಟಿಯನ್ನೂ ಸಹ ನಿಷೇಧಿಸಲಾಗಿದೆ.   

3 /6

ಗುರುವಾಯೂರ್ ದೇವಾಲಯವು ಕೇರಳದ ತ್ರಿಶೂರ್‌ನಲ್ಲಿದೆ. ಈ ದೇವಾಲಯ 5000 ವರ್ಷಗಳಷ್ಟು ಇತಿಹಾಸ ಹೊಂದಿದೆ. ಶ್ರೀಕೃಷ್ಣ ಮತ್ತು ವಿಷ್ಣು ಈ ದೇವಾಲಯದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಈ ದೇವಾಲಕ್ಕೆ ಹಿಂದೂಯೇತರ ಪ್ರವೇಶ ನಿಷೇಧ, ಅಲ್ಲದೆ, ವಿದೇಶಿ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ಇಲ್ಲ.  

4 /6

ದೇಲವಾಡ ದೇವಾಲಯವು ರಾಜಸ್ಥಾನದ ಮೌಂಟ್ ಅಬುದಲ್ಲಿದೆ. ಈ ದೇವಾಲಯವು ಜೈನ ಧರ್ಮಕ್ಕೆ ಸಮರ್ಪಿತವಾಗಿದೆ. ಜೈನ ಧರ್ಮದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾದ ಈ ದೇವಾಲಯಕ್ಕೆ ಹಿಂದೂಯೇತರ ಪ್ರವೇಶವನ್ನು ನಿಷೇಧಿಸಲಾಗಿದೆ.  

5 /6

ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಹಿಂದೂಯೇತರರ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ವಿದೇಶದಿಂದ ಬಂದವರು ಇಲ್ಲಿಗೆ ಪ್ರವೇಶ ಪಡೆಯುತ್ತಾರೆ. ಆದರೆ ಇಲ್ಲಿರುವ ಪವಿತ್ರ ಬಾವಿಗಳಿಗೆ ಹಿಂದೂಗಳಿಗೆ ಮಾತ್ರ ಪ್ರವೇಶಿಸಲು ಅವಕಾಶವಿದೆ.   

6 /6

ಲಿಂಗರಾಜ ದೇವಾಲಯವು ಒಡಿಶಾದ ಭುವನೇಶ್ವರದಲ್ಲಿದೆ. ಈ ದೇವಾಲಯವನ್ನು ಹಿಂದೂಗಳು ಮಾತ್ರ ಪ್ರವೇಶಿಸಬಹುದು. ಈ ಹಿಂದೆ ವಿದೇಶಿ ಪ್ರವಾಸಿಗರಿಗೆ ಈ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು, ಆದರೆ 2012 ಅದನ್ನು ನಿಷೇಧಿಸಲಾಯಿತು.