Saffron Remedies: ಹೊಸ ವರ್ಷದಲ್ಲಿ ಹಣದ ಮಳೆ ಸುರಿಯಲು ಕೇಸರಿಯಿಂದ ಈ ಸುಲಭ ಪರಿಹಾರವನ್ನು ಮಾಡಿ

Saffron Remedies: ಹೊಸ ವರ್ಷದಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದವು ನಿಮ್ಮ ಮೇಲೆ ಇರಲಿ ಮತ್ತು ನಿಮಗೆ ಯಾವುದೇ ಕೊರತೆಯಾಗಬಾರದು ಎಂದು ನೀವು ಬಯಸಿದರೆ, ಇಂದು ನಾವು ನಿಮಗೆ ಕೇಸರಿಯ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಹೇಳುತ್ತಿದ್ದೇವೆ. ಅದನ್ನು ಮಾಡುವುದರಿಂದ ದೇವಗುರು ಬೃಹಸ್ಪತಿಯು ಸಂತೋಷಪಡುತ್ತಾರೆ. ಎಲ್ಲಾ ಗ್ರಹಗಳು ನಿಮ್ಮ ಮೇಲೆ ಅನುಕೂಲಕರ ಪರಿಣಾಮವನ್ನು ಬೀರುತ್ತವೆ. ಜೊತೆಗೆ ನಿಮ್ಮ ದುರಾದೃಷ್ಟವು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಈ ಪರಿಹಾರವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದಕ್ಕೂ ಕೊರತೆಯಾಗುವುದಿಲ್ಲ.  ಜೊತೆಗೆ ನೀವು ನಿಯಮಿತವಾಗಿ ಕೇಸರಿ ತಿಲಕವನ್ನು ಹಚ್ಚುತ್ತಿದ್ದರೆ ಪರಮೇಶ್ವರ, ವಿಷ್ಣು, ಗಣಪತಿ, ಮಾತೆ ಲಕ್ಷ್ಮೀದೇವಿಯ ವಿಶೇಷ ಆಶೀರ್ವಾದವು ನಿಮ್ಮ ಮೇಲೆ ವರಿಸುತ್ತದೆ ಮತ್ತು ಮನೆಯ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

1 /5

ನಿಮ್ಮ ಜಾತಕದಲ್ಲಿ ಮಂಗಳಿಕ ದೋಷವಿದ್ದರೆ, ಕೆಂಪು ಚಂದನದಲ್ಲಿ ಕೇಸರಿಯನ್ನು ಬೆರೆಸಿ ಆಂಜನೇಯ ದೇವರಿಗೆ ತಿಲಕವನ್ನು  ಹಚ್ಚಿ. ಇದು ನಿಮ್ಮ ಮಂಗಳಿಕ ದೋಷದ ಪರಿಣಾಮವನ್ನು ಕೊನೆಗೊಳಿಸುತ್ತದೆ.

2 /5

ನಿಮ್ಮ ಬಳಿ ಹಣವಿಲ್ಲದಿದ್ದರೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಕವಡೆಗಳಿಗೆ ಕೇಸರಿ ಬಣ್ಣವನ್ನು ಹಚ್ಚಿ. ಬಳಿಕ ಕೆಂಪು ಬಟ್ಟೆಯಲ್ಲಿ ಕಟ್ಟಿ. ಅವುಗಳನ್ನು ನಿಮ್ಮ ಮನೆಯ ಗೋಡೆಯಲ್ಲಿ ಇರಿಸಿ. ಇದು ನಿಮ್ಮ ಹಣದ ಸಮಸ್ಯೆಗಳನ್ನು ಕೊನೆಗೊಳಿಸುತ್ತದೆ.

3 /5

ದಾಂಪತ್ಯ ಜೀವನದಲ್ಲಿ ತೊಂದರೆಯಾದರೆ ಪತಿ-ಪತ್ನಿಯರು ಮೂರು ತಿಂಗಳ ಕಾಲ ಕೇಸರಿ ಮಿಶ್ರಿತ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡಬೇಕು. ಇದರಿಂದ ದಾಂಪತ್ಯ ಜೀವನ ಸುಧಾರಿಸುತ್ತದೆ.

4 /5

ನಿಮ್ಮ ಜಾತಕದಲ್ಲಿ ಚಂದ್ರನು ದುರ್ಬಲನಾಗಿದ್ದರೆ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತಿದ್ದರೆ, ಬೆಳ್ಳಿಯ ಪೆಟ್ಟಿಗೆಯಲ್ಲಿ ಕೇಸರಿಯೊಂದಿಗೆ ಘನ ಬೆಳ್ಳಿಯ ಗುಂಡನ್ನು ಇರಿಸಿ. ಇದು ನಿಮ್ಮ ಜಾತಕದಲ್ಲಿ ಚಂದ್ರನನ್ನು ಬಲಪಡಿಸುತ್ತದೆ.

5 /5

ನಿಮ್ಮ ಜಾತಕದಲ್ಲಿ ಗುರುವು ಅಶುಭ ಸ್ಥಾನದಲ್ಲಿದ್ದರೆ, ಇದರಿಂದ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಪಾಯಸವನ್ನು ಮನೆಯಲ್ಲಿ ತಯಾರಿಸಿ ಬಳಿಕ ಅದಕ್ಕೆ ಕೊಂಚ ಕೇಸರಿಯನ್ನು ಸೇರಿಸಿ ತಿನ್ನಿರಿ. ಇದರಿಂದ ಅಶುಭ ಪರಿಣಾಮ ದೂರವಾಗುತ್ತದೆ. (ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ವಿವಿಧ ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಅದನ್ನು ಖಚಿತಪಡಿಸುವುದಿಲ್ಲ.)