Lal Kitab Remedies: ಲಾಲ್ ಕಿತಾಬ್ ನ ಈ ಉಪಾಯ ಅನುಸರಿಸಿ, ಧನ-ಸಂಪತ್ತಿನಿಂದ ತುಂಬಿ ತುಳುಕುತ್ತೆ ತಿಜೋರಿ

Lal Kitab Remedies for Money: ಜೀವನದಲ್ಲಿ ಹಲವು ಬಾರಿ ವ್ಯಕ್ತಿ ಸಾಕಷ್ಟು ಶ್ರಮಪಟ್ಟರೂ ಕೂಡ ಹಣ, ಸಿರಿ-ಸಂಪತ್ತು ಹಾಗೂ ಸ್ಥಾನಮಾನ ಆತನಿಗೆ ಪ್ರಾಪ್ತಿಯಾಗುವುದಿಲ್ಲ. ಇದಕ್ಕೆ ಕಾರಣವೆಂದರೆ ಮಲಗಿರುವ ಅದೃಷ್ಟ ಅಥವಾ ಜಾತಕದ ಅಶುಭ ಗ್ರಹ-ನಕ್ಷತ್ರಗಳು.

Lal Kitab Remedies for Money: ಜೀವನದಲ್ಲಿ ಹಲವು ಬಾರಿ ವ್ಯಕ್ತಿ ಸಾಕಷ್ಟು ಶ್ರಮಪಟ್ಟರೂ ಕೂಡ ಹಣ, ಸಿರಿ-ಸಂಪತ್ತು ಹಾಗೂ ಸ್ಥಾನಮಾನ ಆತನಿಗೆ ಪ್ರಾಪ್ತಿಯಾಗುವುದಿಲ್ಲ. ಇದಕ್ಕೆ ಕಾರಣವೆಂದರೆ ಮಲಗಿರುವ ಅದೃಷ್ಟ ಅಥವಾ ಜಾತಕದ ಅಶುಭ ಗ್ರಹ-ನಕ್ಷತ್ರಗಳು. ಇದಕ್ಕೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಹಲವು ರೀತಿಯ ಪರಿಹಾರಗಳನ್ನು ನೀಡಲಾಗಿದೆ. ಲಾಲ್ ಕಿತಾಬ್‌ನಲ್ಲಿಯೂ ಕೂಡ ಅಂತಹ ಕೆಲ ಅದ್ಭುತ ಮತ್ತು ದೋಷರಹಿತ ಪರಿಹಾರಗಳ ಕುರಿತು ಉಲ್ಲೇಖಿಸಲಾಗಿದೆ. ಇಂದು ನಾವು ನಿಮಗೆ ಅಂತಹ ಕೆಲ ಉಪಾಯಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಉಪಾಯಗಳನ್ನು ಅನುಸರಿಸುವುದರಿಂದ ನಿಮ್ಮ ಮಲಗಿರುವ ಭಾಗ್ಯ ಎಚ್ಚೆತ್ತುಕೊಳ್ಳುತ್ತದೆ ಮತ್ತು ಧನ ಮತ್ತು ಸಂಪತ್ತಿನ ಹೊಳೆಯೇ ಹರಿದುಬರುತ್ತದೆ.

 

ಇದನ್ನೂ ಓದಿ-Palmistry: ಅಂಗೈಯಲ್ಲಿರುವ ಈ ರೇಖೆಯಿಂದ ಜೀವನವೇ ಬದಲಾಗುತ್ತದೆ, ಧನ-ಸಂಪತ್ತಿನ ಕೊರತೆ ಇರುವುದಿಲ್ಲ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

2. ಶನಿವಾರದಂದು, ಸಾಸಿವೆ ಎಣ್ಣೆಯನ್ನು ಕಂಚಿನ ಪಾತ್ರೆಯಲ್ಲಿ ಅಥವಾ ಬಟ್ಟಲಿನಲ್ಲಿ ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ನೋಡಿ, ನಂತರ ಈ ಎಣ್ಣೆಯನ್ನು ಶನಿ ದೇವಸ್ಥಾನದಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಜೀವನದಲ್ಲಿನ ಎಲ್ಲಾ ತೊಂದರೆಗಳು, ಸಂಕಟಗಳು ಮತ್ತು ರೋಗಗಳು ಕೊನೆಗೊಳ್ಳುತ್ತವೆ.  

2 /4

3. ಲಾಲ್ ಕಿತಾಬ್ ಪ್ರಕಾರ, ಹಸುವಿಗೆ ಪ್ರತಿದಿನ ಹಸಿರು ಮೇವನ್ನು ತಿನ್ನಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸುಖ-ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎನ್ನಲಾಗುತ್ತದೆ. ಇದರೊಂದಿಗೆ, ವ್ಯಕ್ತಿಯ ದುರದೃಷ್ಟವೂ ಅದೃಷ್ಟದಲ್ಲಿ  ಬದಲಾಗುತ್ತದೆ. ಹಸುವಿಗೆ ಪ್ರತಿನಿತ್ಯ ರೊಟ್ಟಿ ಮತ್ತು ಬೆಲ್ಲ ತಿನ್ನಿಸುವುದು ಕೂಡ ತುಂಬಾ ಪ್ರಯೋಜನಕಾರಿಯಾಗಿದೆ.  

3 /4

4. ಪ್ರತಿನಿತ್ಯ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಸಮಸ್ಯೆಗಳಿಂದ ಸಾಕಷ್ಟು ಪರಿಹಾರ ದೊರೆಯುತ್ತದೆ. ಈ ಕೆಲಸವನ್ನು ಧರ್ಮಗ್ರಂಥಗಳಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಪಕ್ಷಿಗಳಿಗೆ ಆಹಾರ ಮತ್ತು ನೀರು ನೀಡುವುದರಿಂದ ಜಾತಕದ ಅನೇಕ ಗ್ರಹದೋಷಗಳೂ ನಿವಾರಣೆಯಾಗುತ್ತವೆ.  

4 /4

5. ಮನೆಯಲ್ಲಿ ಮೀನಿನ ಅಕ್ವೇರಿಯಂ ಇಡುವುದರಿಂದ ಪ್ರಗತಿಯಲ್ಲಿರುವ ಅಡೆತಡೆಗಳನ್ನು ದೂರಾಗುತ್ತವೆ. ಇದರೊಂದಿಗೆ ಹಣದ ನಷ್ಟದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಮನೆಯಲ್ಲಿ ಮೀನಿನ ಅಕ್ವೇರಿಯಂ ಇಡುವುದರಿಂದ ಪುಣ್ಯ ಸಿಗುತ್ತದೆ. ಆದರೆ, ನೀವು ಮನೆಯಲ್ಲಿ ಅಕ್ವೇರಿಯಂ ಇಡುತ್ತಿದ್ದರೆ, ಅದರಲ್ಲಿ 5 ಗೋಲ್ಡನ್ ಫಿಶ್ ಜೊತೆಗೆ 1 ಅಥವಾ 2 ಕಪ್ಪು ಮೀನುಗಳನ್ನು ಯಾವಾಗಲೂ ಇಟ್ಟುಕೊಳ್ಳಿ. ಯಾವುದೇ ಒಂದು ಮೀನು ಸಾವನ್ನಪ್ಪಿದರೆ, ಅದನ್ನು ತಕ್ಷಣವೇ ತೆಗೆದು ಮತ್ತೊಂದು ಮೀನನ್ನು ಅಕ್ವೇರಿಯಂಗೆ ಹಾಕಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)