ಬಡತನದಿಂದ ಬೇಸತ್ತಿದ್ದೀರಾ? ಈ ಐದು ಮಾರ್ಗಗಳಿಂದ ಲಕ್ಷ್ಮೀ ಕಟಾಕ್ಷ ಖಂಡಿತ

ಕಠಿಣ ಪರಿಶ್ರಮದ ನಡುವೆಯೂ ಬಡತನದಿಂದ ಮೇಲೆ ಬರಲು ಸಾಧ್ಯವಾಗುತ್ತಿಲ್ಲವೇ? ಎಷ್ಟು ಹಣ ಸಂಪಾದಿಸಿದರೂ ಹಣದ ಕೊರತೆ ನೀಗುವುದೇ ಇಲ್ಲವೇ ? 

ನವದೆಹಲಿ : ನೀವು ಕೂಡಾ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಆ ಸಮಸ್ಯೆಗೆ ಪರಿಹಾರ ಇಲ್ಲಿದೆ. ನಿಮ್ಮ ಸರ್ವ ಪ್ರಯತ್ನಗಳ ಹೊರತಾಗಿಯೂ ಫಲ ಸಿಗುತ್ತಿಲ್ಲ ಎಂದರೆ, ಯಾಕೆ ಹೀಗಾಗುತ್ತಿದೆ ಎನ್ನುವುದನ್ನು ಮೊದಲು ಕಂಡುಕೊಳ್ಳಬೇಕು.   ಹೌದು ಈ ಮಾರ್ಗಗಳನ್ನು ಅನುಸರಿಸುವ ಮೂಲಕ ಆರ್ಥಿಕ ಸಮಸ್ಯೆಗಳನ್ನು ಶಾಶ್ವತವಾಗಿ ಹೋಗಲಾಡಿಸಬಹುದು. ನಂತರ ನಿಮ್ಮ ಜೀವನಕ್ಕೊಂದು ಹೊಸ ತಿರುವು ಸಿಗಬಹುದು. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ಶುಕ್ರವಾರದ ದಿನವನ್ನು ಮಹಾ ಲಕ್ಷ್ಮೀಯ ದಿನ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ಎಂದರೆ ಸಂಪತ್ತಿನ ಅಧಿ ದೇವತೆ.  ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ದಿನದಂದು ಲಕ್ಷ್ಮಿ ದೇವಿಯ ಹೆಸರಿನಲ್ಲಿ ಉಪವಾಸವನ್ನು ಶೃದ್ಧಾ ಭಕ್ತಿಯಿಂದ ಮಾಡಿದರೆ, ಲಕ್ಷ್ಮೀ ಪ್ರಸನ್ನಳಾಗಿ, ಭಕ್ತರ ಇಚ್ಛೆಯನ್ನು ಈಡೇರಿಸುತ್ತಾಳಂತೆ.  ಶುಕ್ರವಾರ ಮಹಾಲಕ್ಷ್ಮಿಯನ್ನು ಪೂಜಿಸಲು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುತ್ತದೆ.   

2 /4

ಶುಕ್ರವಾರ ಬಡವರಿಗೆ ಬಿಳಿ ಬಟ್ಟೆ ಅಥವಾ ಅಕ್ಕಿಯಂತಹ ಬಿಳಿ ವಸ್ತುಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ  ತಾಯಿಯ ಅನುಗ್ರಹವು ಸದಾ ನಿಮ್ಮ ಮೇಲಿರುತ್ತದೆ. ಇನ್ನು ಶುಕ್ರವಾರ ಹಸುವಿಗೆ ಆಹಾರ ನೀಡಿದರೂ ಲಕ್ಷ್ಮೀ ಸಂತಸಗೊಳ್ಳುತ್ತಾಳಂತೆ. 

3 /4

ಲಕ್ಷ್ಮೀ ದೇವಿಗೆ ಶುಕ್ರವಾರ ಅಕ್ಕಿ ಅರ್ಪಿಸಬೇಕು. ಆದರೆ ನೆನಪಿರಲಿ, ನೀವು ಅರ್ಪಿಸುವ ಅಕ್ಕಿ ಕಾಳು ಮುರಿದಿರಬಾರದು. ಅಲ್ಲದೆ ಈ ದಿನ ಅಗತ್ಯ ಇದ್ದವರಿಗೆ ಸಹಾಯ ಮಾಡಬೇಕು. ಹೀಗೆ ಮಾಡುವುದರಿಂದ ಅಲ್ಪ ಅವಧಿಯಲ್ಲಿಯೇ ಹಣ ಬರಲು ಆರಂಭವಾಗುತ್ತದೆ. 

4 /4

 ಮನೆಯೊಳಗೆ ಇರಿಸಲಾಗಿರುವ ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು  ಎಂದಿಗೂ ಕೊಳಕು ಸ್ಥಳದಲ್ಲಿ ಇಡಬಾರದು. ಯಾರ ಪಾದವೂ ಅದರ ಮೇಲೆ ಬೀಳದಂತಹ ಸ್ಥಳದಲ್ಲಿ ಪೊರಕೆಯನ್ನು ಇರಿಸಿ. ಪೊರಕೆ ಹಳೆಯದಾದಾಗ, ಅದನ್ನು ಸುಡುವ ಬದಲು, ಮಣ್ಣಿನಲ್ಲಿ ಹೂಳಬೇಕು.