ಬಿಗ್‌ ಬಾಸ್‌ ಮೊದಲ ವಾರವೇ ಎಲಿಮಿನೇಟ್‌ ಆಗ್ತಾರಾ ಚೈತ್ರಾ ಕುಂದಾಪುರ ?

ಬಿಗ್‌ ಬಾಸ್‌ ಮನೆಯಲ್ಲಿ ಆಟ ಶುರುವಾಗಿದೆ. ಸ್ವರ್ಗ ಮತ್ತು ನರಕ ಎರಡರಲ್ಲೂ ಸ್ಪರ್ಧಿಗಳನ್ನು ಬಿಟ್ಟಾಗಿದೆ. ಮೊದಲ ದಿನವೇ ಮನೆ ರಣರಂಗವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /9

ಮೊದಲ ದಿನದ ಟಾಸ್ಕ್‌ನಲ್ಲಿ ಹಲವರ ನಡುವೆ ವಾಗ್ವಾದಗಳು ನಡೆದಿವೆ. ಕೆಲವರು ಸೈಲಂಟ್‌ ಆಗಿಯೇ ಆಟ ಶುರು ಮಾಡಿದರೆ, ಇನ್ನೂ ಕೆಲವರು ಮೊದಲ ದಿನದಿಂದಲೇ ವೈಲೆಂಟ್‌ ಆಗಿದ್ದಾರೆ. 

2 /9

ಸ್ವರ್ಗದ ಮನೆ ಕೆಲಸವನ್ನು ನರಕದ ಇಬ್ಬರು ಮಾಡಬೇಕು ಎಂಬ ಟಾಸ್ಕ್‌ನ್ನು ಬಿಗ್‌ ಬಾಸ್‌ ನೀಡಿದ್ದರು. ಈ ವೇಳೆ ಸ್ವರ್ಗ ನಿವಾಸಿಗಳು ಚೈತ್ರಾ ಕುಂದಾಪುರ ಮತ್ತು ಗೋಲ್ಡ್‌ ಸುರೇಶ್‌ ಅವರನ್ನು ಆಯ್ಕೆ ಮಾಡಿದ್ದಾರೆ.

3 /9

ನರಕ ನಿವಾಸಿಗಳು ಕೊಟ್ಟ ಸಮಯದಲ್ಲಿ ಮನೆ ಕೆಲಸ ಮುಗಿಸದಿದ್ದರೆ ಸ್ವರ್ಗ ನಿವಾಸಿಗಳು ಸೋಲುಂಡಂತೆ. ನರಕದಿಂದ ಬಂದವರ ಬಳಿ ಸಮಯ ವ್ಯರ್ಥ ಆಗದಂತೆ ನೋಡಿಕೊಂಡು ಕೆಲಸ ಮಾಡಿಸುವುದು ಸ್ವರ್ಗದಲ್ಲಿದ್ದವರ ಕೆಲಸವಾಗಿತ್ತು.

4 /9

ಆದರೆ ಸೂಪರ್‌ ಸ್ಟಾಟರ್ಜಿ ಬಳಸಿದ ಚೈತ್ರಾ ಕುಂದಾಪುರ ವಾಗ್ವಾದದ ಮೂಲಕ ಸಮಯ ವ್ಯರ್ಥ ಮಾಡಿದರು. ಯಮುನಾ ಮತ್ತು ಚೈತ್ರಾ ಕುಂದಾಪುರ ನಡುವೆ ಮಾತನಾಡುವ ವಿಚಾರಕ್ಕೆ ದೊಡ್ಡ ಜಗಳವೇ ನಡೆಯಿತು.

5 /9

ಉಗ್ರಂ ಮಂಜು ಕಟ್‌ ಮಾಡಿ ಕೊಡಿ ಎಂದು ಕೊಟ್ಟ ಸೀಬೆ ಹಣ್ಣನ್ನು ಚೈತ್ರಾ ಕುಂದಾಪುರ ಕಿತ್ತುಕೊಂಡು ಕಚ್ಚಿ ತಿಂದು ನರಕದ ಕಡೆ ಎಸೆದಿದ್ದಾರೆ. ಇದರ ವಿಚಾರಕ್ಕೆ ಮತ್ತೊಮ್ಮೆ ಮನೆಯಲ್ಲಿ ಜಗಳ ನಡೆಯಿತು. ಇದು ಬಿಗ್‌ ಬಾಸ್‌ ರೂಲ್ಸ್‌ ಬ್ರೇಕ್ ಮಾಡಿದಂತೆ ಎಂದು ಹಲವರು ಹೇಳಿದರು.

6 /9

ಬಳಿಕ ಬಾತ್‌ರೂಮ್‌ ಏರಿಯಾ ಕ್ಲೀನ್‌ ಮಾಡಲು ಹೋದ ಚೈತ್ರಾ ಅಲ್ಲಿಯೂ ಸರಿಯಾಗಿ ಕೆಲಸ ಮಾಡದೆ ಟಾಸ್ಕ್‌ ಗೆಲ್ಲುವ ತಂತ್ರ ಹೆಣೆದಿದ್ದರು. ಇದರಿಂದ ಜಗದೀಶ್‌ ಅವರು ಹೋಗಿ ಮತ್ತೊಮ್ಮೆ ಟಾಯ್ಲೆಟ್‌ ಕ್ಲೀನ್‌ ಮಾಡಿದರು. 

7 /9

ಇದು ಬಿಗ್‌ ಬಾಸ್‌‌ ರೂಲ್ಸ್ ಬ್ರೇಕ್‌ ಮಾಡಿದಂತಾಯಿತು. ಸ್ವರ್ಗದವರಿಗೆ ಕೊಟ್ಟಿದ್ದ ಲಕ್ಷುರಿ ವಸ್ತುಗಳನ್ನು ಬಿಗ್‌ ಬಾಸ್‌ ಹಿಂಪಡೆದರು. ಈ ಎಲ್ಲ ಕಾರಣಗಳಿಂದ ಚೈತ್ರಾ ಕುಂದಾಪುರ ಉಳಿದ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾದರು.

8 /9

ಸ್ವರ್ಗ ನಿವಾಸಿಗಳು ನರಕದಲ್ಲಿದ್ದವರಲ್ಲಿ ಒಬ್ಬರನ್ನು ನೇರವಾಗಿ ನಾಮಿನೇಟ್‌ ಮಾಡುವ ಅವಕಾಶ ಸಿಕ್ಕಿತು. ಈ ವೇಳೆ ಅನೇಕರು ಚೈತ್ರಾ ಕುಂದಾಪುರ ಅವರನ್ನೇ ಟಾರ್ಗೆಟ್‌ ಮಾಡಿದರು. ಇದರಿಂದಾಗಿ ಹೆಚ್ಚು ಮತಗಳನ್ನು ಪಡೆದು ಚೈತ್ರಾ ಕುಂದಾಪುರ ಈ ವಾರ ನೇರವಾಗಿ ನಾಮಿನೇಟ್‌ ಆಗಿದ್ದಾರೆ.

9 /9

ಮೊದಲ ದಿನದಂದೇ ಇಷ್ಟೆಲ್ಲ ಗದ್ದಲ ಗೊಂದಲಕ್ಕೆ ಕಾರಣರಾದ ಚೈತ್ರಾ ಕುಂದಾಪುರ ಅವರ ವೈಲೆಂಟ್‌ ಕಾರ್ಡ್‌ ಜನರಿಗೆ ಇಷ್ಟವಾದರೆ ಮನೆಯಲ್ಲಿ ಉಳಿಯೋದು ಪಕ್ಕಾ. ವಾರದ ಕೊನೆಗೆ ಜನರ ಅಭಿಪ್ರಾಯ ಏನೆಂಬುದು ತಿಳಿಯಲಿದೆ.