ಎಲ್ಲಾ ಸಮಸ್ಯೆಗಳಿಗೆ ಕೊನೆ ಹಾಡಲಿದ್ದಾನೆ ದೇವಗುರು ಬೃಹಸ್ಪತಿ, ದೂರವಾಗಲಿದೆ ಈ ಐದು ರಾಶಿಯವರ ಸಂಕಷ್ಟ

ಫೆಬ್ರವರಿ 23 ರಂದು, ಗುರು ಗ್ರಹ ಅಸ್ತವಾಗಲಿದ್ದು, ಮತ್ತೆ ಮಾರ್ಚ್ 27 ರಂದು ಮತ್ತೆ ಉದಯಿಸಲಿದೆ. ಇದು ದ್ವಾದಶ ರಾಶಿಗಳ ಮೇಲೆ ಕೂಡಾ ಪರಿಣಾಮ ಬೀರಲಿದೆ. 

ನವದೆಹಲಿ : ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರವಾದ ಗ್ರಹವೆಂದು ಪರಿಗಣಿಸಲಾದ ದೇವಗುರು ಬೃಹಸ್ಪತಿ ವರ್ಷದ ಆರಂಭದಿಂದಲೂ ಕುಂಭ ರಾಶಿಯಲ್ಲಿದೆ.  ಏಪ್ರಿಲ್ 12 ರಂದು ತನ್ನದೇ ರಾಶಿಯಾದ ಮೀನ ರಾಶಿಯನ್ನು ಪ್ರವೇಶಿಸಲಿದೆ.  ಫೆಬ್ರವರಿ 23 ರಂದು, ಗುರು ಗ್ರಹ ಅಸ್ತವಾಗಲಿದ್ದು, ಮತ್ತೆ ಮಾರ್ಚ್ 27 ರಂದು ಮತ್ತೆ ಉದಯಿಸಲಿದೆ. ಇದು ದ್ವಾದಶ ರಾಶಿಗಳ ಮೇಲೆ ಕೂಡಾ ಪರಿಣಾಮ ಬೀರಲಿದೆ. ಕೆಲವು ರಾಶಿಗಳ ಮೇಲೆ ಶುಭ ಫಲ ನೀಡಿದರೆ, ಕೆಲವು ರಾಶಿಗಳ ಮೇಲೆ ಅಶುಭ ಫಲ ನೀಡಲಿದೆ. ಈ ಅವಧಿಯಲ್ಲಿ 5 ರಾಶಿಯವರು ಭಾರೀ ಅದೃಷ್ಟವಂತರು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೇಷ ರಾಶಿಯವರಿಗೆ ಈ ಸಮಯ ತುಂಬಾ ಒಳ್ಳೆಯದು. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಗುರುವಿನ ಕೃಪೆಯಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಜೀವನವನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯುವ ಹೊಸ ಅವಕಾಶಗಳನ್ನು ಕಾಣಬಹುದು.  

2 /5

ಈ ಸಮಯವು ಮಿಥುನ ರಾಶಿಯವರಿಗೆ ಯಶಸ್ಸನ್ನು ನೀಡುತ್ತದೆ. ಹಣಕಾಸಿನ ಸ್ಥಿತಿ ಕೂಡಾ ಉತಮವಾಗಿರಲಿದೆ. ಹೊಸ ಮನೆ ಅಥವಾ ಕಾರು ಖರೀದಿಸುವ ಕನಸು ನನಸಾಗಬಹುದು.  ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು. 

3 /5

ಸಿಂಹ ರಾಶಿಯವರಿಗೆ ಈ ಸಮಯವು ಲಾಭದಾಯಕವಾಗಿ ಪರಿಣಮಿಸಲಿದೆ. ಈ ಅವಧಿಯಲ್ಲಿ ಅವರು ಹಣ, ಪ್ರತಿಷ್ಠೆ ಎಲ್ಲವನ್ನೂ ಪಡೆಯುತ್ತಾರೆ. ಗೌರವ ಸಿಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ

4 /5

ಗುರುವಿನ ಕೃಪೆಯಿಂದ ಧನ ಪ್ರಾಪ್ತಿಯಾಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ.  

5 /5

ಈ ಬಾರಿ ಹಳೆಯ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. ಆ ಸಮಸ್ಯೆಗಳು ಆರ್ಥಿಕವಾಗಿರಲಿ ಅಥವಾ ವೃತ್ತಿ-ವ್ಯಾಪಾರಕ್ಕೆ ಸಂಬಂಧಿಸಿದ್ದಿರಲಿ ಎಲ್ಲವು ಪರಿಹಾರವಾಗಿ ಯಶಸ್ಸು ಸಿಗಲಿದೆ. ಕುಟುಂಬದಲ್ಲಿಯೂ ಸಂತೋಷ ಇರುತ್ತದೆ.