ನವರಾತ್ರಿ ದಿನ ಈ ದೇಗುದಲ್ಲಿ ಭಕ್ತಿಯಿಂದ ಏನೇ ಬೇಡಿದರೂ ಈಡೇರುತ್ತೆ: ಅಗ್ನಿಸಾಕ್ಷಿಯ ಈ ನಟಿ ಹುಟ್ಟಿದ್ದು ಇಲ್ಲಿನ ಹರಕೆಯಿಂದಲೇ!

Vaishnodevi Temple: ಚೈತ್ರ ನವರಾತ್ರಿ ನಿಮಿತ್ತ ಕತ್ರಾ ಸೇರಿದಂತೆ ವೈಷ್ಣೋದೇವಿ ಭವನದಲ್ಲಿ ವೈಭವದ ಅಲಂಕಾರ ಮಾಡಲಾಗಿದೆ. ಕಟ್ಟಡದ ಅಲಂಕಾರ ಹಾಗೂ ಧಾರ್ಮಿಕ ವಾತಾವರಣಕ್ಕೆ ಭಕ್ತರು ಮನಸೋತಿರೋದಂತು ನಿಜ. ಪ್ರತಿ ಬಾರಿಯಂತೆ ಈ ಬಾರಿಯೂ ಮಾತೆಯ ಆಸ್ಥಾನದ ಅಲಂಕಾರ ವಿಭಿನ್ನ, ಭವ್ಯ ಹಾಗೂ ವಿಶಿಷ್ಟವಾಗಿದೆ. ದೇವಸ್ಥಾನ ಮತ್ತು ಕಟ್ಟಡವನ್ನು ಸುಮಾರು 40 ಟ್ರಕ್ ಲೋಡ್ ಹೂವುಗಳಿಂದ ಅಲಂಕರಿಸಲಾಗಿದೆ. ಅಂಕಿ ಅಂಶದ ಪ್ರಕಾರ ಇದುವರೆಗೆ ಎರಡೂವರೆ ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.

1 /6

ಚೈತ್ರ ನವರಾತ್ರಿಯ ಸಂದರ್ಭದಲ್ಲಿ, ಕತ್ರಾ ಸೇರಿದಂತೆ ವೈಷ್ಣೋದೇವಿ ಮಾತಾ ದೇವಾಲಯದಲ್ಲಿ ಅದ್ಭುತ ಮತ್ತು ದೈವಿಕ ಅಲಂಕಾರಗಳನ್ನು ಮಾಡಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಮಾತಾ ರಾಣಿಯ ಆಸ್ಥಾನದ ಅಲಂಕಾರ ವಿಭಿನ್ನ, ಭವ್ಯ ಹಾಗೂ ವಿಶಿಷ್ಟವಾಗಿದೆ. ಇನ್ನು ಇಲ್ಲಿನ ಕಟ್ಟಡವನ್ನು ಎರಡು ಟ್ರಕ್ ಹಣ್ಣುಗಳು ಮತ್ತು 40 ಟ್ರಕ್ ಹೂವುಗಳಿಂದ ಅಲಂಕರಿಸಲಾಗಿದೆ.

2 /6

ಒಂದು ಅಂಕಿ ಅಂಶದ ಪ್ರಕಾರ, ನವರಾತ್ರಿಯಲ್ಲಿಯೂ ಸಹ ಎರಡೂವರೆ ಲಕ್ಷಕ್ಕೂ ಹೆಚ್ಚು ಭಕ್ತರು ಮಾತೆ ವೈಷ್ಣೋ ದೇವಿಯ ದರ್ಶನ ಪಡೆದಿದ್ದಾರೆ.

3 /6

ನಿರ್ಮಿತ ಮತ್ತು ನೈಸರ್ಗಿಕ ಗುಹೆಯ ಹೊರಗೆ ಬಹುಕಾಂತೀಯ ಅಲಂಕಾರಗಳು ಕಂಡುಬರುತ್ತಿವೆ. ವಿಶೇಷವಾದ ಚೆಂಡುಹೂವು, ಗುಲಾಬಿ, ಮಲ್ಲಿಗೆ, ಸುಗಂಧರಾಜ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಎಲ್ಲೆಡೆ ಘಮಿಸುತ್ತಿದೆ

4 /6

ಕಳೆದ ವರ್ಷ ಚೈತ್ರ ನವರಾತ್ರಿಗೆ ಎರಡೂವರೆ ಲಕ್ಷ ಭಕ್ತರು ಭೇಟಿ ನೀಡಿದ್ದರು. ಈ ಬಾರಿ ಈ ಅಂಕಿ ಅಂಶ ಹೊಸ ದಾಖಲೆ ಸೃಷ್ಟಿಸಲಿದೆ.

5 /6

ಈ ಬಾರಿ 2.75 ಲಕ್ಷಕ್ಕೂ ಅಧಿಕ ಭಕ್ತರು ಅಮ್ಮನವರ ದರ್ಶನ ಪಡೆಯುವ ನಿರೀಕ್ಷೆ ಇದೆ. ನವರಾತ್ರಿಯಂದು ಭವನದಲ್ಲಿ ನಡೆಯಲಿರುವ ಷಟ್ಚಂಡಿ ಮಹಾಯಜ್ಞ ಭಕ್ತರನ್ನು ಮತ್ತಷ್ಟು ಆಕರ್ಷಿಸುತ್ತದೆ.

6 /6

ಇನ್ನು ಅಗ್ನಿಸಾಕ್ಷಿಯ ನಟಿ ವೈಷ್ಣವಿ ಗೌಡ ಹುಟ್ಟುವುದಕ್ಕೂ ಮುನ್ನ ಈ ದೇಗುಲಕ್ಕೆ ಅವರ ಪೋಷಕರು ಹರಕೆ ಹೊತ್ತಿದ್ದರಂತೆ. ಆ ಬಳಿಕ ಅವರಿಗೆ ಆ ದೇವಿಯ ಹೆಸರಿಡಲಾಯಿತು ಎಂದು ಸತಃ ಅವರೇ ಹೇಳಿದ್ದರು. ಬಿಗ್ ಬಾಸ್’ನಲ್ಲಿ ಒಂದೊಮ್ಮೆ ಶಂಕರ್ ಅಶ್ವತ್ಥ್ ಅವರು ಈ ಬಗ್ಗೆ ಮಾತನಾಡಿದಾಗ ವೈಷ್ಣವಿ ಇದು ನಿಜ ಎಂದು ಹೇಳಿದ್ದರು.