Best Monsoon Treks: ಭಾರತದ 7 ಪ್ರಮುಖ ಚಾರಣ ಸ್ಥಳಗಳು ಇಲ್ಲಿವೆ ನೋಡಿ…

ಮುಂಗಾರು ಋತುವಿನಲ್ಲಿ ಭೇಟಿ ನೀಡಲೇಬೇಕಾದ ಭಾರತದ 7 ಪ್ರಮುಖ ಹಾಗೂ ಪ್ರಸಿದ್ಧ ಚಾರಣ ಸ್ಥಳಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ...

ನೀವು ಚಾರಣ ಪ್ರಿಯರೇ..? ನಿಮಗೆ ಕಾಡು-ಮೇಡು ಅಲೆಯುವ ಉತ್ಸಾಹ ಇದೆಯೇ..? ಹಾಗಾದರೆ ಮುಂಗಾರು ಋತುವಿನಲ್ಲಿ ಭೇಟಿ ನೀಡಲೇಬೇಕಾದ ಭಾರತದ 7 ಪ್ರಮುಖ ಹಾಗೂ ಪ್ರಸಿದ್ಧ ಚಾರಣ ಸ್ಥಳಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ. ನಿಮಗೆ ಚಾರಣದ ಹವ್ಯಾಸವಿದ್ದರೆ ಈ ಸ್ಥಳಗಳಿಗೆ ಭೇಟಿ ನೀಡಿ ಬೆಟ್ಟ-ಗುಡ್ಡ ಹತ್ತಿ, ನದಿಪಾತ್ರಗಳಲ್ಲಿ ನಡೆದು ಸಖತ್ ಆಗಿ ಎಂಜಾಯ್ ಮಾಡಬಹುದು. ಈ ಪ್ರದೇಶಗಳು ಚಾರಣಕ್ಕೆ ಹೇಳಿ ಮಾಡಿಸಿದಂತಿವೆ. ಇಲ್ಲಿ ನೀವು ಚಾರಣ ಕೈಗೊಂಡರೆ ಬಹಳ ಮೋಜು-ಮಸ್ತಿ ಮಾಡಿ ನಿಸರ್ಗದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

ಸಿಕ್ಕಿಂನ ಜೋಂಗ್ರಿ ಚಾರಣದ ಬಗ್ಗೆ ಎಂದಾದರೂ ಕೇಳಿದ್ದೀರಾ? ಜೋಂಗ್ರಿ ಚಾರಣವು ನಿಮ್ಮನ್ನು ಸುಂದರ ಸಿಕ್ಕಿಂ ಭೂದೃಶ್ಯದ ನಿಸರ್ಗ ಸೌಂದರ್ಯ ಸವಿಯಲು ಕರೆದೊಯ್ಯುತ್ತದೆ. ಸುತ್ತಲೂ ಭವ್ಯವಾದ ಶಿಖರಗಳಿರುವ ಈ ಪ್ರದೇಶಲ್ಲಿ ಚಾರಣ ಕೈಗೊಂಡರೆ ನಿಮಗೆ ಉತ್ತಮ ಅನುಭವ ಸಿಗಲಿದೆ.  

2 /7

ಪುಣೆಯ ಸಿಂಹಗಡವು ಮಳೆಗಾಲದಲ್ಲಿ ಚಾರಣಕ್ಕೆ ಹೇಳಿಮಾಡಿಸಿದಂತಿರುವ ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಿದೆ. ಮಳೆಗಾಲದಲ್ಲಿ ಈ ಸ್ಥಳವು ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಈ ಸುಂದರ ಪ್ರದೇಶವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಕ್ಯಾಮೆರಾ ಜೊತೆಗೆ ಚಾರಣ ಕೈಗೊಂಡು ಅಲ್ಲಿನ ನಿಸರ್ಗ ಸೌಂದರ್ಯವನ್ನು ಸೆರೆಹಿಡಿಯಬಹುದು.

3 /7

ಉತ್ತರಾಖಂಡದ ಬೆರಗುಗೊಳಿಸುವ ಹೂವುಗಳ ಕಣಿವೆಯು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಇದು ಮಳೆಗಾಲದಲ್ಲಿ ಆನಂದಿಸಬಹುದಾದ ಸುಂದರ ಚಾರಣ ಯಾತ್ರೆಗಳಲ್ಲಿ ಒಂದಾಗಿದೆ. ಲೆಕ್ಕವಿಲ್ಲದಷ್ಟು ಹೂಗಳು ಪೂರ್ಣವಾಗಿ ಅರಳುವ ದೃಶ್ಯವನ್ನು ನೀವು ಇಲ್ಲಿ ಕಣ್ತುಂಬಿಕೊಳ್ಳಬಹುದು.

4 /7

ಹಿಮಾಚಲ ಪ್ರದೇಶವು ಅನೇಕ ಜನಪ್ರಿಯ ಟ್ರೆಕ್ಕಿಂಗ್ ತಾಣಗಳನ್ನು ಹೊಂದಿದೆ. ಈ ಪೈಕಿ ಹಂಪ್ಟಾ ಪಾಸ್ ಚಾರಣ ಪ್ರದೇಶ ಪ್ರಸಿದ್ಧವಾಗಿದೆ. ಈ ಪ್ರದೇಶದಲ್ಲಿ ಚಾರಣ ಕೈಗೊಂಡ ಪ್ರತಿಯೊಬ್ಬರಿಗೂ ರೋಮಾಂಚಕಾರಿ ಅನುಭವ ಸಿಗಲಿದೆ.    

5 /7

ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮನಾಲಿಯೂ ಒಂದು. ಮನಾಲಿಯ ಪರ್ವತ ಪ್ರದೇಶಗಳ ನಿಸರ್ಗ ಸೌಂದರ್ಯ ಸವಿಯಲು ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಹಚ್ಚ ಹಸಿರಿನ ಹುಲ್ಲುಗಾವಲು ಮತ್ತು ಸುಂದರ ಪ್ರಕೃತಿಯ ನೋಟಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಚಾರಣ ಕೈಗೊಳ್ಳುವುದು ಉತ್ತಮ. ಮನಾಲಿಯಿಂದ ಉತ್ತರಕ್ಕೆ 20 ಕಿ.ಮೀ ದೂರದಲ್ಲಿರುವ ಭೃಗು ಸರೋವರದ ಚಾರಣಕ್ಕೆ ನೀವು ಗುಲಾಬಾದಿಂದ ತೆರಳಬಹುದು.   

6 /7

ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ ಪ್ರಮುಖವಾಗಿದೆ. ಇದನ್ನು ಭೂಮಿ ಮೇಲಿನ ಸ್ವರ್ಗವೆಂದು ಕರೆಯಲಾಗುತ್ತದೆ. ಸಮುದ್ರ ಮಟ್ಟದಿಂದ ಸುಮಾರು 6,330 ಅಡಿ ಎತ್ತರವಿರುವ ಈ ಪ್ರದೇಶಕ್ಕೆ ದೇಶ-ವಿದೇಶಗಳ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ಹಿಮಾಲಯ ಮತ್ತು ನೀಲಗಿರಿ ಪರ್ವತ ಶ್ರೇಣಿಗಳ ನಡುವಿನ ಅತಿ ಎತ್ತರದ ಪ್ರದೇಶವಾಗಿದೆ. ಚಿಕ್ಕಮಗಳೂರಿನಿಂದ ಸುಮಾರು 20 ಕಿ.ಮಿ. ದೂರದಲ್ಲಿರುವ ಮುಳ್ಳಯ್ಯನಗಿರಿ ಚಾರಣಕ್ಕೆ ಹೇಳಿಮಾಡಿಸಿದ ತಾಣವಾಗಿದೆ.  

7 /7

ಇದು ಭೂಮಿಯ ಮೇಲಿನ ಸ್ವರ್ಗಕ್ಕಿಂತ ಕಡಿಮೆಯಿಲ್ಲ ಮತ್ತು ಪ್ರತಿ ಚಾರಣಿಗರಿಗೂ ಸಂತೋಷವನ್ನು ನೀಡುತ್ತದೆ. ಇದು ಉತ್ತರಾಖಂಡದ ಧೌಲಾದಿಂದ ಪ್ರಾರಂಭವಾಗುವ ಮತ್ತು ಹಿಮಾಚಲ ಪ್ರದೇಶದ ಸಾಂಗ್ಲಾದಲ್ಲಿ ಕೊನೆಗೊಳ್ಳುವ 4,650 ಮೀಟರ್ ಎತ್ತರದ ಎತ್ತರದ ಚಾರಣವಾಗಿದೆ.