Negative Energy Indications: ಮನೆಯಲ್ಲಿ ನೀವು ಮಾಡುವ ಈ ಕೆಲಸ ನಕಾರಾತ್ಮಕ ಶಕ್ತಿಗೆ ಬುಲಾವ್ ಕಳುಹಿಸಿದಂತೆ

Grah Dosh Nivaran: ಮನೆಯಲ್ಲಿನ ನಕಾರಾತ್ಮಕ ಶಕ್ತಿಯ ಕಾರಣ ಹಲವು ಬಾರಿ ವ್ಯಕ್ತಿಯು ತನ್ನ  ಜೀವನದಲ್ಲಿನ ಸುಖ, ಸಂತೋಷ ಮತ್ತು ಶಾಂತಿಯನ್ನು ಕಳೆದುಕೊಳ್ಳುತ್ತಾನೆ. ಅಷ್ಟೇ ಅಲ್ಲ, ಮನೆಯಲ್ಲಿನ ವೈಮನಸ್ಸು ಉಂಟಾಗಿ ನೆಮ್ಮದಿ ಹಾಳಾಗುತ್ತದೆ. 

Grah Dosh Nivaran: ಮನೆಯಲ್ಲಿನ ನಕಾರಾತ್ಮಕ ಶಕ್ತಿಯ ಕಾರಣ ಹಲವು ಬಾರಿ ವ್ಯಕ್ತಿಯು ತನ್ನ  ಜೀವನದಲ್ಲಿನ ಸುಖ, ಸಂತೋಷ ಮತ್ತು ಶಾಂತಿಯನ್ನು ಕಳೆದುಕೊಳ್ಳುತ್ತಾನೆ. ಅಷ್ಟೇ ಅಲ್ಲ, ಮನೆಯಲ್ಲಿನ ವೈಮನಸ್ಸು ಉಂಟಾಗಿ ನೆಮ್ಮದಿ ಹಾಳಾಗುತ್ತದೆ. ಮನೆಯಲ್ಲಿ ಇರುವ  ಗೃಹ ದೋಷದಿಂದ ಇದು ಸಂಭವಿಸುತ್ತದೆ. ಇದಲ್ಲದೆ, ಹಲವು ಬಾರಿ ವ್ಯಕ್ತಿಯ ಕೆಲಸದಲ್ಲಿ ಯಾವಾಗಲೂ ಅಡಚಣೆ ಎದುರಾಗುತ್ತಲೇ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿನ ಋಣಾತ್ಮಕತೆಯೂ ಕೂಡ ಇದಕ್ಕೆ ಕಾರಣವಾಗಿರಬಹುದು ಆಗಾಗ್ಗೆ ಮನೆಯಲ್ಲಿ ತಿಳಿದು ಅಥವಾ ತಿಳಿಯದೆ ಮಾಡಲಾಗುವ ಕೆಲ ಕೆಲಸಗಳು ನಕಾರಾತ್ಮಕತೆಯ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಮನೆಯಲ್ಲಿ ಹಣದ ಕೊರತೆ ಮತ್ತು ಅಸಂತೋಷ ಹೆಚ್ಚಾಗುತ್ತದೆ. ಹೀಗಾಗಿ ಮನೆಯಲ್ಲಿ ಅಪ್ಪಿ-ತಪ್ಪಿಯೂ ಕೂಡ ಈ ಕೆಳಗೆ ಉಲ್ಲೇಖಿಸಲಾಗಿರುವ ಕೆಲಸಗಳನ್ನು ಮಾಡಬೇಡಿ.

 

ಇದನ್ನೂ ಓದಿ-Garuda Purana: ಗರುಡ ಪುರಾಣದ ಈ ಸಂಗತಿಗಳು ನೀವು ಮುಂದಿನ ಜನ್ಮದಲ್ಲಿ ಏನಾಗುವಿರಿ ಎಂಬುದನ್ನು ಹೇಳುತ್ತವೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಪದೇ ಪದೇ ಮನೆಯ ಯಾವುದೇ ಸದಸ್ಯ ಅನಾರೋಗ್ಯಕ್ಕೆ ಒಳಗಾಗುವುದು, ಯಾವುದೇ ಮಾತುಗಳಿಲ್ಲದೆ ಮತಭೇದ ಉಂಟಾಗುತ್ತಿದ್ದರೆ, ತಕ್ಷಣ ಎಚ್ಚೆತ್ತುಕೊಳ್ಳಿ. ಏಕೆಂದರೆ, ಇದು ನಕಾರಾತ್ಮಕತೆಯ ಸೂಚಕವಾಗಿದೆ.  

2 /6

ನಿಮಗೆ ಮನೆಯಲ್ಲಿ ಯಾವಾಗಲೂ ದಣಿದ ಅನುಭವ, ಪ್ರೇರಣಾಹೀನ ಮತ್ತು ಗೊಂದಲಕ್ಕೊಳಗಾದ ಅನುಭವ ಉಂಟಾಗುತ್ತಿದ್ದರೆ, ಅದು ಮನೆಯಲ್ಲಿ ಹೆಚ್ಚುತ್ತಿರುವ ನಕಾರಾತ್ಮಕತೆಯ ಸಂಕೇತವಾಗಿದೆ.. ಇಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ಗಂಟೆ ಮತ್ತು ಶಂಖವನ್ನು ನಿಯಮಿತವಾಗಿ ಬಳಸಬೇಕು.  

3 /6

ದೇವರ ನಾಮವನ್ನು ನಿಯಮಿತವಾಗಿ ಜಪಿಸುವ ಮನೆಗಳಲ್ಲಿ, ದೀಪಗಳನ್ನು ಬೆಳಗಿ, ಮಂತ್ರಗಳನ್ನು ಜಪಿಸುವ ಮನೆಗಳಲ್ಲಿ  ನಕಾರಾತ್ಮಕತೆ ಎಂದಿಗೂ ನೆಲೆಸುವುದಿಲ್ಲ ಎಂದು ಹೇಳಲಾಗುತ್ತದೆ. ಭಗವಂತ ನೆಲೆಸಿರುವ ಮನೆಯಲ್ಲಿ ಋಣಾತ್ಮಕತೆ ದೂರದವರೆಗೆ ಸುಳಿಯುವುದಿಲ್ಲ ಎಂದು ಹೇಳಲಾಗುತ್ತದೆ.  

4 /6

ಮನೆಯ ಯಾವುದೇ ಮೂಲೆಯಲ್ಲಿಯೂ ಕೂಡ  ಕತ್ತಲೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಕೆಲಸದ ಸ್ಥಳ ಮತ್ತು ಕಚೇರಿ ಇತ್ಯಾದಿಗಳಲ್ಲಿ ದೀಪಗಳನ್ನು ಬೆಳಗಿಸಿ. ಈ ಜಾಗಗಳಲ್ಲಿ ದೀರ್ಘಕಾಲ ಕತ್ತಲೆಯಾಗಿ ಉಳಿಯುವುದು ನಕಾರಾತ್ಮಕತೆಗೆ ಕಾರಣವಾಗುತ್ತದೆ. ಆದ್ದರಿಂದ, ಮನೆ ಅಥವಾ ಕಚೇರಿಯ ಯಾವುದೇ ಮೂಲೆಯಲ್ಲಿ ಕತ್ತಲೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ.  

5 /6

ಯಾವಾಗಲು ಕೊಲೆಯಾಗಿರುವ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗುತ್ತದೆ. ಆದ್ದರಿಂದ ಮನೆ ಮತ್ತು ನಿಮ್ಮನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಎಲ್ಲಿ ಶುಚಿತ್ವ ಇರುತ್ತದೆಯೋ ಅಲ್ಲಿ ಋಣಾತ್ಮಕತೆಯಾಗಲೀ ಅಲಕ್ಷ್ಮಿಯಾಗಲೀ ನೆಲೆಸುವುದಿಲ್ಲ.  

6 /6

ರಾತ್ರಿ ಸಮಯದಲ್ಲಿ ಸುಗಂಧಿ ದ್ರವ್ಯಗಳನ್ನು ಬಳಸಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ನಿಮ್ಮ ಕಡೆಗೆ ಹೆಚ್ಚು ಆಕರ್ಷಿತವಾಗುತ್ತವೆ. ಆದ್ದರಿಂದ, ರಾತ್ರಿಯಲ್ಲಿ ಬಲವಾದ ಸುಗಂಧವನ್ನು ಬಳಸುವ ತಪ್ಪನ್ನು ಎಂದಿಗೂ ಮಾಡಬೇಡಿ.