Amruthadhaare serial: ಅಮೃತಧಾರೆ ಸೀರಿಯಲ್ ಪಾರ್ಥ್ ನಿಜಕ್ಕೂ ಯಾರು ಗೊತ್ತಾ? ನೆನಪಿದ್ದಾರ ಅರಸಿ ಸೀರಿಯಲ್ ಸಿದ್ಧಾಂತ್?!

Amruthadhaare Kannada serial Partha: ಜೀ ಕನ್ನಡದ ಜನಪ್ರಿಯ ಧಾರವಾಹಿಗಳಲ್ಲಿ ಒಂದಾದ ಅಮೃತಧಾರೆ ಸದ್ಯ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸಿರೀಯಲ್‌ ಎಂದರೇ ತಪ್ಪಾಗುವುದಿಲ್ಲ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರವಾಹಿಯ ಎಲ್ಲ ಪಾತ್ರಗಳು ಜನರ ಗಮನ ಸೆಳೆದಿವೆ..

1 /5

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸಿರೀಯಲ್‌ ತನ್ನದೇ ಆದ ಪ್ರೇಕ್ಷಕರನ್ನು ಹೊಂದಿದೆ.. ಹಿರಿಯ ಕಲಾವಿದರನ್ನು ಒಳಗೊಂಡ ಈ ಧಾರವಾಹಿ ಹೆಚ್ಚು ಹೆಚ್ಚು ಟ್ವಿಸ್ಟ್‌ಗಳೊಂದಿಗೆ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ..   

2 /5

ಈ ಸಿರೀಯಲ್‌ನಲ್ಲಿ ಸ್ಯಾಂಡಲ್‌ವುಡ್ನ ನಟ ರಾಜೇಶ್‌ ನಟರಂಗ.. ಹಾಗೂ ಫೇಮಸ್‌ ನಟಿ ಛಾಯಾ ಸಿಂಗ್‌ ನಟಿಸಿದಾರೆ.. ಇಬ್ಬರ ಅಭಿನಯಕ್ಕೂ ಪ್ರೇಕ್ಷಕರು ಫಿದಾ ಆಗಿದ್ದಾರೆ..  

3 /5

ಇನ್ನು ಈ ಅಮೃತಧಾರೆ ಸಿರೀಯಲ್‌ನಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ.. ಅದರಲ್ಲಿ ಪಾರ್ಥ ಅವರ ಪಾತ್ರವೂ ಒಂದು.. ಹಾಗಾದ್ರೆ ಈ ಪಾತ್ರಕ್ಕೆ ಜೀವ ತುಂಬಿದವರ ನಿಜವಾದ ಹೆಸರೇನು? ಈ ಮೊದಲು ಯಾವ ಧಾರವಾಹಿಯಲ್ಲಿ ಅವರು ಕಾಣಿಸಿಕೊಂಡಿದ್ದರು? ಇದೆಲ್ಲವನ್ನೂ ಇದೀಗ ತಿಳಿಯೋಣ..  

4 /5

ಈ ಹಿಂದೆ ಜೀ ಕನ್ನಡದಲ್ಲೇ ಪ್ರಸಾರವಾಗುತ್ತಿದ್ದಂತಹ ಅರಸಿ ಧಾರವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟವರು ಪಾರ್ಥ ಅಲಿಯಾಸ್‌ ಕರಣ್‌.. ಈ ಸಿರೀಯಲ್‌ನಲ್ಲಿ ಇವರು ಸಿದ್ಧಾಂತ್‌ ಪಾತ್ರದಲ್ಲಿ ಮಿಂಚಿದ್ದರು.. ವಿಶೇಷ ಏನಪ್ಪಾ ಅಂದ್ರೆ ಇದೇ ಧಾರವಾಹಿ ಮೂಲಕವೇ ರಚಿತಾರಾಮ್‌ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು..   

5 /5

ಕರಣ್‌ ಅವರು ಸದ್ಯ ಅಮೃತಧಾರೆ ಸಿರೀಯಲ್‌ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.. ದೊಡ್ಡ ಮಟ್ಟದ ಯಶಸ್ಸು ಗಳಿಸುತ್ತಿರುವ ಈ ಧಾರವಾಹಿಯಲ್ಲಿ ಅಪೇಕ್ಷಾ ಮತ್ತು ಪಾರ್ಥ ಜೋಡಿ ಕಿರುತೆರೆ ಪ್ರೇಕ್ಷಕರಿಗೆ ಸಖತ್‌ ಇಷ್ಟವಾಗಿದೆ..